
ನಮ್ಮ ಸರಕಾರಕ್ಕೆ ಮಹಾರಾಷ್ಟ್ರ ಜನತೆಯ ಆಶೀರ್ವಾದವಿದೆ! ED, CBIನಿಂದ ಬೆದರಿಸಲಾಗದು: ಉದ್ಧವ್
Team Udayavani, Nov 27, 2020, 5:29 PM IST

ಮುಂಬೈ: ಮಹಾವಿಕಾಸ್ ಅಘಡಿ (ಎಂವಿಎ) ಸರ್ಕಾರವನ್ನು ಇಡಿ, ಸಿಬಿಐ ತನಿಖೆಗಳಿಂದ ಬೆದರಿಸಲಾಗುವುದಿಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ, ಬಿಜೆಪಿ ವಿರುದ್ಧ ನೇರವಾಗಿ ಹರಿಹಾಯ್ದಿದ್ದಾರೆ.
ಮಹಾರಾಷ್ಟ್ರದಲ್ಲಿ ಎಂವಿಎ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉದ್ಧವ್, “ಸಾಮ್ನಾ’ ಸಂಪಾದಕರೂ ಆಗಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಜತೆಗಿನ ಸಂದರ್ಶನದಲ್ಲಿ ಈ ಮಾತುಗಳನ್ನಾಡಿದ್ದಾರೆ.
“ಎಂವಿಎ ಸರ್ಕಾರ, ಮಹಾರಾಷ್ಟ್ರದ ಜನತೆಯ ಆಶೀರ್ವಾದದ ಫಲ. ಇದನ್ನು ಯಾವ ತನಿಖೆಗಳು, ದಾಳಿಗಳಿಂದಲೂ ಬೆದರಿಸಲಾಗದು. ರಾಜ್ಯದಲ್ಲಿ ಬಿಜೆಪಿ ರಾಜಕೀಯ ಹಗೆತನ ಸಾಧಿಸುವುದರಲ್ಲಿ ತಲ್ಲೀನವಾಗಿದೆ. ಇಂಥ ದ್ವೇಷ ರಾಜಕಾರಣಕ್ಕೆ ಯಾವತ್ತೂ ಕೊನೆಯೆಂಬುದಿಲ್ಲ. ಈ ಹಾದಿಯಲ್ಲಿ ಸಾಗಲು ನಮ್ಮಿಂದಾಗುವುದಿಲ್ಲ. ಬಿಜೆಪಿ ಈ ಬಗೆಯ ರಾಜಕೀಯ ವಿಕೃತತೆಯನ್ನು ನಿಲ್ಲಿಸಬೇಕು’ ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ:ದುರಂತ ಅಂತ್ಯ ಕಂಡ ಫಿಲಿಪ್ ಹ್ಯೂಸ್ಗೆ ಉಭಯ ತಂಡಗಳಿಂದ ಗೌರವ
ಕಪ್ಪುಹಣ ದಂಧೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತಂಡ, ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಈ ಘಟನೆ ನಡೆದ ಮರುದಿನವೇ ಉದ್ಧವ್ “ಸಾಮ್ನಾ’ಗೆ ಸಂದರ್ಶನ ನೀಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಜಿ ಕಾನೂನು ಸಚಿವ, ಖ್ಯಾತ ವಕೀಲ ಶಾಂತಿ ಭೂಷಣ್ ಇನ್ನಿಲ್ಲ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ಗೆ ದಾಖಲೆ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ

ಪಿಎಂ ಕೇರ್ಸ್ ಸರ್ಕಾರದ್ದಲ್ಲ, ಸ್ವತಂತ್ರ ದತ್ತಿ ಸಂಸ್ಥೆ!

ಅಪಪ್ರಚಾರಕ್ಕಾಗಿ ಬಿಬಿಸಿಗೆ ಚೀನಾದಿಂದ ಹಣಕಾಸು ನೆರವು? ಬಿಜೆಪಿ ಸಂಸದ ಮಹೇಶ್ ಜೇಠ್ಮಲಾನಿ

ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ಆರೋಪಿ ಶಂಕರ್ ಮಿಶ್ರಾಗೆ ಜಾಮೀನು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
