ಕೇಂದ್ರ ಸರಕಾರದ ಆಯುಷ್ಮಾನ್‌ಭವ ವಿಮಾ ಯೋಜನೆಗೆ ಅಡ್ಡಿ !

ಜಾರಿಗೆ ರಾಜ್ಯ ಸರಕಾರ ಹಿಂದೇಟು

Team Udayavani, Jun 20, 2019, 6:00 AM IST

Golden

ಕುಂಬಳೆ: ಕೇಂದ್ರ ಸರಕಾರವು ಆಯುಷ್ಮಾನ್‌ಭವ ಕಾರುಣ್ಯ ಆರೋಗ್ಯವಿಮಾ ಯೋಜನೆಯನ್ನು ಬಡವರಿಗಾಗಿ ಸಾಕಷ್ಟು ಹಿಂದೆಯೇ ಜ್ಯಾರಿಗೊಳಿಸಿದೆ.ಈ ಯೋಜನೆಯಲ್ಲಿ ಬಡವರ ಕುಟುಂಬಕ್ಕೆ 5 ಲಕ್ಷದ ಚಿಕಿತ್ಸಾ ನೆರವು ದೊರೆಯಲಿದೆ.ಆದರೆ ಆರಂಭದಲ್ಲಿ ಈ ಯೋಜನೆಯನ್ನು ಕೇರಳ ರಾಜ್ಯ ಸರಕಾರ ರಾಜ್ಯದಲ್ಲಿ ಜಾರಿಗೊಳಿ ಸಲು ಕೆಲವೊಂದು ಕಾರಣದ ನೆಪದಲ್ಲಿ ಹಿಂದೇಟು ಹಾಕಿದೆ.

ಕೊನೆಗೆ ಇತರೆಲ್ಲ ರಾಜ್ಯ ಸರಕಾರಗಳು ಯೋಜನೆಯ ನಿರ್ವಹಣೆಗೆ ಮುಂದಾದಾಗ ಅನ್ಯಮಾರ್ಗವಿಲ್ಲದೆ ರಾಜ್ಯದಲ್ಲಿ ಯೋಜನೆಯನ್ನು ವಿಳಂಬವಾಗಿ ಜಾರಿಗೊಳಿಸಿದ ಕಾರಣ ಯೋಜನೆಯಿಂದ ಹಲವು ಬಡರೋಗಿಗಳು ವಂಚಿತರಾಗಬೇಕಾ ಯಿತು. ಕೊನೆಗೂ ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ನಿಧಾನವೇ ಪ್ರಧಾನ ಎಂಬುದಾಗಿ ರಾಜ್ಯ ಸರಕಾರ ವಿಮಾಯೋಜನೆಯ ನಿರ್ವಹಣೆಗೆ ಮುಂದಾಗಿದೆ.ಇದರಂತೆ ಕಾಸಗೋಡು ಜಿಲ್ಲೆಯಲ್ಲಿ ಜೂ.20 ರ ತನಕ ಮಾತ್ರ ಗ್ರಾಮ ಪಂಚಾಯತ್‌ಗಳಲ್ಲಿ ಶಿಬಿರ ಆಯೋಜಿಸಿದೆ.ಹಿಂದೆ ಆರೋಗ್ಯ ಕಾರ್ಡು ಹೊಂದಿದವರು ಕ್ಯಾಂಪಿಗೆ ಆಗಮಿಸಿ ತಮ್ಮ ಆರೋಗ್ಯ ಕಾರ್ಡನ್ನು ಆಯುಷ್ಮಾನ್‌ಭವ ಕಾರುಣ್ಯ ಆರೋಗ್ಯವಿಮಾ ಯೋಜನೆಗೆ ಮರ್ಜಿ ಮಾಡಲು ಮುಂದಾಗಿರುವರು.ಆದರೆ ಇದಕ್ಕೆ ಹೆಚ್ಚಿನ ಪ್ರಚಾರವಿಲ್ಲದೆ ಬಡವರು ಕಾಂಪಿಗೆ ಆಗಮಿಸಿದರೂ ಶಿಬಿರದಲ್ಲಿ ಇದಕ್ಕೆ ಒಂದಲ್ಲೊಂದು ಅಡಚಣೆಗಳು ತಪ್ಪುತ್ತಿಲ್ಲ.ಪದೇಪದೇ ಸರ್ವರ್‌ ಕೈಕೊಡುತ್ತಿರುವುದರಿಂದ ಸುಗಮವಾಗಿ ಕಾರ್ಡುಗಳನ್ನು ವಿತರಿಸಲಾಗುತ್ತಿಲ್ಲ.ಜೂ.16 ರಂದು ರವಿವಾರದಂದು ಶಿಬಿರ ಇದೆ ಎಂದ ಘೋಷಿಸಿದರೂ ಶನಿವಾರ ಮಧ್ಯಾಹ್ನ ಕಡಿತಗೊಂಡ ಸರ್ವರ್‌ ಸೋಮವಾರ ಮರಳಿದೆ.ಇದರ ಮಧ್ಯೆ ಮಾಹಿತಿ ತಿಳಿಯದೆ ಅದಷೋr ಮಂದಿ ಎರಡು ದಿನವೂ ಫಲಾನುಭವಿಗಳು ಶಿಬಿರಕ್ಕೆ ಮರಳಿ ಹಿಡಿಶಾಪ ಹಾಕಿ ಮರಳಬೇಕಾಯಿತು.

