ಮಲಬಾರ್‌ ಕ್ರೂಸ್‌ ಟೂರಿಸಂ ಯೋಜನೆಗೆ ಅಂಗೀಕಾರ


Team Udayavani, May 20, 2018, 6:10 AM IST

19ksde8b.jpg

ಕಾಸರಗೋಡು: ಕಾಸರಗೋಡು-ಕಣ್ಣೂರು ಜಿಲ್ಲೆಯ 8 ನದಿಗಳ ಆಸುಪಾಸಿನಲ್ಲಿ “ಮಲಬಾರ್‌ ಕ್ರೂಸ್‌ ಟೂರಿಸಂ ಯೋಜನೆ’ಯನ್ನು ಸಾಕಾರಗೊಳಿಸಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಅಂಗೀಕಾರ ನೀಡಿದೆ. ಹಿನ್ನೀರುಗಳಲ್ಲಿ ಜಲಸಾರಿಗೆ ಸೌಕರ್ಯವನ್ನು ಬಳಸಿಕೊಂಡು ಯೋಜಿಸಿರುವ ಈ ಯೋಜನೆಯಲ್ಲಿ ಆರಂಭಿಕ ಹಂತದಲ್ಲಿ ಮೂರು ನದಿಗಳನ್ನು ಕೇಂದ್ರೀಕರಿಸಿ ಯೋಜನೆ ಜಾರಿಗೊಳಿಸಲು ಈಗಾಗಲೇ 83 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.

ಮುತ್ತಪ್ಪನ್‌ ಆ್ಯಂಡ್‌ ಮಲಬಾರ್‌ ಕ್ಯೂಸಿನ್‌ ಕ್ರೂಸ್‌, ಕಾಂಡ್ಲ ಕ್ರೂಸ್‌. ದೈವ(ತೈಯ್ಯಂ) ಕಲೆಗಳ ಕ್ರೂಸ್‌ ಎಂಬೀ ಯೋಜನೆಗಳಿಗಾಗಿ 84 ಕೋಟಿ ರೂ. ಮಂಜೂರು ಮಾಡಲಾಗುವುದೆಂದು ಸಂಸದೆ ಪಿ.ಕೆ.ಶ್ರೀಮತಿ ಟೀಚರ್‌ ಅವರಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

ಕೇರಳ ರಾಜ್ಯ ಪ್ರವಾಸೋದ್ಯಮ ಇಲಾಖೆ ತಯಾರಿಸಿ ಸಮರ್ಪಿಸಿದ 325 ಕೋಟಿ ರೂಪಾಯಿಯ ಯೋಜನೆಯಲ್ಲಿರುವ ಇತರ ನದಿಗಳನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದು. ಈ ಯೋಜನೆಗೆ ಸಂಬಂಧಿಸಿ ರಾಜ್ಯ ಸರಕಾರ 53 ಕೋಟಿ ರೂ. ಈ ಮೊದಲೇ ಮಂಜೂರು ಮಾಡಿತ್ತು.

ಶಾಸಕರಾದ ಜೇಮ್ಸ್‌ ಮ್ಯಾಥ್ಯೂ ಮತ್ತು ಟಿ.ವಿ. ರಾಜೇಶ್‌ ನೇತೃತ್ವದಲ್ಲಿ ನಡೆಸಿದ ನದಿ ಯಾತ್ರೆ ಅನುಭವದ ಹಿನ್ನೆಲೆಯಲ್ಲಿ ಮಲಬಾರ್‌ ಕ್ರೂಸ್‌ ಟೂರಿಸಂ ಯೋಜನೆಗೆ ರೂಪು ನೀಡಲಾಗಿತ್ತು. ಕಣ್ಣೂರಿನ ಎಂ.ಕುಮಾರ್‌ ಆರ್ಕಿಟೆಕ್ಟ್Õ ತಯಾರಿಸಿದ ಯೋಜನೆಯನ್ನು ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಅಂಗೀಕರಿಸಿತ್ತು. ಈ ಯೋಜನೆ ಸಮಗ್ರ ವರದಿಯನ್ನು ತಯಾರಿಸಿ ಕೇಂದ್ರ ಯೋಜನೆಯನ್ನಾಗಿ ಪರಿವರ್ತಿಸಲು ಕೇಂದ್ರಕ್ಕೆ ಸಲ್ಲಿಸಲಾಗಿತ್ತು.
ಈ ಮಹತ್ವದ ಯೋಜನೆಗೆ ಅನುಮತಿ ನೀಡಬೇಕೆಂದು ಸಂಸದೆ ಪಿ. ಕೆ. ಶ್ರೀಮತಿ ಟೀಚರ್‌ ಹಲವು ಬಾರಿ ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದರಂತೆ ಕೇಂದ್ರ ಸರಕಾರ ನೇಮಿಸಿದ ಸಲಹಾ ಸಮಿತಿ ಪದಾಧಿಕಾರಿಗಳು ಬೋಟ್‌ ಯಾತ್ರೆ ನಡೆಸಿ ವರದಿ ಪರಿಗಣಿಸಿ ಪ್ರಥಮ ಹಂತದ ಮೊತ್ತವನ್ನು ಮಂಜೂರು ಮಾಡಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಜ್ಞ ಸಮಿತಿ ಶಿಫಾರಸು ಮಾಡಿತ್ತು.

