ವಿಷಯ ವಿಶೇಷ: ಗುರುವಿನ ಅಂಗಳಕ್ಕೆ ಜೂಸ್‌


Team Udayavani, Apr 16, 2023, 6:45 AM IST

juice mission

ಭೂಮಿಯಿಂದ ಸಾವಿರಾರು ಮೈಲಿಗಳಷ್ಟು ದೂರವಿರುವ ಬಾಹ್ಯಾಕಾಶ ಹಾಗೂ ಗ್ರಹಗಳ ಅಧ್ಯಯನ ಎಂದಿಗೂ ಕೌತುಕವೇ. ಭೂಮಿಯನ್ನು ಹೊರತುಪಡಿಸಿ ಬೇರೆ ಗ್ರಹಗಳಲ್ಲಿ ಜೀವನ ಸಾಧ್ಯವೋ, ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳು ಹಲವಾರು ಯೋಜನೆಗಳನ್ನು ಕೈಗೊಂಡಿದ್ದಾರೆ. ಇದೀಗ ಸೌರಮಂಡಲದ ಅತೀ ದೊಡ್ಡ ಗ್ರಹವಾದ ಗುರುವಿನ ಅಧ್ಯಯನ ನಡೆಸಲು ವಿಜ್ಞಾನ ಕ್ಷೇತ್ರ ದಾಪುಗಾಲಿರಿಸಿದೆ. ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಗುರು ಗ್ರಹದ ದೊಡ್ಡ ಉಪಗ್ರಹಗಳ (ಚಂದ್ರಗಳ) ಕುರಿತು ತಿಳಿಯಲು ” ಜೂಸ್‌ ” ನೌಕೆಯನ್ನು ಉಡಾವಣೆ ಮಾಡಿದೆ. ಗುರುವಿನ ಮೇಲ್ಮೈನಲ್ಲಿನ ವಾತವರಣ ಹಾಗೂ ಗುರುವಿನ ಜಲಮೂಲಗಳ ಬಗ್ಗೆ “ಜೂಸ್‌” ಮಾಹಿತಿ ಕಲೆಹಾಕಲಿದೆ.

ಸೌರಮಂಡಲದ ಅತೀ ದೊಡ್ಡ ಗ್ರಹವಾದ “ಗುರು’ ಮೂರು ದೈತ್ಯ ಉಪಗ್ರಹಗಳನ್ನು (ಚಂದ್ರರನ್ನು) ಹೊಂದಿದೆ. ಗ್ಯಾನಿಮೇಡ್‌, ಕ್ಯಾಲಿಸ್ಟೋ ಹಾಗೂ ಯುರೋಪಾ. ಈ ಉಪಗ್ರಹಗಳಲ್ಲಿ ಭೂಮಿಯಲ್ಲಿರುವಂತೆ ಸಮುದ್ರಗಳಿರ ಬಹುದು ಹಾಗೂ ಇವುಗಳು ಹಿಮಗಳಿಂದ ಆವೃತವಾಗಿವೆ ಎಂದು ಊಹಿಸಲಾಗಿದ್ದು, ಇದರ ಅಧ್ಯಯನಕ್ಕಾಗಿ ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಜೂಸ್‌ ಮಿಷನ್‌ನನ್ನು ಕೈಗೊಂಡಿದೆ. ಜೂಪಿಟರ್‌ ಐಸಿ ಮೂನ್ಸ್‌ ಎಕ್ಸ್‌ಫ್ಲೋರರ್‌ (ಜೂಸ್‌) ಗುರು ಗ್ರಹ ಹಾಗೂ ಇದರ ಐಸಿ ಮೂನ್ಸ್‌ಗಳನ್ನು ರಿಮೋಟ್‌ ಸೆನ್ಸಿಂಗ್‌, ಜಿಯೋ ಫಿಸಿಕಲ್‌ ಹಾಗೂ ಸಿತು ಉಪಕರಣಗಳಿಂದ ಅಧ್ಯಯನ ನಡೆಸಲಿದೆ.

