ಸಿಎಂ ಬದಲಾದರೆ ಸರ್ಕಾರ ಉಳಿಯುತ್ತೆ ಎಂಬುದು ಊಹಾಪೋಹ: ದಿನೇಶ್ ಗುಂಡೂರಾವ್
Team Udayavani, Jul 17, 2019, 3:58 PM IST
ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾದರೆ ಸರ್ಕಾರ ಉಳಿಯುತ್ತದೆ ಅನ್ನೋದು ಕೇವಲ ಊಹಾಪೋಹ. ನಾವು ಸರ್ಕಾರ ಉಳಿಸುವ ಹೋರಾಟಕ್ಕೆ ಸಿದ್ದರಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕರ ಅನರ್ಹತೆ ವಿಚಾರ ಸ್ಪೀಕರ್ ಮುಂದೆ ಅರ್ಜಿ ಇದೆ. ರಾಜ್ಯಪಾಲರಿಗೆ ಸಲ್ಲಿಸಿರುವ ಅರ್ಜಿಗೂ, ನಮ್ಮ ದೂರಿಗೂ ಇಂದಿನ ಸುಪ್ರೀಂ ತೀರ್ಪಿಗೂ ಸಂಬಂಧ ಇಲ್ಲ ಎಂದರು.
ರಾಜೀನಾಮೆ ಅಂಗೀಕಾರ ಮಾಡುವುದಕ್ಕೂ ಮೊದಲು ಅವರು ರಾಜ್ಯಪಾಲರ ಬಳಿ ಹೋಗಿದ್ದಾರೆ. ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದಾರೆ. ಇದರಿಂದಲೇ ಅತೃಪ್ತ ಶಾಸಕರ ಹುನ್ನಾರ ಏನು ಎಂದು ತಿಳಿಯುತ್ತದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷೆ ಆಗಬೇಕು ಸದನಕ್ಕೆ ಹಾಜರಾಗುವುದು ಬಿಡುವುದು ಅತೃಪ್ತ ಶಾಸಕರಿಗೆ ಬಿಟ್ಟದ್ದು ಎಂದು ಸುಪ್ರೀಂ ಹೇಳಿದೆ ಎಂದರು.