ಪ್ರಥಮ ಹಂತದ ಯೋಜನೆಗಳು 
– ವಳಪಟ್ಟಣ ಹೊಳೆಯಲ್ಲಿ ವಳಪಟ್ಟಣದಿಂದ ಆರಂಭಿಸಿ ಪರಶ್ಶಿನಿಕಡವಿನ ಮೂಲಕ ಮಲಪ್ಪುಟ್ಟಂ ಮುನಂಬುಕಡವು ತನಕ ಮುತ್ತಪ್ಪನ್‌ ಕ್ರೂಸ್‌.
– ಭಗತ್‌ ಸಿಂಗ್‌, ಸಿ.ಎಚ್‌.ಮುಹಮ್ಮದ್‌ ಕೋಯ, ಎ.ಕೆ.ಜಿ.  ಹೆಸರಿನಲ್ಲಿರುವ ಜಟ್ಟಿಗಳಿಗೆ ತಲುಪುವ ಪ್ರವಾಸಿಗಳಿಗೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಸೌಲಭ್ಯಗಳ ಸ್ಥಾಪನೆ.
– ಪಾಂಬುರುತಿಯನ್ನು ಪ್ರವಾಸೋದ್ಯಮ ಗ್ರಾಮವಾಗಿ ಅಭಿವೃದ್ಧಿ.
– ಪ್ರಾದೇಶಿಕ ವೈವಿಧ್ಯತೆಗಳ ಊಟೋಪಚಾರ ಕೇಂದ್ರಗಳ ಸ್ಥಾಪನೆ.
– 50, 15, 10 ಎಂಬಂತೆ ಸೀಟುಗಳಿರುವ ಪ್ರಯಾಣ ಸೌಕರ್ಯ.
– ವಳಪಟ್ಟಣನಿಂದ ಅಳಿಕಲ್‌ ಫೆರಿ, ಮಾಟ್ಟೂಲ್‌, ತೆಕ್ಕುಂಬಾಟ್‌, ಪಳಯಂಗಾಡಿ, ವಡಿಕಲ್‌ಗ‌ಳಲ್ಲಿ ದೈವ ಕ್ರೂಸ್‌- ಇದಕ್ಕಾಗಿ 41.48 ಕೋ. ರೂ. ಮಂಜೂರು ಮಾಡಲಾಗಿದೆ.
– ತೆಕ್ಕುಂಬಾಟ್‌ ದ್ವೀಪವನ್ನು ಪ್ರವಾಸೋದ್ಯಮ ಗ್ರಾಮವಾಗಿ ಅಭಿವೃದ್ಧಿ.
– ವಿದೇಶಿ ಪ್ರವಾಸಿಗರಿಗೆ ಸಹಿತ ದೈವಗಳ ವೈವಿಧ್ಯತೆ ವೀಕ್ಷಿಸಲು ಮಡಕ್ಕರದಲ್ಲಿ ಓಪನ್‌ ಏರ್‌ ಥಿಯೇಟರ್‌, ವಾಡಿಕಲ್‌ನಲ್ಲಿ ಖಾಯಂ ರಂಗಭೂಮಿ ವೇದಿಕೆ ನಿರ್ಮಾಣ, ಹೌಸ್‌ ಬೋಟು ಸೌಕರ್ಯ – ಇದಕ್ಕಾಗಿ 22.23 ಕೋಟಿ ರೂ. ಮಂಜೂರು ಮಾಡಲಾಗಿದೆ.
– ಪಳಯಂಗಾಡಿಯಿಂದ ಕುಪ್ಪತ್‌ಗೆ ಕಾಂಡ್ಲಾ ಕ್ರೂಸ್‌.
– ಮುತ್ತುಕುಡದಲ್ಲಿ ದೋಣಿ ಸ್ಪರ್ಧೆ ಪವಿಲಿಯನ್‌, ಹೊಳೆಯಲ್ಲಿ ಸಂಚಾರಿ ಥಿಯೇಟರ್‌.
– ಕಾಂಡ್ಲಾ ಸಂಪತ್ತು ಬಗ್ಗೆ ಅಧ್ಯಯನ ಮಾಡಲು ಪ್ರತ್ಯೇಕ ವ್ಯವಸ್ಥೆ – ಇದಕ್ಕಾಗಿ 18.84 ಕೋಟಿ ರೂ. ಮಂಜೂರು.

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.