ತುರ್ತು ಕರೆಗೆ ಸಿಬಂದಿ ಕೊರತೆ: ಅಗ್ನಿಶಾಮಕ ದಳ ಹರಸಾಹಸ


Team Udayavani, Mar 28, 2019, 6:30 AM IST

turtu-kare

ಕಾಸರಗೋಡು: ನಗರ ಪ್ರದೇಶ ಮತ್ತು ಪರಿಸರ ಪ್ರದೇಶಗಳಲ್ಲಿ ಅಗ್ನಿ ಅನಾಹುತ ಸಹಿತ ವಿವಿಧ ಅನಾಹುತಗಳು ಸಂಭವಿಸಿದಾಗ ರಕ್ಷಿಸಲು ಸ್ಥಳಕ್ಕೆ ಧಾವಿಸಿ ತಲುಪಲು ಅಗ್ನಿಶಾಮಕ ದಳಕ್ಕೆ ಕಷ್ಟವಾಗುತ್ತಿದೆ. ಇದಕ್ಕೆ ಅಗ್ನಿಶಾಮಕ ದಳದಲ್ಲಿ ಸಿಬಂದಿ ಕೊರತೆ ಹಾಗೂ ವಾಹನಗಳ ಕೊರತೆ ಪ್ರಮುಖ ಕಾರಣವಾಗಿದೆ.

ಕಾಸರಗೋಡು ಅಗ್ನಿಶಾಮಕ ದಳದ ವ್ಯಾಪ್ತಿಯಲ್ಲಿ ಜನವರಿ ತಿಂಗಳಿಂದ ಜಿಲ್ಲೆಯಲ್ಲಿ ಈ ವರೆಗೆ 1,000 ದಷ್ಟು ಬೆಂಕಿ ಅನಾಹುತಗಳು ನಡೆದಿವೆ. ಬೇಸಗೆ ತಾಪ ಹೆಚ್ಚುತ್ತಿರುವಂತೆ ಬೆಂಕಿ ಅನಾಹುತ ಇನ್ನಷ್ಟು ಅಧಿಕವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಕಾಸರಗೋಡು ಅಗ್ನಿಶಾಮಕ ದಳದ ವ್ಯಾಪ್ತಿ ಸುಮಾರು 45 ಕಿಲೋ ಮೀಟರ್‌ ಸುತ್ತಳತೆಯಲ್ಲಿದೆ. ಈ ಕಾರಣದಿಂದ ಹಲವು ಸಂದರ್ಭಗಳಲ್ಲಿ ತತ್‌ಕ್ಷಣ ಸ್ಥಳಕ್ಕೆ ಧಾವಿಸಲೋ ಬೆಂಕಿ ಆರಿಸಲೋ ತಲುಪಲು ಕಷ್ಟಪಡಬೇಕಾಗುತ್ತದೆ. ಮುಳ್ಳೇರಿಯ ಪ್ರದೇಶದಲ್ಲಿ ಅನಾಹುತ ಸಂಭವಿಸಿದರೆ ಸುಮಾರು 25 ಕಿ.ಮೀ. ದೂರಕ್ಕೆ ಅಗ್ನಿಶಾಮಕ ದಳ ಕ್ರಮಿಸಬೇಕಾಗುತ್ತದೆ.

ಕಾಸರಗೋಡು ಅಗ್ನಿಶಾಮಕ ದಳದ ವ್ಯಾಪ್ತಿಯ ಸೀತಾಂಗೋಳಿ, ಪೆರ್ಲ, ಎಣ್ಮಕಜೆ, ಏತಡ್ಕ, ಮುಳ್ಳೇರಿಯ, ನೆಲ್ಲಿಕಟ್ಟೆ, ಮಾನ್ಯ ಮೊದಲಾದ ಪ್ರದೇಶಗಳು ಬದಿಯಡ್ಕ ಅಗ್ನಿಶಾಮಕ ದಳದ ವ್ಯಾಪ್ತಿಗೆ ಬರಲಿವೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ ಉಪ್ಪಳ, ಕಾಸರಗೋಡು, ಕುತ್ತಿಕೋಲ್‌, ಕಾಂಞಂಗಾಡ್‌, ತೃಕ್ಕರಿಪುರ ಎಂಬಂತೆ ಐದು ಅಗ್ನಿಶಾಮಕ ದಳ ಯೂನಿಟ್‌ಗಳಿವೆ. ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ 10 ಕಿ.ಮೀ. ವ್ಯಾಪ್ತಿಯೊಳಗೆ ಅಗ್ನಿಶಾಮಕ ದಳವಿದೆ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಸಂಬಂಧಿಸಿ ಅವಗಣನೆ ಮುಂದುವರಿದಿದೆ.