ಜೀವಿಸಲು ಯೋಗ್ಯವೇ?
ಈ ಹಿಂದೆ ಭೂಮಿಯನ್ನು ಹೊರತುಪಡಿಸಿ ಅನ್ಯ ಗ್ರಹಗಳಲ್ಲಿ ಜೀವಿಗಳ ವಾಸದ ಬಗ್ಗೆ ಬಾಹ್ಯಾಕಾಶ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಇದರಂತೆಯೇ ದೊಡ್ಡ ಗ್ರಹವಾದ ಗುರುವಿನಲ್ಲಿ ಜೀವಿಗಳಿರುವ ಬಗ್ಗೆಯೂ ಅಂದಾಜಿಸಲಾಗಿದೆ. ಭೂಮಿಗಿಂತ ಆರು ಪಟ್ಟು ಹೆಚ್ಚು ಜಲಮೂಲವನ್ನು ಗುರು ಗ್ರಹ ಹೊಂದಿದೆ. ಹಾಗಾಗಿ ಮೈಕ್ರೋಬ್ಸ್ಗಳ ರೂಪದಲ್ಲಿ ಅಲ್ಲಿ ಜೀವಿಗಳು ವಾಸವಿರಬಹುದು ಎಂಬುದು ವಿಜ್ಞಾನಿಗಳ ಊಹೆ. ಗುರುಗ್ರಹದ ಸುತ್ತಮುತ್ತ ಜೀವಿಗಳ ಉಳಿವಿಕೆಗೆ ಅಗತ್ಯವಾದ ಜೈವಿಕ ಅಗತ್ಯಗಳು, ಶಕ್ತಿ ಮೂಲಗಳು ಇರಬಹುದೇ ಎಂದು ಜೂಸ್‌ ಕಂಡುಹಿಡಿಯಲಿದೆ.

ಭೂಮಿಯಿಂದ 400 ಮಿಲಿಯನ್‌
ಮೈಲ್ಸ್‌ಗಳಷ್ಟು ದೂರವಿರುವ ಗುರು ಗ್ರಹವನ್ನು ತಲುಪಲು ಜೂಸ್‌ ನೌಕೆಯು ಬರೋಬ್ಬರಿ ಎಂಟು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಜೂಸ್‌ ಗುರುವಿನ ಕಕ್ಷೆಯನ್ನು ತಲುಪುವ ವೇಳೆಗೆ “ನಾಸಾ’ ಇನ್ನು ಅಂದರೆ 2024ರಲ್ಲಿ ಉಡಾವಣೆ ಮಾಡಬೇಕಾಗಿರುವ “ಯುರೋಪ್‌ ಕ್ಲಿಪರ್‌’ ಅದಾಗಲೇ ಗುರುವಿನ ಕಕ್ಷೆಯನ್ನು ತಲುಪಿರುತ್ತದೆ.

ಮೊದಲ ನೌಕೆ
ಗುರುವಿನ ಕಕ್ಷೆಗೆ 1972ರಲ್ಲಿ ನಾಸಾ ಪಯೋನಿಯರ್‌-10 ನೌಕೆಯನ್ನು ಉಡಾವಣೆಗೊಳಿಸಿತ್ತು. ಇದು ಗುರುವಿನ ಕಕ್ಷೆಗೆ ಹಾರಿದ ಮೊದಲ ನೌಕೆ. ಇದು ಕೇವಲ 640 ದಿನಗಳಲ್ಲಿ ಕಕ್ಷೆ ತಲುಪಿದೆ. ಅನಂತರದಲ್ಲಿ ನಭಕ್ಕೆ ಹಾರಿಸಿದ ಪಯೋನಿಯರ್‌ – 11 ಪಯೋನಿಯರ್‌-10ಕ್ಕಿಂತಲೂ ವೇಗ ವಾಗಿ ಅಂದರೆ ಕೇವಲ 606 ದಿನ ಗಳಲ್ಲಿ ಗುರುವಿನ ಕಕ್ಷೆ ತಲುಪಿದೆ.

