ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಮಲ್ಲಿಗೆ ಸಮರ್ಪಣೆ
Team Udayavani, Mar 28, 2019, 12:19 PM IST
ಶಯನೋತ್ಸವದಲ್ಲಿ ಸಿಂಹರೂಢಳಾಗಿ ಶ್ರೀ ದುರ್ಗಾಪರಮೇಶ್ವರೀ ದೇವಿ.
ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಂಗಳವಾರ ನಡೆದ ಹಗಲು ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀದೇವಿ ಶಯನೋತ್ಸವಕ್ಕೆ ಭಕ್ತರು ಚೆಂಡು ಮಲ್ಲಿಗೆ ಹೂವನ್ನು ಸಮರ್ಪಿಸಿ ತಮ್ಮ ಸೇವೆಯನ್ನು ಸಲ್ಲಿಸಿದರು.
ಸುಮಾರು 70 ಸಾವಿರಕ್ಕೂ ಅಧಿಕ ಭಕ್ತರು ಹೂವಿನ ಸೇವೆ ನೆರವೇರಿಸಿದರು. ಈ ಸೇವೆಯು ಪ್ರತಿಯೊಬ್ಬ ಭಕ್ತರ ನೆಮ್ಮದಿಗಾಗಿ ದೇವಿಗೆ ಹೂ ಸಮರ್ಪಿಸುವುದು ಅನಾದಿಕಾದಿಂದಲೂ ವಾಡಿಕೆಯ ರೂಪದಲ್ಲಿ ನಡೆದು ಬಂದಿದೆ. ಮಾಗಣೆಯ 32 ಗ್ರಾಮಗಳಿಗೂ ವ್ಯಾಪ್ತಿಯ ಜನರು ಜಾತಿ ಮತಗಳ ಅಂತರವಿಲ್ಲದೆ ಸೇವೆಸಲ್ಲಿಸುವುದು ವಿಶೇಷ.
ತಡರಾತ್ರಿಯವರೆಗೂ ಸ್ವೀಕರಿಸಿದ ಮಲ್ಲಿಗೆ ಹೂವನ್ನು ದೇವಿಯ ಗರ್ಭ ಗುಡಿಯೊಳಗೆ ಹರಡಿ ಬಿಡಿಸಲಾಗು ವುದು. ಅನಂತರ ಕವಾಟ ಬಂಧನ ಶಯನೋತ್ಸವ ನಡೆಯುತ್ತದೆ. ಬುಧವಾರ ರಥೋತ್ಸವದಂದು ಬೆಳಿಗ್ಗೆ ಕವಾಟೋದ್ಘಾಟನೆ ಕಾರ್ಯಕ್ರಮ ವಿಶೇಷ ಪೂಜೆಯೊಂದಿಗೆ ನಡೆದು ಸ್ವೀಕರಿಸಿದ ಮಲ್ಲಿಗೆಯನ್ನು ಪ್ರಸಾದ ರೂಪದಲ್ಲಿ ಸಮರ್ಪಿಸಿದವರಿಗೆ ಅಲ್ಲದೆ ಇತರ ಭಕ್ತರಿಗೂ ವಿತರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