ಕಾರ್ಡ್‌ ನವೀಕರಿಸುವ ಕೇಂದ್ರದಲ್ಲಿ ವಿದ್ಯುತ್‌ ಕಡಿತಗೊಂಡರೆ ಬದಲಿ ವ್ಯವಸ್ಥೆ ಕೂಡ ಇಲ್ಲದೆ ಗಂಟೆಗಟ್ಟಲೆ ಕಾಯಬೇಕಾಗಿದೆ. ಹತ್ತಿಪ್ಪತ್ತು ವಾರ್ಡಿನ ಜನರಿಗೆ ಒಂದೇ ಕೇಂದ್ರ ದಲ್ಲಿ ಶಿಬಿರ ಆಯೋಜಿಸಿ ಈ ಕೇಂದ್ರ ಗಳಿಗೆ ಎಲ್ಲರಿಗೂ ಆಗಮಿಸಲು ಅನನು ಕೂಲವಾಗುವುದು.

ಟೋಕನ್‌ ಪಡೆದು ಮರುದುನ ಮತ್ತೆ ಬರಬೇಕಾಗುವುದು.ಅಲ್ಲದೆ ನವೀಕರಣ ಕೇಂದ್ರಗಳಲ್ಲಿ ಕಾರ್ಡಿನ ಓರ್ವ ಸದಸ್ಯನ ಹೆಸರನ್ನು ಮಾತ್ರ ನವೀಕರಿಸಲಾಗುವುದು.ಉಳಿದ ಹೆಸರುಗಳನ್ನು ಕೆಲವು ತಿಂಗಳ ಬಳಿಕ ನವೀಕರಿಸುವುದಂತೆ.ಕಾರ್ಡಿನ ಎಲ್ಲರ ಹೆಸರನ್ನು ವಿಮೆಯಲ್ಲಿ ಒಳಪಡಿಸಲು ಹೆಚ್ಚಿನ ಸಮಯ ಬೇಕಾಗುವುದರಿಂದ ಇದೀಗ ಸಾಂಕೇತಿಕವಾಗಿ ಮಾತ್ರ ನವೀಕರಿಸಲಾಗುವುದೆಂಬ ಉತ್ತರ ಶಿಬಿರ ಸಂಘಾಟಕರದು.

ಆದರೆ ಕಾರ್ಡಿನಲ್ಲಿ ಒಳಪಟಿಟಿರುವ ಬಡರೋಗಿಗಳಿಗೆ ರೋಗ ತಗಲಿದಲ್ಲಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯ ದಂತಾಗಿದೆ.ಕರ್ನಾಟಕ ರಾಜ್ಯದಲ್ಲಿ ಕೇರಳದ ಆರೋಗ್ಯ ಕಾರ್ಡು ಕೇವಲ ಬೆರಳೆಣಿಕೆಯ ಒಡಂಬ ಡಿಕೆಯಾದ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆಗೆ ಅವಕಾಶವಿತ್ತು.ಆರೋಗ್ಯ ಕಾರ್ಡಿನಲ್ಲಿ ಮನೆಯವರೆಲ್ಲರೂ ಒಳಪಟ್ಟಿಲ್ಲವಾದ ಆದೆಷೋr ಕಾರ್ಡುಗಳಿವೆ.ಉಳಿದವರನ್ನು ಕಾರ್ಡಿನಲ್ಲಿ ಒಳಪಡಿಸಲು ಇನ್ನಷ್ಟು ತಿಂಗಳು ಕಾಯಬೇಕಂತೆ.ಬಡವರ ಕೇÒಮ ಯೋಜನೆಗೂ ಕನ್ನ ಹಾಕುವ ರಾಜ್ಯ ಆಡಳಿತ ರಾಜಕೀಯ ಮೇಲಾಟಕ್ಕೆ ಬಡ ಫಲಾನುಭವಿಗಳು ಹಿಡಿಶಾಪ ಹಾಕುತಿದ್ದಾರೆ.
ಆದುದರಿಂದ ಆರೋಗ್ಯ ಕಾರ್ಡಿನ ನವೀಕರಣದ ಅವಧಿಯನ್ನು ಜೂ. 20ಕ್ಕೆ ಸೀಮಿತಗೊಳಿಸದೆ ಕಾಲಾವಧಿ ಮುಂದುವರಿಸಬೇಕಾಗಿದೆ.

