ಅಶಕ್ತ ಕುಮಾರಮಂಗಲ ನಿವಾಸಿ ಸುಂದರ ಮುಖಾರಿಯವರಿಗೆ ನೆರವಾಗುವಿರಾ?
Team Udayavani, Feb 10, 2020, 4:14 AM IST
ಕುಂಬಳೆ: ಬೇಳ ಕುಮಾರಮಂಗಲ ನಿವಾಸಿ ಸುಂದರ ಮುಖಾರಿಯವರು ಸ್ಥಳೀಯ ಕೆಂಪು ಕಲ್ಲಿನ ಕೋರೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಇವರು ಸುಮಾರು ಒಂದೂವರೆ ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.
ಪರಿಸರದ ವೈದ್ಯರ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ತಿಂಗಳ ಹಿಂದೆ ನೋವು ಉಲ್ಬಣ ಗೊಂಡಿದ್ದು ವೈದ್ಯರ ಸಲಹೆಯ ಮೇರೆಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ತೆರಳಿ ಉನ್ನತ ತಪಾಸಣೆ ನಡೆಸಿದಾಗ ಇವರ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರುವುದಾಗಿ ಇದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕೆಂಬುದಾಗಿ ವೈದ್ಯರು ಸಲಹೆ ನೀಡಿರುವರು. ಚಿಕಿತ್ಸೆಗೆ ಸುಮಾರು 2.5 ಲಕ್ಷ (ಎರಡೂವರೆ ಲಕ್ಷ ) ಖರ್ಚು ತಗಲಬಹುದಾಗಿಯೂ ತಿಳಿಸಿದ್ದಾರೆ.
ಆದರೆ ಅಷ್ಟೊಂದು ಹೆಚ್ಚಿನ ಮೊತ್ತವನ್ನು ಭರಿಸುವ ಸಾಮರ್ಥ್ಯವಿಲ್ಲದೆ ಇವರ ಬಡಕುಟುಂಬ ಕಂಗಾಲಾಗಿದೆ. ಇವರನ್ನು ಇದೀಗ ಚಿಕಿತ್ಸೆಗಾಗಿ ಕೇರಳದ ತಲಶೆÏàರಿಯ ಸರಕಾರಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಚಿಕಿತ್ಸಾ ವೆಚ್ಚಕ್ಕಾಗಿ ಉದಾರ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ನೀರ್ಚಾಲು ನಿವೇದಿತಾ ಸೇವಾ ಮಿಶನ್ ಕಾರ್ಯಕರ್ತರನ್ನು ಸಂಪರ್ಕಿಸಿ ಇದರ ಮೂಲಕ ಸಹಾಯ ಯಾಚಿಸಿರುವರು.ಆದುದರಿಂದ ಹೃದಯ ಶ್ರೀಮಂತಿಕೆಯ ಉದಾರ ಮನಸ್ಸಿನ ದಾನಿಗಳು ಈ ಬಡ ಕುಟುಂಬಕ್ಕೆ ಸಹಾಯ ಮಾಡಬೇಕಾಗಿ ಅಪೇಕ್ಷಿಸಲಾಗಿದೆ.
ನೆರವು ನೀಡಬಯಸುವ ದಾನಿಗಳು ಇವರ ಬ್ಯಾಂಕ್ ಖಾತೆ : ಸುಜಾತಾ ಎನ್.ಎಸ್.ಬಿ ನಂಬ್ರ : 5322500100736801.ಐಎಫ್ಸಿ ಕೆಎಆರ್ಬಿ 0000532.ಕರ್ಣಾಟಕ ಬ್ಯಾಂಕ್ ನೀರ್ಚಾಲು ಶಾಖೆಗೆ ಪಾವತಿಸ ಬಹುದಾಗಿದೆ.