Crime News ಕಾಸರಗೋಡು ಅಪರಾಧ ಸುದ್ದಿಗಳು
Team Udayavani, Jan 20, 2024, 8:36 PM IST
ಅಪಘಾತ: ಸೇನೆಯ ಅಧಿಕಾರಿ ಸಾವು
ಕಾಸರಗೋಡು: ಗುಜರಾತ್ನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಭಾರತೀಯ ವಾಯು ಪಡೆಯ ಅಧಿಕಾರಿ ನೀಲೇಶ್ವರ ಪಳ್ಳಿಕೆರೆ ಲಕ್ಷಿ$¾àನಾರಾಯಣ ದೇವಸ್ಥಾನ ಸಮೀಪದ ನಿವಾಸಿ ದಾಮೋದರನ್ ಅವರ ಪುತ್ರ ಉಣ್ಣಿ ದಾಮೋದರನ್(41) ಸಾವಿಗೀಡಾದರು.ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ದುರಂತ ಸಂಭವಿಸಿತು.
ವೃದ್ಧೆಯ ಚಿನ್ನದ ಸರ ಅಪಹರಣ
ಕಾಸರಗೋಡು: ಜಾತ್ರೆ ವೀಕ್ಷಿಸಿ ಮನೆಗೆ ಮರಳುತ್ತಿದ್ದಾಗ ವೃದ್ಧೆಯ ಕತ್ತಿನಿಂದ ಬೈಕ್ನಲ್ಲಿ ಬಂದ ತಂಡವೊಂದು ಚಿನ್ನದ ಸರ ಅಪಹರಿಸಿ ಪರಾರಿಯಾದ ಘಟನೆ ನಡೆದಿದೆ.
ಮಡಿಕೈ ಕಾಲಿಚ್ಚಾಂಪೊದಿ ಪುದುಚೇರಿ ನಿವಾಸಿ ಕೆ.ಪಿ. ದೇವಕಿ (67) ಮಾದೋತ್ನ ದೇವಸ್ಥಾನ ವೊಂದರಲ್ಲಿ ಜಾತ್ರೆ ವೀಕ್ಷಿಸಿ ಮನೆಗೆ ವಾಪಸಾಗುತ್ತಿದ್ದಾಗ ಜ. 18ರ ಮುಂಜಾನೆ 5.30ಕ್ಕೆ ಬೈಕ್ನಲ್ಲಿ ಬಂದ ತಂಡ ಅದಯಿ ಸೇತುವೆ ಪರಿಸರದಲ್ಲಿ ಅವರ ಕತ್ತಿನಿಂದ ಎರಡೂವರೆ ಪವನ್ ಸರವನ್ನು ಎಗರಿಸಲಾಗಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಚಿನ್ನ ಸಾಗಾಟ: ಇಬ್ಬರ ಬಂಧನ
ಕುಂಬಳೆ: ದುಬಾೖಯಿಂದ ಜೀನ್ಸ್, ಖರ್ಜೂರ, ಸುಗಂಧ ದ್ರವ್ಯದ ಬಾಟಲಿಗಳಲ್ಲಿ ಸುಮಾರು 43 ಲಕ್ಷ ರೂ. ಬೆಲೆ ಬಾಳುವ ಚಿನ್ನ ತುಂಬಿಸಿ ಸಾಗಿಸುತ್ತಿದ್ದ ಆರೋಪದಲ್ಲಿ ಕುಂಬಳೆಯ ಅಬ್ದುಲ್ ಲತೀಫ್ (31) ಮತ್ತು ಓಮಶ್ಶೇರಿಯ ಶರ್ಫುದ್ದೀನ್ (35) ಅವರನ್ನು ಕರಿಪ್ಪೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬೆದರಿಕೆ, ಹಲ್ಲೆ: ಇಬ್ಬರ ಬಂಧನ
ಕುಂಬಳೆ: ಕ್ರಶರ್ನಿಂದ ಲಾರಿಯಲ್ಲಿ ಜಲ್ಲಿ ತುಂಬಿ ಸಾಗಿಸುತ್ತಿದ್ದಾಗ ತಡೆದು ನಿಲ್ಲಿಸಿ ಚಾಲಕರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇರಿಸಿದವರನ್ನು ಪ್ರಶ್ನಿಸಿದ ಕೋರೆ ಮಾಲಕನಿಗೆ ಹಲ್ಲೆಗೈದ ಆರೋಪದಲ್ಲಿ ಬದಿಯಡ್ಕ ಪೊಲೀಸರು ಅಹಮ್ಮದ್ ಮತ್ತು ಇಶಾಕ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಸ್ಕೂಟರ್ – ಟೆಂಪೋ ಢಿಕ್ಕಿ: ಯುವಕ ಸಾವು
ಕುಂಬಳೆ: ಮುಳ್ಳೇರಿಯ ಬಳಿಯ ದೇಲಂಪಾಡಿಯಲ್ಲಿ ಸ್ಕೂಟರ್ ಮತ್ತು ಟೆಂಪೊ ಢಿಕ್ಕಿಯಾಗಿ ಆದೂರು ಸಿಎ ನಗರ ನಿವಾಸಿ, ಖಾದರ್ – ಸಿಮ್ಲಾ ದಂಪತಿಯ ಪುತ್ರ ರೈಸ್ ಅನ್ವರ್ (18) ಅವರು ಸಾವಿಗೀಡಾಗಿದ್ದಾರೆ.ಇವರು ಮುಳ್ಳೇರಿಯದ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಸ್ಕೂಟರಲ್ಲಿ ತೆರಳುತ್ತಿದ್ದಾಗ ಟೆಂಪೊ ಮುಖಾಮುಖಿ ಢಿಕ್ಕಿ ಹೊಡೆದು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಬದಿಯಡ್ಕ: ವರ್ಕ್ಶಾಪ್ನಿಂದ ಕಳವು
ಕುಂಬಳೆ: ಬದಿಯಡ್ಕ ನೆಕ್ರಾಜೆ ಆರ್ತಿಪ್ಪಳ್ಳದ ಕೊಂಬ್ರಾಜೆ ತಿಮೋತಿ ಕ್ರಾಸ್ತಾ ಅವರ ಬೋಳುಕಟ್ಟೆಯ ವರ್ಕ್ಶಾಪ್ನಿಂದ ಸುಮಾರು 1 ಲಕ್ಷ ರೂ. ಬೆಲೆಬಾಳುವ ಕಬ್ಬಿಣದ ಉಪಕರಣಗಳನ್ನು ಕಳವು ಮಾಡಲಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಓರ್ವನ ಮೇಲೆ ಶಂಕೆ ಇದ್ದು, ಆತ ಕದ್ದ ವಸ್ತುಗಳನ್ನು ಕಾಸರಗೋಡಿನಲ್ಲಿ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ
Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು
Kannada Cinema; ರಿಲೀಸ್ ಅಖಾಡಕ್ಕೆ ಸಂಭವಾಮಿ ಯುಗೇ ಯುಗೇ..
Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು
HD Revanna; ಮನೆ ಕೆಲಸದಾಕೆಗೆ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ಮಂಜೂರು