ಚೆರ್ವತ್ತೂರು-ಮಂಗಳೂರು: ವಿದ್ಯುತ್‌ ರೈಲು ಓಡಿಸಲು ಅನುಮತಿ


Team Udayavani, Mar 25, 2017, 4:55 PM IST

24ksde7.jpg

ಕಾಸರಗೋಡು: ಮಹತ್ವಾ ಕಾಂಕ್ಷೆಯ ವಿದ್ಯುತ್‌ ರೈಲು ಗಾಡಿಯನ್ನು ಚೆರ್ವತ್ತೂರಿನಿಂದ ಮಂಗಳೂರಿಗೆ ಓಡಿಸಲು ಸುರಕ್ಷಾ ಕಮಿಷನರ್‌ ಅನುಮತಿ ನೀಡಿದ್ದಾರೆ.

ದಕ್ಷಿಣ ವಲಯ ಸರ್ಕಲ್‌ ಸುರಕ್ಷಾ ಕಮಿಷನರ್‌ ಕೆ.ಎ. ಮನೋಹರನ್‌ ವಿದ್ಯುತ್‌ ರೈಲು ಗಾಡಿ ಓಡಿಸಲು ಅನುಮತಿ ನೀಡಿದ್ದು  ವಿದ್ಯುತ್‌ ಸಂಪರ್ಕ ಅಳವಡಿಸಿದ ಈ ಹಳಿಯಲ್ಲಿ ಪ್ರಯಾಣಿಕರ ಹಾಗೂ ಸರಕು ರೈಲು ಗಾಡಿಗಳನ್ನು ಓಡಿಸಬಹುದು. ಪ್ರಸ್ತುತ ಚೆರ್ವತ್ತೂರು ರೈಲ್ವೇ ಸಬ್‌ ಸ್ಟೇಶನ್‌ನಿಂದ ವಿದ್ಯುತ್‌ ಪಡೆದು ರೈಲು ಗಾಡಿಯನ್ನು ಓಡಿಸಬಹುದಾಗಿದೆ.

ಚೆರ್ವತ್ತೂರಿನಿಂದ ವಿದ್ಯುತ್‌ ಪಡೆಯಲು ಒಂದು ಮಿತಿಯಿದೆ. ಈ ಕಾರಣದಿಂದ ಉಪ್ಪಳ ಸಬ್‌ಸ್ಟೇಶನ್‌ ಶೀಘ್ರವೇ ಪೂರ್ತಿಗೊಳಿಸಬೇಕೆಂದು ಸುರಕ್ಷಾ ಕಮಿಷನರ್‌ ಅನುಮತಿ ಪತ್ರದೊಂದಿಗೆ ಸೂಚಿಸಿದ್ದಾರೆ. ವಿದ್ಯುತ್‌ ಬಳಸಿ ರೈಲು ಓಡಿಸಲು ಅನುಮತಿ ನೀಡಿ ರುವುದರಿಂದಾಗಿ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಮಂಗಳೂರು ವರೆಗೆ ಎಂಜಿನ್‌ ಬದಲಾಯಿಸದೆ ರೈಲು ಗಾಡಿಯನ್ನು ಓಡಿಸಬಹುದಾಗಿದೆ.

ಶೋರ್ನೂರಿನಿಂದ ಮಂಗಳೂರು ವರೆಗಿನ 315 ಕಿ.ಮೀಟರ್‌ ನೀಳದ ರೈಲು ಹಳಿಯಲ್ಲಿ ಚೆರ್ವತ್ತೂರು -ಮಂಗಳೂರು ಅಂತಿಮ ಹಂತದಲ್ಲಿ ವಿದ್ಯುದೀಕರಿಸಲಾಗಿತ್ತು. 2015ರ ಮಾರ್ಚ್‌ನ‌ಲ್ಲಿ 84 ಕಿ.ಮೀ. ನೀಳದ ಶೋರ್ನೂರು – ಕಲ್ಲಾಯಿ ವಿದ್ಯುತ್‌ ಹಳಿಯಲ್ಲಿ ವಿದ್ಯುತ್‌ ರೈಲ್ವೇ ಕಮಿಷನ್‌ ಅನುಮತಿ ನೀಡಿತ್ತು. ಕಲ್ಲಾಯಿಯಿಂದ ಚೆರ್ವತ್ತೂರು ವರೆಗಿನ 140 ಕಿ. ಮೀ. ನೀಳದ ವಿದ್ಯುತ್‌ ರೈಲು ಹಳಿ ಯಲ್ಲಿ ರೈಲು ಗಾಡಿ ಓಡಿಸಲು 2016ರ ಮಾರ್ಚ್‌ ನಲ್ಲಿ ಕಮಿಷನ್‌ ಮಾಡಲಾ ಗಿತ್ತು. ಈ ಹಳಿಯಲ್ಲಿ ರೈಲು ಓಡಿಸಲು ಅನುಮತಿ ನೀಡಿದ್ದರೂ ಕಣ್ಣೂರು ತನಕ ಮಾತ್ರವೇ ವಿದ್ಯುತ್‌ ರೈಲು ಓಡಿಸ ಲಾಗಿತ್ತು. ಪಯ್ಯನ್ನೂರಿನ ವರೆಗೆ ಸರಕು ರೈಲು ಗಾಡಿಯನ್ನು ಓಡಿಸಲಾಗಿತ್ತು.

ಕೆಲವು ದಿನಗಳ ಹಿಂದೆ ಶೊರ್ನೂರು – ಮಂಗಳೂರು ವಿದ್ಯುತ್‌ ಹಳಿಯಲ್ಲಿ ಪರೀಕ್ಷಾರ್ಥ ರೈಲು ಗಾಡಿಯನ್ನು ಓಡಿಸಲಾಗಿತ್ತು. ಟ್ರಯಲ್‌ ರೈಲು ಓಡಾಟ ಯಶಸ್ವಿಯಾಗಿತ್ತು.
 

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.