ಎಪ್ರಿಲ್‌ 2023ರಲ್ಲಿ ಉಡಾವಣೆಗೊಂಡ ಜೂಸ್‌, 2026ರಲ್ಲಿ ಶುಕ್ರ ಗ್ರಹ ಹಾಗೂ 2029ರಲ್ಲಿ ಭೂಮಿಯ ಕಕ್ಷೆಯಲ್ಲಿ ಎರಡನೇ ಬಾರಿ ಹಾರಾಟ ನಡೆಸಿದ ಅನಂತರ 2031ಕ್ಕೆ ಗುರುವಿನ ಕಕ್ಷೆಯನ್ನು ತಲುಪಲಿದೆ. 2034ರ ವೇಳೆಗೆ ಗುರುವಿನ ಅತೀದೊಡ್ಡ ಗ್ರಹವಾದ ಗ್ಯಾನಿಮೇಡ್‌ನ್ನು ಅಧ್ಯಯನ ಮಾಡಲಿದೆ.

ಉದ್ದೇಶವೇನು?
ಗುರುವಿನ ಉಪಗ್ರಹಗಳ ಅಧ್ಯಯನಕ್ಕಾಗಿಯೇ ಸಿದ್ಧಪಡಿಸಿರುವ ಮೊದಲ ನೌಕೆಯಿದು. ಈ ಗ್ರಹಗಳಲ್ಲಿರುವ ಜಲಮೂಲಗಳ ಕುರಿತು ತನಿಖೆ ನಡೆಸುವಲ್ಲಿ ಈ ಮಿಷನ್‌ ಸಹಾಯ ಮಾಡಲಿದೆ.
ಗುರು ಗ್ರಹದ ಉಗಮ, ಇತಿಹಾಸ ಹಾಗೂ ಅದರ ವಿಕಾಸವನ್ನು ಅರ್ಥೈಸಿಕೊಳ್ಳುವುದು ಈ ಮಿಷನ್‌ನ ಮೂಲ ಉದ್ದೇಶ. ಗ್ರಹಗಳು ಹಾಗೂ ಘಟಕಗಳ ಕಾಲಾಂತರದಲ್ಲಿ ಆಗುವ ಬದಲಾವಣೆಯ ಒಳನೋಟವನ್ನು ನೀಡುತ್ತದೆ ಹಾಗೂ ಈ ಗ್ರಹ ವ್ಯವಸ್ಥೆಯಲ್ಲಿ ವಾಸಿಸಲು ಯೋಗ್ಯವಾಗುವ ಪರಿಸರದ ರಚನೆ ಹೇಗೆ ಎನ್ನುವುದರ ಕುರಿತು ಇದು ಬೆಳಕು ಚೆಲ್ಲುತ್ತದೆ.
ಗುರುವಿನ ಮೂರು ಚಂದ್ರಗಳಲ್ಲಿ ಗ್ಯಾನಿಮೇಡ್‌ನ‌ ಅಧ್ಯಯನಕ್ಕೆ ಪ್ರಾಮುಖ್ಯತೆ ಜಾಸ್ತಿ. ಗುರುವಿನ ಅನಂತರ ಗ್ಯಾನಿಮೇಡ್‌ನ‌ ಕಕ್ಷೆಯಲ್ಲಿ ಇಳಿಯುವ ಜೂಸ್‌, ಗ್ಯಾನಿಮೇಡ್‌ನ‌ ರಚನೆ, ಗುರುತ್ವಾಕರ್ಷಣೆ, ಚಲನೆ, ಆಕಾರದ ಕುರಿತು ಸಂಪೂರ್ಣ ಚಿತ್ರಣ ನೀಡಲಿದೆ.

~ ವಿಧಾತ್ರಿ ಭಟ್‌ ಉಪ್ಪುಂದ

ಟಾಪ್ ನ್ಯೂಸ್

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.