World Cup ಅರ್ಹತಾ ಪಂದ್ಯಾವಳಿ: ಭರ್ಜರಿ ಗೆಲುವು ದಾಖಲಿಸಿದ ಲಂಕಾ, ಒಮಾನ್‌

6 ವಿಕೆಟ್‌ ಹಾರಿಸಿದ ವನಿಂದು ಹಸರಂಗ : ಐರ್ಲೆಂಡ್‌ಗೆ ಆಘಾತವಿಕ್ಕಿದ ಒಮಾನ್‌

Team Udayavani, Jun 20, 2023, 8:00 AM IST

SHREE LANKA

ಬುಲವಾಯೊ: ಐಸಿಸಿ ಏಕದಿನ ವಿಶ್ವಕಪ್‌ ಅರ್ಹತಾ ಕ್ರಿಕೆಟ್‌ ಪಂದ್ಯಾವಳಿಯ ದ್ವಿತೀಯ ದಿನದ ಆಟದಲ್ಲಿ ಶ್ರೀಲಂಕಾ ಮತ್ತು ಒಮಾನ್‌ ತಂಡಗಳು ಭರ್ಜರಿ ಜಯ ಸಾಧಿಸಿವೆ. ಲಂಕಾ ಪಡೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ವಿರುದ್ಧ 175 ರನ್‌ ಅಂತರದ ಜಯಭೇರಿ ಮೊಳಗಿಸಿದರೆ, ಒಮಾನ್‌ 5 ವಿಕೆಟ್‌ಗಳಿಂದ ಐರ್ಲೆಂಡ್‌ಗೆ ಆಘಾತವಿಕ್ಕಿತು.
ಬುಲವಾಯೊದಲ್ಲಿ ನಡೆದ “ಬಿ’ ವಿಭಾಗದ ಮೇಲಾಟದಲ್ಲಿ ಶ್ರೀಲಂಕಾ 6 ವಿಕೆಟಿಗೆ 355 ರನ್‌ ರಾಶಿ ಹಾಕಿತು. ಅಗ್ರ ಕ್ರಮಾಂಕದ ನಾಲ್ವರೂ ಅಮೋಘ ಬ್ಯಾಟಿಂಗ್‌ ಪ್ರದರ್ಶನವಿತ್ತರು.

ಎಲ್ಲರೂ ಅರ್ಧ ಶತಕ ದಾಖಲಿಸಿದರು. ಪಥುಮ್‌ ನಿಸ್ಸಂಕ 57, ದಿಮುತ್‌ ಕರುಣಾರತ್ನೆ 52, ಕುಸಲ್‌ ಮೆಂಡಿಸ್‌ ಸರ್ವಾಧಿಕ 78 ಮತ್ತು ಸಮರವಿಕ್ರಮ 73 ರನ್‌ ಹೊಡೆದರು. ಚರಿತ ಅಸಲಂಕ ಔಟಾಗದೆ 48 ರನ್‌ ಮಾಡಿದರು. ಮೊದಲ ವಿಕೆಟಿಗೆ 95 ರನ್‌, 3ನೇ ವಿಕೆಟಿಗೆ 105 ರನ್‌ ಒಟ್ಟುಗೂಡಿತು.

ಲಂಕಾದ ದೊಡ್ಡ ಮೊತ್ತಕ್ಕೆ ಜವಾಬು ನೀಡಲು ಯುಎಇಯಿಂದ ಸಾಧ್ಯವಾಗಲಿಲ್ಲ. ಅದು ವನಿಂದು ಹಸರಂಗ ಅವರ ಸ್ಪಿನ್‌ ಆಕ್ರಮಣಕ್ಕೆ ತತ್ತರಿಸಿತು. ಹಸರಂಗ 24 ರನ್‌ ನೀಡಿ 6 ವಿಕೆಟ್‌ ಹಾರಿಸಿದರು. ಇದು ಏಕದಿನದಲ್ಲಿ ಅವರ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ.

1996ರ ಚಾಂಪಿಯನ್‌ ತಂಡವಾದ ಶ್ರೀಲಂಕಾ ಈಗ ವಿಶ್ವಕಪ್‌ ಅರ್ಹತಾ ಕೂಟದಲ್ಲಿ ಆಡಬೇಕಾದ ಸಂಕಟಕ್ಕೆ ಸಿಲುಕಿದೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-6 ವಿಕೆಟಿಗೆ 355 (ಮೆಂಡಿಸ್‌ 78, ಸಮರವಿಕ್ರಮ 73, ನಿಸ್ಸಂಕ 57, ಕರುಣಾರತ್ನೆ 52, ಅಸಲಂಕ ಔಟಾಗದೆ 48, ಅಲಿ ನಾಸೀರ್‌ 44ಕ್ಕೆ 2). ಯುಎಇ-39 ಓವರ್‌ಗಳಲ್ಲಿ 180 (ಮೊಹಮ್ಮದ್‌ ವಾಸೀಮ್‌ 39, ವೃತ್ಯ ಅರವಿಂದ್‌ 39, ಅಲಿ ನಾಸೀರ್‌ 34, ರಮೀಜ್‌ ಶಹಜಾದ್‌ 26, ಹಸರಂಗ 24ಕ್ಕೆ 6). ಪಂದ್ಯಶ್ರೇಷ್ಠ: ವನಿಂದು ಹಸರಂಗ.

