ಕಾಸರಗೋಡು – ವಳಮಲೆ ಪುನಃಪ್ರತಿಷ್ಠೆ , ನೇಮೋತ್ಸವ ಸಂಪನ್ನ
Team Udayavani, May 3, 2019, 8:04 PM IST
ಮೂಕಾಂಬಿಕ ಗುಳಿಗ
ಬದಿಯಡ್ಕ: ಬದಿಯಡ್ಕ ವಳಮಲೆಯ ಶ್ರೀ ಅಣ್ಣಪ್ಪ ಪಂಜುರ್ಲಿ, ಮೂಕಾಂಬಿಕ ಗುಳಿಗ ಹಾಗೂ ಪರಿವಾರ ದೈವಗಳ ದೈವಸ್ಥಾನ ಪ್ರತಿಷ್ಠಾ ಕಲಶೋತ್ಸವ ಹಾಗೂ ದೈವಕೋಲವು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಗುಳಿಗ ಕೋಲ, ಪಿಲಿಚಾಮುಡಿ, ಕೊರತ್ತಿ, ಅಣ್ಣಪ್ಪ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಮೂಕಾಂಬಿಕ ಗುಳಿಗ ಮತ್ತು ಧರ್ಮ ದೈವ ಅಣ್ಣಪ್ಪ ಪಂಜುರ್ಲಿ ನೇಮದೊಂದಿಗೆ ಸಂಪನ್ನಗೊಂಡಿತು.