ಕಾಸರಗೋಡು ಕ್ರೈಂ ಸುದ್ದಿಗಳು: ಕೋಳಿ ಅಂಕ; ಮೂವರ ಬಂಧನ
Team Udayavani, Sep 29, 2022, 5:34 PM IST
ಉಪ್ಪಳ: ಗುವೆದಪಡ್ಪು ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಕರ್ನಾಟಕ ನಿವಾಸಿ ಮಲ್ಲಿಕಾರ್ಜುನ(62), ಕಾಸರಗೋಡಿನ ನವೀನ್(42) ಮತ್ತು ಪೈವಳಿಕೆಯ ಶಿವಪ್ರಸಾದ್(48) ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದು, 7 ಕೋಳಿ ಹಾಗು 6850 ರೂ. ವಶಪಡಿಸಿದ್ದಾರೆ.
ಯುವಕನ ಕೊಲೆ: ಪುತ್ತಿಗೆ ನಿವಾಸಿಯ ಬಂಧನ
ಕಾಸರಗೋಡು: ಕೊಚ್ಚಿಯ ಕಲ್ಲೂರು ಅಂತಾರಾಷ್ಟ್ರೀಯ ಕ್ರೀಡಾಂಗಣ ಪರಿಸರದಲ್ಲಿ ಗ್ರೇಟರ್ ಕೊಚ್ಚಿನ್ ಡೆವಲಪ್ಮೆಂಟ್ ಅಥೋರಿಟಿ ವತಿಯಿಂದ ಸೆ.24 ರಂದು ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಕೊಚ್ಚಿ ವನಯಪ್ಪಿಳ್ಳೆ ಅಮ್ಮಾ ಎನ್ ಕೋವಿಲ್ಪರಂಬದ ಚೆಲ್ಲಮ್ಮ ವೀಟಿಲ್ ರಾಧಾಕೃಷ್ಣನ್ ಅವರ ಪುತ್ರ ಎಂ.ಆರ್. ರಾಧಾಕೃಷ್ಣನ್(27) ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪುತ್ತಿಗೆ ನಿವಾಸಿ ಮೊಹಮ್ಮದ್ ಹುಸೈನ್ನನ್ನು ಮೈಸೂರಿನಿಂದ ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಮುಖಂಡನ ಮನೆಗೆ ಕಲ್ಲೆಸೆದು ಹಾನಿ
ಕಾಸರಗೋಡು: ಬಿಜೆಪಿ ಕಾಂಞಂಗಾಡ್ ಮುನಿಸಿಪಲ್ ಸೆಕ್ರೆಟರಿ ಅರಯಿಕ್ಕಡವು ಬಾಂಗೋಡ್ನ ವಿ.ಕೆ.ರಂಜಿತ್ ಅವರ ಮನೆಗೆ ಸೆ.29 ರಂದು ಮುಂಜಾನೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಆಲ್ಟೋ ಕಾರಿನ ಗಾಜು ನಾಶಗೊಂಡಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ :
ಕುಂಬಳೆ: ಕುಂಬಳೆ ಪೇಟೆಯಲ್ಲಿ ಕುಂಬಳೆ ಜಿಎಚ್ಎಸ್ಎಸ್ನ 8 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಪೇಟೆ ಸಮೀಪ ಶಾಲೆಗೆ ತೆರಳುವ ರಸ್ತೆಯಲ್ಲಿ ಸುಮಾರು 100 ರಷ್ಟು ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ವಿದ್ಯಾರ್ಥಿಗಳು ಚದುರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