ಒಮಾನ್‌ ವಿಜಯೋತ್ಸವ
ದಿನದ ಇನ್ನೊಂದು ಪಂದ್ಯದಲ್ಲಿ ಒಮಾನ್‌ ಭಾರೀ ಏರುಪೇರಿನ ಫ‌ಲಿತಾಂಶ ದಾಖಲಿಸಿತು. ಬಲಿಷ್ಠ ಐರ್ಲೆಂಡ್‌ ಪೇರಿಸಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ಅದು 5 ವಿಕೆಟ್‌ಗಳಿಂದ ಗೆದ್ದು ಬಂದಿತು. ಇದು ಕೂಡ “ಬಿ’ ವಿಭಾಗದ ಪಂದ್ಯವಾಗಿತ್ತು.

ಐರ್ಲೆಂಡ್‌ 7 ವಿಕೆಟ್‌ ನಷ್ಟಕ್ಕೆ 281 ರನ್‌ ಗಳಿಸಿದರೆ, ಒಮಾನ್‌ 48.1 ಓವರ್‌ಗಳಲ್ಲಿ 5 ವಿಕೆಟಿಗೆ 285 ರನ್‌ ಬಾರಿಸಿತು. ಆರಂಭಕಾರ ಜತೀಂದರ್‌ ಸಿಂಗ್‌ (1) ಅವರನ್ನು ಬೇಗನೇ ಕಳೆದುಕೊಂಡ ಬಳಿಕ ಒಮಾನ್‌ ಬ್ಯಾಟರ್ ಕ್ರೀಸ್‌ ಆಕ್ರಮಿಸಿಕೊಂಡು ಆಡಿದರು. ಕಶ್ಯಪ್‌ ಪ್ರಜಾಪತಿ 72, ಆಕಿಬ್‌ ಇಲ್ಯಾಸ್‌ 52, ನಾಯಕ ಜೀಶನ್‌ ಮಕ್ಸೂದ್‌ 59, ಮೊಹಮ್ಮದ್‌ ನದೀಂ ಔಟಾಗದೆ 46 ರನ್‌ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು.

ಐರ್ಲೆಂಡ್‌ ಪರ ಜಾರ್ಜ್‌ ಡಾಕ್ರೆಲ್‌ ಔಟಾಗದೆ 91 ರನ್‌ ಬಾರಿಸಿದರು. ಹ್ಯಾರಿ ಟೆಕ್ಟರ್‌ ಅವರಿಂದ ಅರ್ಧ ಶತಕ ದಾಖಲಾಯಿತು (52).

ಸಂಕ್ಷಿಪ್ತ ಸ್ಕೋರ್‌
ಐರ್ಲೆಂಡ್‌-7 ವಿಕೆಟಿಗೆ 281 (ಡಾಕ್ರೆಲ್‌ ಔಟಾಗದೆ 91, ಹ್ಯಾರಿ ಟೆಕ್ಟರ್‌ 52, ಟ್ಯುಕರ್‌ 26, ಬಿಲಾಲ್‌ ಖಾನ್‌ 64ಕ್ಕೆ 2, ಫ‌ಯಾಜ್‌ ಬಟ್‌ 65ಕ್ಕೆ 2). ಒಮಾನ್‌-48.1 ಓವರ್‌ಗಳಲ್ಲಿ 5 ವಿಕೆಟಿಗೆ 285 (ಪ್ರಜಾಪತಿ 72, ಮಕ್ಸೂದ್‌ 59, ಇಲ್ಯಾಸ್‌ 52, ನದೀಂ ಔಟಾಗದೆ 46, ಜೋಶುವ ಲಿಟ್ಲ 47ಕ್ಕೆ 2, ಮಾರ್ಕ್‌ ಅಡೈರ್‌ 47ಕ್ಕೆ 2). ಪಂದ್ಯಶ್ರೇಷ್ಠ: ಜೀಶನ್‌ ಮಕ್ಸೂದ್‌.

ವಿಲಿಯಮ್ಸನ್‌ ಶತಕದ ದಾಖಲೆ
ರವಿವಾರದ ಆರಂಭಿಕ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ 8 ವಿಕೆಟ್‌ಗಳಿಂದ ನೇಪಾಲವನ್ನು ಮಣಿಸಿತು. ಸೀನ್‌ ವಿಲಿಯಮ್ಸನ್‌ ಅವರ ವೇಗದ ಶತಕ ಜಿಂಬಾಬ್ವೆ ಸರದಿಯ ಆಕರ್ಷಣೆ ಆಗಿತ್ತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನೇಪಾಲ 8 ವಿಕೆಟಿಗೆ 290 ರನ್ನುಗಳ ಸವಾಲಿನ ಮೊತ್ತವನ್ನೇ ಪೇರಿಸಿತು. ಜಿಂಬಾಬ್ವೆ 44.1 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 291 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ನಾಯಕ ಕ್ರೆಗ್‌ ಇರ್ವಿನ್‌ ಮತ್ತು ಸೀನ್‌ ವಿಲಿಯಮ್ಸ್‌ ಅಜೇಯ ಶತಕ ಹೊಡೆದು ತವರಿನ ವೀಕ್ಷಕರನ್ನು ರಂಜಿಸಿದರು. ಇವರಿಂದ ಮುರಿಯದ 3ನೇ ವಿಕೆಟಿಗೆ 164 ರನ್‌ ಒಟ್ಟುಗೂಡಿತು.

ಕ್ರೆಗ್‌ ಇರ್ವಿನ್‌ ಅವರದು ಅಜೇಯ 121 ರನ್‌ ಕೊಡುಗೆ. 128 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ, 1 ಸಿಕ್ಸರ್‌ ಸೇರಿತ್ತು.

ಸೀನ್‌ ವಿಲಿಯಮ್ಸನ್‌ ಗಳಿಕೆ ಅಜೇಯ 102 ರನ್‌. ಇವರ ಸೆಂಚುರಿ ಕೇವಲ 70 ಎಸೆತಗಳಲ್ಲಿ ದಾಖಲಾಯಿತು. ಇದು ಜಿಂಬಾಬ್ವೆ ಪರ ದಾಖಲಾದ ಅತೀ ವೇಗದ ಶತಕ. ಇದಕ್ಕೂ ಮೊದಲು ಬ್ರೆಂಡನ್‌ ಟೇಲರ್‌ 79 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದು ದಾಖಲೆಯಾಗಿತ್ತು.

ನೇಪಾಲದ ಆರಂಭ ಅಮೋಘವಾಗಿತ್ತು. ಕುಶಲ್‌ ಭುರ್ಟೆಲ್‌ (99) ಮತ್ತು ಆಸಿಫ್ ಶೇಖ್‌ (66) ಮೊದಲ ವಿಕೆಟಿಗೆ 31.5 ಓವರ್‌ಗಳಿಂದ 171 ರನ್‌ ಬಾರಿಸಿದರು. ಕುಶಲ್‌ ಕೇವಲ ಒಂದು ರನ್ನಿನಿಂದ ಶತಕ ತಪ್ಪಿಸಿಕೊಳ್ಳಬೇಕಾಯಿತು.

ಯುಎಸ್‌ಎಗೆ ವೀರೋಚಿತ ಸೋಲು
ದಿನದ ಇನ್ನೊಂದು ಪಂದ್ಯದಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಉತ್ತಮ ಪ್ರದರ್ಶನ ನೀಡಿಯೂ ವೆಸ್ಟ್‌ ಇಂಡೀಸ್‌ಗೆ 39 ರನ್ನುಗಳಿಂದ ಶರಣಾಯಿತು. ಕೆರಿಬಿಯನ್‌ ಪಡೆಯನ್ನು 49.3 ಓವರ್‌ಗಳಲ್ಲಿ 297ಕ್ಕೆ ಆಲೌಟ್‌ ಮಾಡಿದ್ದು ಯುಎಸ್‌ಎ ತಂಡದ ಬೌಲಿಂಗ್‌ ಸಾಹಸಕ್ಕೆ ಸಾಕ್ಷಿಯಾಯಿತು. ಸೌರಭ್‌ ನೇತ್ರಾವಲ್ಕರ್‌, ಕೈಲ್‌ ಫಿಲಿಪ್ಸ್‌ ಮತ್ತು ಸ್ಟೀವನ್‌ ಟೇಲರ್‌ ತಲಾ 3 ವಿಕೆಟ್‌ ಉರುಳಿಸಿದರು.

ಚೇಸಿಂಗ್‌ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟರ್‌ ಗಜಾನಂದ ಸಿಂಗ್‌ ಅಜೇಯ 101 ರನ್‌ ಬಾರಿಸಿ ಹೋರಾಟ ಸಂಘಟಿಸಿದರೂ ಪ್ರಯೋಜನವಾಗಲಿಲ್ಲ (109 ಎಸೆತ, 8 ಬೌಂಡರಿ, 2 ಸಿಕ್ಸರ್‌). ಅಮೆರಿಕನ್‌ ಪಡೆ 7ಕ್ಕೆ 258 ರನ್‌ ಮಾಡಲಷ್ಟೇ ಶಕ್ತವಾಯಿತು.

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.