ಬಡವರನ್ನು ವಂಚಿಸಲಾಗಿದೆ ಆರೋಗ್ಯ ಕಾರ್ಡ್‌ ನವೀಕರಣದ ಶುಲ್ಕವನ್ನು 30 ರೂವಿನಿಂದ 50 ಕ್ಕೆ ಏರಿಸಿ ಬಡವರನ್ನು ವಂಚಿಸಲಾಗಿದೆ.ಕೇಂದ್ರ ಸರಕಾರ ಬಡವರಿಗಾಗಿ ಆಯುಷ್ಮಾನ್‌ಭವ ಕಾರುಣ್ಯ ಆರೋಗ್ಯವಿಮಾ ಯೋಜನೆಯನ್ನು ದೇಶದಾದ್ಯಂತ ಹಮ್ಮಿ ಬಡವರಿಗೆ ವರದಾನವಾಗಿದೆ.ಇದರಲ್ಲೂ ರಾಜಕೀಯ ಮಾಡಿದವರಿಗೆ ಮತದಾರರು ಸರಿಯಾದ ಬುದ್ಧಿ ಕಲಿಸಿದ್ದಾರೆ.ಇದನ್ನರಿತು ಇನ್ನಾದರೂ ಈ ಯೋಜನೆಗೆ ವಿಘ್ನ ಮಾಡದೆ ಸಮರ್ಪಕವಾಗಿ ನಿರ್ವಹಿಸಲು ಸರಕಾರ ಮುಂದಾಗಬೇಕಾಗಿದೆ.
-ರವಿಚಂದ್ರ ಕುಂಬಳೆ
ಯೋಜನೆಯ ಫಲಾನುಭವಿ

ವಿತರಣೆಯಾಗದೇ ಬಡವರಿಗೆ ವಂಚನೆ
ಪ್ರಧಾನಮಂತ್ರಿಯವರ ಕಾರ್ಯಾಲಯದಿಂದ ಲೋಕಸಭಾ ಚುನಾವಣೆಗೆ ಮುನ್ನವೇ ಬಿ.ಪಿ.ಎಲ್‌. ಪಡಿತರ ಕಾರ್ಡು ಹೊಂದಿದವರಿಗೆ ಆಯುಷ್ಮಾನ್‌ಭವ ಕಾರುಣ್ಯ ಆರೋಗ್ಯವಿಮಾ ಯೋಜನೆಯಲ್ಲಿ ಒಳಪಡಿಸಿರುವುದಾಗಿ ನೇರಪತ್ರ ಬಂದಿತ್ತು.ಆದರೆ ಈ ಪತ್ರ ಹೆಚ್ಚಿನವರಿಗೆ ಕೈ ಸೇರಿಲ್ಲವೆಂಬ ಆರೋಪ ಸಾಕಷ್ಟಿದೆ.ಕೆಲವು ಪತ್ರದಲ್ಲಿ ವಿಳಾಸ ಸರಿಯಾಗಿಲ್ಲದೆ ಮರಳಿಕಳುಹಿಸಲಾಗಿದೆ. ಇನ್ನು ಕೆಲವು ಅಂಚೆ ಕಚೇರಿ ಪೇದೆಗಳು ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಇದನ್ನು ಬಡವರಿಗೆ ವಿತರಿಸಿಲ್ಲವೆಂಬ ಆರೋಪವೂ ಇದೆ.ಇದರಿಂದಲಾಗಿ ಬಡವರಿಗೆ ವಂಚನೆಯಾಗಿದೆ .ಆದುದರಿಂದ ಅದೆಷೋr ಮಂದಿ ರೋಗಿಗಳು ಈ ವಿಮಾ ಯೋಜನೆಯ ಆರ್ಥಿಕ ನೆರವು ದೊರೆಯದೆ ವಂಚಿತರಾಗಿದ್ದಾರೆ.ಹಿಂದಿನ ಆರೋಗ್ಯ ಕಾರ್ಡಿನಲ್ಲಿ ಮಾರಕ ರೋಗಕ್ಕೂ ಕೇವಲ 30ಸಾವಿರ ರೂ. ಲಭ್ಯ.ಆಯುಷ್ಮಾನ್‌ ಕಾರ್ಡಿನಲ್ಲಿ 5 ಲಕ್ಷ ದೊರೆಯುತ್ತದೆ.

-ಅಚ್ಯುತ ಚೇವಾರು

ಟಾಪ್ ನ್ಯೂಸ್

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.