ಸೀಯಾಳ ಅಭಿಷೇಕಕ್ಕೊಲಿದ ಮುಕ್ಕಣ್ಣ….ಮಳೆ ಸುರಿಸಿ ತಂಪಾಗಿಸಿದ ಇಳೆಯನ್ನ….


Team Udayavani, May 21, 2019, 6:10 AM IST

siyala-abisheka

ಬದಿಯಡ್ಕ: ಕಾಸರಗೋಡು ನೆಟ್ಟಣಿಗೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ಇಳೆಗೆ ಮಳೆಗಾಗಿ ಸೀಯಾಳದಿಂದ ವಿಶೇಷ ರುದ್ರಾಭಿಷೇಕ ಮಾಡಿ ಇಪ್ಪತ್ನಾಲ್ಕು ಗಂಟೆಗಳೊಳಗೆ ಜಿಲ್ಲೆಯಾದ್ಯಂತ ಮಳೆಸುರಿಸಿ ತನ್ನ ಭಕ್ತರಿಗೆ ನೆಮ್ಮದಿಯನ್ನು ಕರುಣಿಸಿದ ಮುಕ್ಕಣ್ಣನ ಮಹಿಮೆಗೆ ಭಕ್ತಾದಿಗಳು ಕೃತಾರ್ಥರಾದರು.

ಐತಿಹ್ಯಪೂರ್ಣವಾದ ಕ್ಷೇತ್ರ ಎಂದೇ ಖ್ಯಾತಿವೆತ್ತ ಶ್ರೀಕ್ಷೇತ್ರವು ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಕಾರಣಿಕ ಕ್ಷೇತ್ರ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಜಾಂಬ್ರಿ ಗುಹಾಪ್ರವೇಶ ಈ ಕ್ಷೇತ್ರದ ಇನ್ನೊಂದು ವಿಶೇಷತೆ. ಮಾತ್ರವಲ್ಲದೆ ಅತಿರುದ್ರ ಮಹಾಯಾಗವೂ ಇಲ್ಲಿ ಸಂಪನ್ನಗೊಂಡಿದೆ. ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಪರಮಶಿವನ ಸನ್ನಿಧಿ. ಇಲ್ಲಿ ಸಮರ್ಪಣ ಭಾವದಿಂದ ಪ್ರಾರ್ಥಿಸಿ ಸೀಯಾಳಾಭಿಷೇಕ ಮಾಡಿದಲ್ಲಿ ವರುಣನ ಕೃಪೆಯಾಗುತ್ತದೆ ಎಂಬ ನಂಬಿಕೆ ಸುಳ್ಳಾಗಲಿಲ್ಲ.

ಸುಡು ಬೇಸಗೆಯಲ್ಲಿ ಕೆರೆ, ಬಾವಿ ಬರಡಾಗಿ ಬೆಂದು ನೊಂದ ಜನತೆ ಒಟ್ಟಾಗಿ ಜಟಾಧಾರಿಯ ಮೊರೆ ಹೋಗಿದ್ದಾರೆ.

ಭಕ್ತಿಯಿಂದ ಪ್ರಾರ್ಥಿಸಿದಾಗ ತನ್ನ ಜಡೆಯಿಂದ ಗಂಗಾಮಾತೆಯನ್ನು ಧರೆಗಿಳಿಸಿ ಭಕ್ತಸಮೂಹಕ್ಕೆ ತಂಪೆರೆದ ಮಹಾಲಿಂಗೇಶ್ವರ. ಯಾವುದೇ ಕಷ್ಟ ಬಂದಾಗ ಜನರು ಮೊದಲು ಶರಣಾಗುವುದು ಮಹಾಲಿಂಗೇಶ್ವರನಿಗೆ.

ಎಲ್ಲ ಕಷ್ಟಗಳು ನೀಗಿ ಊರಿಗೆ ಸುಭಿಕ್ಷೆ ನೀಡುವ ನಂಬಿಕೆ, ಭಯ, ಭಕ್ತಿ ಭಕ್ತರಲ್ಲಿದೆ. ನೂರಾರು ಭಕ್ತರು ಅಭಿಷೇಕಕ್ಕಾಗಿ ಶ್ರೀಕ್ಷೇತ್ರಕ್ಕೆ ಸೀಯಾಳ ಸಮರ್ಪಿಸಿದರು.

ಹುರಿಹಗ್ಗ ಹರಕೆ
ಉಬ್ಬಸ ರೋಗದಿಂದ ಮುಕ್ತರಾಗಲು ಭಕ್ತರು ಭಕ್ತಿಯಿಂದ ಬಾವಿಗೆ ಹುರಿಹಗ್ಗವನ್ನು ಸಮರ್ಪಿಸುವುದು ಇಲ್ಲಿನ ವಿಶೇಷ ಹರಕೆ. ಕೇರಳ ಹಾಗೂ ಕರ್ನಾಟಕದ ಅಸಂಖ್ಯ ಭಕ್ತರು ಹಗ್ಗ ಸಮರ್ಪಿಸಿ ರೋಗಮುಕ್ತರಾಗಿದ್ದಾರೆ. ಮಾಂಗಲ್ಯ ಭಾಗ್ಯ ಪ್ರಾಪ್ತಿಗಾಗಿ ದೇವರಿಗೆ ತುಪ್ಪ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರೆ ಉತ್ತಮ ಬಾಂಧವ್ಯ ಕೂಡಿ ಬಂದು ಮದುವೆ ಭಾಗ್ಯ ಕೈಗೂಡುತ್ತದೆ.
-ರಾಮಪ್ರಸಾದ ಕೇಕುಣ್ಣಾಯ, ದೇವಸ್ಥಾನದ ಅರ್ಚಕರು.

ಪೂರೈಕೆಗೆ ಕ್ರಮ
ಭಕ್ತರ ಇಷ್ಟಾರ್ಥಗಳನ್ನು ಸಕಾಲದಲ್ಲಿ ಸಿದ್ಧಿಸುವಂತೆ ಮಾಡುವ ಮಹಾಲಿಂಗೇಶ್ವರ ಈ ಊರ ಜನರ ರಕ್ಷಕರಾಗಿದ್ದು ಭಕ್ತರ ಭಕ್ತಿಗೆ ಕರುಣೆಯ ಮಳೆ ಸುರಿಸುವ ಕರುಣಾಮಯಿ. ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಈ ಕ್ಷೇತ್ರವು ಐತಿಹ್ಯಪೂರ್ಣವಾದ ಹಿನ್ನೆಲೆಯಿರುವ ಅಪರೂಪದ ಕ್ಷೇತ್ರಗಳಲ್ಲಿ ಒಂದಾಗಿದೆ.

– ನವನೀತಪ್ರಿಯ ಕೈಪಂಗಳ, ನೆಟ್ಟಣಿಗೆ, ಜೋತಿಷಿ

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.