ಶಿಕ್ಷಣ, ತಂತ್ರಜ್ಞಾನ ಬೆಳೆದಿದ್ದರೂ ಮಾನವೀಯ ಮೌಲ್ಯ ಕುಸಿಯುತ್ತಿದೆ
Team Udayavani, Sep 12, 2017, 7:05 AM IST
ಕುಂಬಳೆ: ಶಿಕ್ಷಣ, ವಿಜ್ಞಾನ, ತಂತ್ರಜ್ಞಾನಗಳು ಬೆಳೆದಿದ್ದರೂ ಮಾನವೀಯ ಮೌಲ್ಯ, ಮಾನವ ಸಂಬಂಧ ಗಳು ಕುಸಿದು ಮೃಗೀಯ ಪ್ರವೃತ್ತಿಗಳು ತಾಂಡವವಾಡುತ್ತಿರುವುದು ದುರಂತ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಗಂಭೀರ ಸ್ವರೂಪ ಪಡೆಯುತ್ತಿದೆ. ಇದು ಸಾಹಿತ್ಯ, ಪುಸ್ತಕದ ಓದುವಿಕೆಯ ಕೊರತೆಯಿಂದ ಆಗಿರುವ ಅಸಮತೋಲನವಾಗಿದ್ದು, ಯುವ ಸಮೂಹಕ್ಕೆ ಈ ಬಗೆಗೆ ಜಾಗೃತಿ ಮೂಡಿಸುವಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ತರವೆಂದು ಸಂಸದ ಪಿ. ಕರುಣಾಕರನ್ ಹೇಳಿದರು.
ಪೈವಳಿಕೆ ಬಳಿಯ ಆಝಾದ್ ನಗರದಲ್ಲಿ ನಡೆದ ಓಣಂ ಆಚರಣೆ ಮತ್ತು ನೂತನವಾಗಿ ಇ.ಕೆ. ನಾಯನಾರ್ ಸ್ಮಾರಕ ವಾಚನಾಲಯ ಮತ್ತು ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿ ಮನಸ್ಸು ಮನಸ್ಸುಗಳನ್ನು ಬೆಸೆಯುವ ಯತ್ನಗಳಾಗಬೇಕು. ವಿಶಾಲ ಮನೋಭಾವಗಳನ್ನು ಬೆಳೆಸುವ ಓದುವ ಹವ್ಯಾಸ ವ್ಯಾಪಕ ಸಂಬಂಧಗಳನ್ನು ಗ್ರಹಿಸಲು, ಸಾಮಾಜಿಕ ಸ್ಥಿತಿಗಳೊಡನೆ ಹೆಜ್ಜೆಹಾಕಲು ನೆರವಾಗುತ್ತದೆ ಎಂದರು. ಮೌಡ್ಯ, ಪಿಡುಗುಗಳಿಂದ ಹೊರಬಂದು ಆಧುನಿಕ ಪ್ರಪಂಚದೊಡನೆ ವ್ಯವಹರಿಸು ವಲ್ಲಿ ಯುವ ಜನಾಂಗವನ್ನು ರೂಪಿಸು ವಲ್ಲಿ ಉತ್ತಮ ಮಾಧ್ಯಮವಾಗಿ ಪುಸ್ತಕ ಪ್ರಪಂಚ ಬೆಸೆಯುತ್ತದೆ ಎಂದರು.
ಮಂಜೇಶ್ವರ ತಾಲೂಕು ಲೆ„ಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್. ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಜೆ. ಶೆಟ್ಟಿ, ಪೈವಳಿಕೆ ಚಾವಡಿ ಉಳ್ಳಾಲ್ತಿ ಕ್ಷೇತ್ರದ ರಂಗತ್ತೈ ಬಲ್ಲಾಳ ಅರಸರು, ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ರಾಬಿಯಾ, ಮಾಜಿ ಸದಸ್ಯರಾದ ಅಬ್ದುಲ್ ರಝಾಕ್ ಚಿಪ್ಪಾರ್ ಮತ್ತು ಅಬ್ದುಲ್ಲ ಹಾಜಿ, ಡಾ| ರಾಜಾರಾಮ ದೇವಕಾನ, ಅಬ್ದುಲ್ ಹಮೀದ್ ವೊರ್ಕೊಂಬು, ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಪ್ರಸಾಧನ ಕಲಾವಿದ ದೇವಕಾನ ಕೃಷ್ಣ ಭಟ್ಮತ್ತು ನಿವೃತ್ತ ಶಿಕ್ಷಣಾಧಿಕಾರಿ ಇಬ್ರಾಹಿಂ ಎನ್. ಅವರನ್ನು ಗೌರವಿಸಲಾಯಿತು. ಅಂಬುಜಾಕ್ಷನ್ ವಿಶೇಷ ಉಪನ್ಯಾಸ ನೀಡಿದರು. ಸ್ವಾಗತ ಸಮಿತಿ ಉಪಾಧ್ಯಕ್ಷ ಶ್ಯಾಮ್ ಭಟ್ ಮಾಸ್ತರ್ ಸ್ವಾಗತಿಸಿದರು, ಸಂಚಾಲಕ ಬಾಲಕೃಷ್ಣ ಅಂಬಿಕಾನ ವಂದಿಸಿದರು. ಬಳಿಕ ಓಣಂ ಔತಣ ಕೂಟ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು