ಕಾಸರಗೋಡು : ಸುಂಟರ ಗಾಳಿ ಸಹಿತ ಬಾರಿ ಮಳೆ, ಹಲವೆಡೆ ಹಾನಿ
Team Udayavani, Sep 13, 2022, 12:57 PM IST
ಕಾಸರಗೋಡು : ಬದಿಯಡ್ಕ ಪಂಚಾಯತ್ನ 16 ಮತ್ತು 17 ವಾರ್ಡ್ಗಳಾದ ಪಟ್ಟಾಜೆ ಮತ್ತು ಮಲ್ಲಡ್ಕದಲ್ಲಿ ಸೆ. 12 ರಂದು ಮುಂಜಾನೆ ಸುಮಾರು 3 ಗಂಟೆಗೆ ಸುಂಟರ ಗಾಳಿ ಸಹಿತ ಭಾರೀ ಮಳೆಯ ಪರಿಣಾಮವಾಗಿ ಐದು ಮನೆಗಳು ಭಾಗಶಃ ಹಾನಿಗೀಡಾಗಿವೆ. 150ರಷ್ಟು ತೆಂಗು, ಅಡಿಕೆ ಮರಗಳು ಉರುಳಿವೆ. ಮಳೆಯಿಂದ ಭಾರೀ ಹಾನಿ ಸಂಭವಿಸಿದೆ.
ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ ಮೊಳೆಯಾರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಈ ಪ್ರದೇಶದಲ್ಲಿ ಸುಂಟರಗಾಳಿ ಬೀಸಿದ್ದು ಪ್ರಥಮ ಎಂದು ಸ್ಥಳೀಯರು ಹೇಳಿದ್ದಾರೆ.
ಕುಂಬ್ಡಾಜೆಯಲ್ಲೂ ಸುಂಟರ ಗಾಳಿ
ಸುಂಟರ ಗಾಳಿಗೆ ಕುಂಬ್ಡಾಜೆ ಗ್ರಾಮ ಪಂಚಾಯತ್ನ 4ನೇ ವಾರ್ಡ್ನ ಏತಡ್ಕ, ಅನಂತಮೂಲೆ, ಮಲ್ಲಾರದಲ್ಲಿ, 3ನೇ ವಾರ್ಡ್ನ ಪತ್ರೋಡಿಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸೊಳಿಗೆ, ಸದಸ್ಯ ಜಿ. ಕೃಷ್ಣ ಶರ್ಮ, ವಿಲೇಜ್ ಆಫೀಸರ್ ಎಸ್. ಲೀಲಾ ಭೇಟಿ ನೀಡಿದರು.
ಇದನ್ನೂ ಓದಿ : ರಸ್ತೆ ಬದಿ ತ್ಯಾಜ್ಯ ಎಸೆತ: ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು