ರಿಕ್ಷಾದ ಮೇಲೆ ಲಾರಿ ಪಲ್ಟಿ:  ತಾಯಿ, ಮಗಳು ಸಾವು


Team Udayavani, Jan 22, 2018, 12:07 PM IST

22-27.jpg

ಕಾಸರಗೋಡು: ನಿಯಂತ್ರಣ ತಪ್ಪಿದ ಲಾರಿಯೊಂದು ಆಟೋ ರಿಕ್ಷಾದ ಮೇಲೆ ಬಿದ್ದು ತಾಯಿ, ಮಗಳು ಸಾವಿಗೀಡಾಗಿ ನಾಲ್ವರು ಗಾಯಗೊಂಡ ಘಟನೆ ಪೊಯಿನಾಚಿಯಲ್ಲಿ ಜ.21ರಂದು ಮುಂಜಾನೆ  ಸಂಭವಿಸಿದೆ.

ತೆಕ್ಕಿಲ್‌ ಬೆಂಡಿಚ್ಚಾಲ್‌ ಮಂಡೆಲಿಪ್ಪಾರ ಹೌಸ್‌ನ ಬಸ್‌ ಕಂಡಕ್ಟರ್‌ ರಾಜನ್‌ ಅವರ ಪತ್ನಿ ಶೋಭನಾ ಯಾನೆ ಶೋಭಾ (38), ಪುತ್ರಿ ಚಟ್ಟಂಚಾಲ್‌ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ವಿಸ್ಮಯಾ (14) ಸಾವಿಗೀಡಾದರು.  ಶೋಭಾ ಅವರ ಪತಿ ರಾಜನ್‌(40), ಮತ್ತು ಆಟೋ ರಿಕ್ಷಾ ಚಾಲಕ ಚಟ್ಟಂಚಾಲ್‌ ಕನಿಯಾಕುಂಡ್‌ ನಿವಾಸಿ ಖಾದರ್‌ (50) ಅವರು ಗಂಭೀರ ಗಾಯ ಗೊಂಡಿದ್ದು, ಅವರನ್ನು ಮಂಗ ಳೂರಿನ ಆಸ್ಪತ್ರೆಗೆ ಸೇರಿಸ ಲಾಗಿದೆ. ಲಾರಿ ಚಾಲಕ ಮಹಾರಾಷ್ಟ್ರ ಕೊಲ್ಲಾಪುರ ಗಡ್‌ ವುಡ್‌ ಸಿಂಗ್‌ ನಿವಾಸಿ ಹನುಮಂತ್‌ (42) ಹಾಗೂ ಕ್ಲೀನರ್‌  ಲಾತೂರಿನ ಸಮ ದಾನ್‌ (21) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು,  ಅವರನ್ನು ಪೊಲೀಸರು ವಶಕ್ಕೆ  ಪಡೆದುಕೊಂಡಿದ್ದಾರೆ.

ಅನ್ನಪ್ರಾಶನಕ್ಕೆ ಹೊರಟಿದ್ದರು
ಶೋಭಾ ಅವರ  ಪುತ್ರಿ ಮಾಯಾ ಅವರನ್ನು ಪುಲ್ಲೂರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಮಾಯಾಳ ಹೆಣ್ಣು ಮಗುವಿಗೆ ಪರಶ್ಶಿನಿಕಡವು ಕ್ಷೇತ್ರ ದಲ್ಲಿ ಅನ್ನಪ್ರಾಶನಗೈಯ್ಯಲು ತೀರ್ಮಾ ನಿಸಲಾಗಿತ್ತು. ಅದರಂತೆ  ಪುಲ್ಲೂರಿನ ಮನೆಗೆ ಹೋಗಿ ಅಲ್ಲಿಂದ ಎಲ್ಲರೂ ಒಟ್ಟಿಗೆ ಪರಶ್ಶಿನಕಡವು  ದೇವಸ್ಥಾನಕ್ಕೆ ಹೋಗಲು ತೀರ್ಮಾನಿಸಲಾಗಿತ್ತು. 

ಇದಕ್ಕಾಗಿ ಕನಿಯಾಂಕುಂಡಿನ ಖಾದರ್‌ ಅವರ ಆಟೋರಿಕ್ಷಾದಲ್ಲಿ ಮುಂಜಾನೆ 3.30ಕ್ಕೆ ಪುಲ್ಲೂರಿಗೆ ಹೋಗುತ್ತಿದ್ದಾಗ  ಪೊಯಿನಾಚಿ ತಿರುವಿನಲ್ಲಿ  ಮಲಪ್ಪುರದಿಂದ ರಬ್ಬರ್‌ ಹೇರಿಕೊಂಡು ಅಹಮದಾಬಾದ್‌ಗೆ ಹೋಗುತ್ತಿದ್ದ ಟೋರಸ್‌ ಸರಕು ಲಾರಿ ನಿಯಂತ್ರಣ ತಪ್ಪಿ ಮೊದಲು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತು. ಪರಿಣಾಮ ರಸ್ತೆಯಿಂದ ಕೆಳಗೆ ಉರುಳಿಬಿದ್ದ ರಿಕ್ಷಾದ ಮೇಲೆ  ಪಲ್ಟಿಯಾಯಿತು. 

ಸ್ಥಳೀಯರು ಮತ್ತು ಪೊಲೀಸರು  ರಿಕ್ಷಾದಲ್ಲಿ ಸಿಲುಕಿದ್ದವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಶೋಭಾ ಮತ್ತು ವಿಸ್ಮಯಾ ಅವರನ್ನು ಉಳಿಸಲಾಗಲಿಲ್ಲ.  ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಟಾಪ್ ನ್ಯೂಸ್

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.