1,992 ಚ. ಕಿ. ಮೀ. ವಿಸ್ತಾರದ ಕಾಸರಗೋಡು ಜಿಲ್ಲೆಯಲ್ಲಿ ಹುಲ್ಲು ಬೆಳೆಯುವ ಪಾರೆ ಪ್ರದೇಶಗಳು ಹಲವು ಇವೆ. ಬೇಸಗೆ ಕಾಲದಲ್ಲಿ ಒಣ ಹುಲ್ಲಿಗೆ ಬೆಂಕಿ ಹತ್ತಿಕೊಳ್ಳುವುದು ಸಾಮಾನ್ಯವಾಗಿದೆ. ಕಾಸರಗೋಡು ಅಗ್ನಿಶಾಮಕ ಯೂನಿಟ್‌ಗೆ ನೀಡಿದ ಮೂರು ಮೊಬೈಲ್‌ ಟ್ಯಾಂಕ್‌ ಯೂನಿಟ್‌ಗಳಲ್ಲಿ ಒಂದು ಮೂಲೆಗುಂಪಾಗಿದೆ.

ಬೆಂಕಿ ಆರಿಸಲು ನೀರಿಲ್ಲ
ಬೆಂಕಿ ಆರಿಸಲು ಅಗತ್ಯವುಳ್ಳ ನೀರಿಗಾಗಿ ಉಪ್ಪಳ ಅಗ್ನಿಶಾಮಕ ದಳ ಪರದಾಡುವ ಸ್ಥಿತಿ ಉಂಟಾಗಿದೆ. ಮಂಗಲ್ಪಾಡಿ ಪಂಚಾಯತ್‌ ವ್ಯಾಪ್ತಿಯ ಚೆರುಗೋಳಿ ರಸ್ತೆಯಲ್ಲಿರುವ ಪಂಚಾಯತ್‌ ಕಟ್ಟಡದಲ್ಲಿ ಉಪ್ಪಳ ಅಗ್ನಿಶಾಮಕ ದಳ ಕಾರ್ಯಾಚರಿಸುತ್ತಿದೆ. ಜನತೆ ದೀರ್ಘ‌ ಕಾಲದ ಬೇಡಿಕೆಯ ಫಲವಾಗಿ 2010 ಎಪ್ರಿಲ್‌ 17ರಂದು ಇಲ್ಲಿ ಅಗ್ನಿಶಾಮಕ ದಳ ಉದ್ಘಾಟನೆಗೊಂಡಿತು.

ಕೇವಲ 18 ಮಂದಿ ಫ‌ಯರ್‌ವೆುನ್‌
ಅಗ್ನಿಶಾಮಕ ದಳದಲ್ಲಿನ ಸಿಬಂದಿ ಸಂಖ್ಯೆಯೂ ಕಡಿಮೆ. ಇತರ ಜಿಲ್ಲಾ ಕೇಂದ್ರ ಗಳಲ್ಲಿರುವ ಅಗ್ನಿಶಾಮಕ ದಳಕ್ಕೆ ಹೋಲಿಸಿದರೆ ಕಾಸರಗೋಡು ಅಗ್ನಿಶಾಮಕ ದಳದಲ್ಲಿ ಸಿಬಂದಿ ಸಂಖ್ಯೆ ಏನೇನೂ ಸಾಲದು. ಕಾಸರಗೋಡು ಅಗ್ನಿಶಾಮಕ ದಳದಲ್ಲಿ 28 ಮಂದಿ ಫಯರ್‌ವೆುನ್‌ ಬೇಕಾಗಿದ್ದರೂ ಕೇವಲ 18 ಮಂದಿ ಇದ್ದಾರೆ. ಚಾಲಕರು 7 ಮಂದಿ ಇದ್ದಾರೆ. ಬದಿಯಡ್ಕ ದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸು ವುದಾಗಿ ಘೋಷಿಸಲಾಗಿದ್ದರೂ ಈ ವರೆಗೂ ಸಾಧ್ಯವಾಗಿಲ್ಲ.

ನೀರ್ಚಾಲಿನ ಬೇಳ ಗ್ರಾಮ ಕಚೇರಿಗೆ ಸಮೀಪದ ಎರಡು ಎಕರೆ ಸ್ಥಳವನ್ನು ಗುರುತಿಸಿ ದ್ದರೂ ಕಂದಾಯ ಇಲಾಖೆ ಯಿಂದ ಭೂಸ್ವಾಧೀನ ಕುರಿತಾದ ತಾಂತ್ರಿಕ ಅಡಚಣೆ ಯಿಂದ ಯೋಜನೆ ವಿಳಂಬವಾಗುತ್ತಿದೆ.

ಟಾಪ್ ನ್ಯೂಸ್

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.