ಅಪಾಯದ ಸ್ಥಿತಿಯಲ್ಲಿ ಚಂದ್ರಗಿರಿ ಸೇತುವೆ ತಡೆಗೋಡೆ
Team Udayavani, Jun 17, 2019, 5:19 AM IST
ಕಾಸರಗೋಡು: ಜಿಲ್ಲೆಯ ಅತೀ ದೊಡ್ಡ ಸೇತುವೆ ಚಂದ್ರಗಿರಿ ಸೇತುವೆಯ ತಡೆಗೋಡೆ ಹಾನಿಗೊಂಡಿದ್ದು, ಅದನ್ನು ರಿಪೇರಿ ಮಾಡುವ ಬದಲು ತಗಡುಶೀಟು ಇರಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸುಮ್ಮನಾಗಿದ್ದರು.
ಆದರೆ ಇದೀಗ ಗಾಳಿ ಮಳೆಗೆ ಸೇತುವೆಯ ತಡೆಗೋಡೆಗೆ ಇರಿಸಿದ್ದ ತಗಡು ಶೀಟು ಕಳಚಿ ಹೋಗಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ.
ಸೇತುವೆಯ ಮತ್ತೂಂದು ಭಾಗದ ತಡೆಗೋಡೆಗೂ ಶೀಟು ಇರಿಸಿದ ಪರಿಣಾಮ ತಡೆಗೋಡೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇದರಿಂದ ಸ್ಥಳೀಯರು ಮುಂದಾಗುವ ಅಪಾಯದ ಬಗ್ಗೆ ಭಯಭೀತರಾಗಿದ್ದಾರೆ.
ಈ ರಸ್ತೆಯನ್ನು ಕರಾವಳಿ ರಸ್ತೆ ಅಭಿವೃದ್ಧಿ ನಿಗಮವು ನಿರ್ಮಾಣ ಮಾಡಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಸೇತುವೆಯ ತಡೆಗೋಡೆಗೆ ವಾಹನಗಳು ಡಿಕ್ಕಿ ಹೊಡೆದು ಹಾನಿಗೊಂಡಿದೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳು ಸೇತುವೆಯ ತಡೆಗೋಡೆಯನ್ನು ಪುನರ್ ನಿರ್ಮಾಣ ಮಾಡುವ ಕ್ರಮವನ್ನು ಕೈಗೊಂಡಿಲ್ಲ. ಸೇತುವೆಯ ಇಕ್ಕೆಲಗಳಲ್ಲಿರುವ ತಡೆಗೋಡೆಗೆ ತಗಡು ಶೀಟು ಇರಿಸಿರುವ ಕ್ರಮವನ್ನು ಸ್ಥಳೀಯರು ಖಂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