ಪರಿಷತ್ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಹೊರಟ್ಟಿ ಕರೆತರಲು ಕಸರತ್ತು
Team Udayavani, Mar 11, 2022, 6:59 PM IST
ಬೆಂಗಳೂರು : ಮೂರು ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿದೆ.
ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಅರುಣ್ ಶಹಾಪುರ , ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಹನುಮಂತ ನಿರಾಣಿ, ದಕ್ಷಿಣ ಪದವಿಧರ ಕ್ಷೇತ್ರಕ್ಕೆ ಎಂ.ವಿ.ರವಿಶಂಕರ್ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.
ಬಿಜೆಪಿ ಹೈಕಮಾಂಡ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್ ಕಾಯ್ದಿರಿಸಿದ್ದು, ರಾಜ್ಯ ಬಿಜೆಪಿ ಮೋಹನ್ ಲಿಂಬೆಕಾಯಿ ಹೆಸರು ಕಳುಹಿಸಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಬಿಜೆಪಿಗೆ ಕರೆತರಲು ಕಸರತ್ತು ನಡೆಸಿರುವ ಬಿಜೆಪಿ ನಾಯಕರು ಅವಕಾಶ ಮುಕ್ತವಾಗಿಟ್ಟಿದ್ದಾರೆ.