ಮಡಿಕೇರಿ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
Team Udayavani, Feb 20, 2023, 6:35 AM IST
ಮಡಿಕೇರಿ: ಶಿವಮೊಗ್ಗದಲ್ಲಿ ವೈದ್ಯಕೀಯ ಶಿಕ್ಷಣ ಅಧ್ಯಯನ ಮಾಡುತ್ತಿದ್ದ ಕೊಡಗಿನ ವಿದ್ಯಾರ್ಥಿ ಸೋಮವಾರಪೇಟೆ ತಾಲೂಕು ಶನಿವಾರಸಂತೆ ಗುಡುಗಳಲೆಯ ಜಗತ್ (22) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಬಿಡುವಿನ ವೇಳೆ ನೀರಿನಲ್ಲಿ ಸ್ನೇಹಿತರ ಜತೆ ಆಟವಾಡುತ್ತಿದ್ದಾಗ ನೀರಿಗೆ ಜಾರಿ ಬಿದ್ದು ಮೃತಪಟ್ಟರು ಎನ್ನಲಾಗಿದೆ.
ಹಂಡ್ಲಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ನಳಿನಿ ಹಾಗೂ ನಿವೃತ್ತ ಶಿಕ್ಷಕ ರವಿ ಅವರ ಪುತ್ರರಾಗಿರುವ ಅವರು ಹೆತ್ತವರು ಮತ್ತು ಸಹೋದರನನ್ನು ಅಗಲಿದ್ದಾರೆ.