ಜ್ವರದ ನಡುವೆಯೂ ಪ್ರತಿಭಟನೆಗೆ ಬಂದ ಸಿದ್ದರಾಮಯ್ಯ
Team Udayavani, Jul 26, 2022, 12:25 PM IST
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಜ್ವರದಿಂದ ಬಳಲುತ್ತಿದ್ದು, ಅನಾರೋಗ್ಯದ ಮಧ್ಯೆಯೂ ಪ್ರತಿಭಟನೆಗೆ ಹಾಜರಾಗಿದ್ದಾರೆ.
ಸೋನಿಯಾ ಹಾಗೂ ರಾಹುಲ್ ಗಾಂಧಿಯವರ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಮೌನ ಪ್ರತಿಭಟನೆಗೆ ಅವರು ಕೈಗೆ ಡ್ರಿಪ್ ಹಾಕಿಕೊಂಡೇ ಬಂದು ಗಮನ ಸೆಳೆದರು.
ಇಂದು ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸಿದ್ದರಾಮಯ್ಯಗೆ ಸೂಚನೆ ನೀಡಿದ್ದರು. ಆದರೆ ಗೈರಾದರೆ ಅದಕ್ಕೆ ಬೇರೊಂದು ರೀತಿಯ ಬಣ್ಣ ಕಟ್ಡಬಹುದೆಂಬ ಕಾರಣಕ್ಕೆ ಅನಾರೋಗ್ಯದ ಮದ್ಯೆಯೂ ಆಗಮಿಸಿದ್ದಾರೆ.
ಇದನ್ನೂ ಓದಿ:ಮೊಬೈಲ್ ಕದ್ದು ಗೂಗಲ್ ಪೇ, ಫೋನ್ ಪೇ ಮೂಲಕ ಹಣ ದೋಚುತ್ತಿದ್ದ ಕದೀಮರು