ಮಲಬಾರ್ ಕ್ರೂಸ್ ಟೂರಿಸಂ ಯೋಜನೆಗೆ ಅಂಗೀಕಾರ
Team Udayavani, May 20, 2018, 6:10 AM IST
ಕಾಸರಗೋಡು: ಕಾಸರಗೋಡು-ಕಣ್ಣೂರು ಜಿಲ್ಲೆಯ 8 ನದಿಗಳ ಆಸುಪಾಸಿನಲ್ಲಿ “ಮಲಬಾರ್ ಕ್ರೂಸ್ ಟೂರಿಸಂ ಯೋಜನೆ’ಯನ್ನು ಸಾಕಾರಗೊಳಿಸಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಅಂಗೀಕಾರ ನೀಡಿದೆ. ಹಿನ್ನೀರುಗಳಲ್ಲಿ ಜಲಸಾರಿಗೆ ಸೌಕರ್ಯವನ್ನು ಬಳಸಿಕೊಂಡು ಯೋಜಿಸಿರುವ ಈ ಯೋಜನೆಯಲ್ಲಿ ಆರಂಭಿಕ ಹಂತದಲ್ಲಿ ಮೂರು ನದಿಗಳನ್ನು ಕೇಂದ್ರೀಕರಿಸಿ ಯೋಜನೆ ಜಾರಿಗೊಳಿಸಲು ಈಗಾಗಲೇ 83 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.
ಮುತ್ತಪ್ಪನ್ ಆ್ಯಂಡ್ ಮಲಬಾರ್ ಕ್ಯೂಸಿನ್ ಕ್ರೂಸ್, ಕಾಂಡ್ಲ ಕ್ರೂಸ್. ದೈವ(ತೈಯ್ಯಂ) ಕಲೆಗಳ ಕ್ರೂಸ್ ಎಂಬೀ ಯೋಜನೆಗಳಿಗಾಗಿ 84 ಕೋಟಿ ರೂ. ಮಂಜೂರು ಮಾಡಲಾಗುವುದೆಂದು ಸಂಸದೆ ಪಿ.ಕೆ.ಶ್ರೀಮತಿ ಟೀಚರ್ ಅವರಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
ಕೇರಳ ರಾಜ್ಯ ಪ್ರವಾಸೋದ್ಯಮ ಇಲಾಖೆ ತಯಾರಿಸಿ ಸಮರ್ಪಿಸಿದ 325 ಕೋಟಿ ರೂಪಾಯಿಯ ಯೋಜನೆಯಲ್ಲಿರುವ ಇತರ ನದಿಗಳನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದು. ಈ ಯೋಜನೆಗೆ ಸಂಬಂಧಿಸಿ ರಾಜ್ಯ ಸರಕಾರ 53 ಕೋಟಿ ರೂ. ಈ ಮೊದಲೇ ಮಂಜೂರು ಮಾಡಿತ್ತು.
ಶಾಸಕರಾದ ಜೇಮ್ಸ್ ಮ್ಯಾಥ್ಯೂ ಮತ್ತು ಟಿ.ವಿ. ರಾಜೇಶ್ ನೇತೃತ್ವದಲ್ಲಿ ನಡೆಸಿದ ನದಿ ಯಾತ್ರೆ ಅನುಭವದ ಹಿನ್ನೆಲೆಯಲ್ಲಿ ಮಲಬಾರ್ ಕ್ರೂಸ್ ಟೂರಿಸಂ ಯೋಜನೆಗೆ ರೂಪು ನೀಡಲಾಗಿತ್ತು. ಕಣ್ಣೂರಿನ ಎಂ.ಕುಮಾರ್ ಆರ್ಕಿಟೆಕ್ಟ್Õ ತಯಾರಿಸಿದ ಯೋಜನೆಯನ್ನು ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಅಂಗೀಕರಿಸಿತ್ತು. ಈ ಯೋಜನೆ ಸಮಗ್ರ ವರದಿಯನ್ನು ತಯಾರಿಸಿ ಕೇಂದ್ರ ಯೋಜನೆಯನ್ನಾಗಿ ಪರಿವರ್ತಿಸಲು ಕೇಂದ್ರಕ್ಕೆ ಸಲ್ಲಿಸಲಾಗಿತ್ತು.
ಈ ಮಹತ್ವದ ಯೋಜನೆಗೆ ಅನುಮತಿ ನೀಡಬೇಕೆಂದು ಸಂಸದೆ ಪಿ. ಕೆ. ಶ್ರೀಮತಿ ಟೀಚರ್ ಹಲವು ಬಾರಿ ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದರಂತೆ ಕೇಂದ್ರ ಸರಕಾರ ನೇಮಿಸಿದ ಸಲಹಾ ಸಮಿತಿ ಪದಾಧಿಕಾರಿಗಳು ಬೋಟ್ ಯಾತ್ರೆ ನಡೆಸಿ ವರದಿ ಪರಿಗಣಿಸಿ ಪ್ರಥಮ ಹಂತದ ಮೊತ್ತವನ್ನು ಮಂಜೂರು ಮಾಡಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಜ್ಞ ಸಮಿತಿ ಶಿಫಾರಸು ಮಾಡಿತ್ತು.
ಪ್ರಥಮ ಹಂತದ ಯೋಜನೆಗಳು
– ವಳಪಟ್ಟಣ ಹೊಳೆಯಲ್ಲಿ ವಳಪಟ್ಟಣದಿಂದ ಆರಂಭಿಸಿ ಪರಶ್ಶಿನಿಕಡವಿನ ಮೂಲಕ ಮಲಪ್ಪುಟ್ಟಂ ಮುನಂಬುಕಡವು ತನಕ ಮುತ್ತಪ್ಪನ್ ಕ್ರೂಸ್.
– ಭಗತ್ ಸಿಂಗ್, ಸಿ.ಎಚ್.ಮುಹಮ್ಮದ್ ಕೋಯ, ಎ.ಕೆ.ಜಿ. ಹೆಸರಿನಲ್ಲಿರುವ ಜಟ್ಟಿಗಳಿಗೆ ತಲುಪುವ ಪ್ರವಾಸಿಗಳಿಗೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಸೌಲಭ್ಯಗಳ ಸ್ಥಾಪನೆ.
– ಪಾಂಬುರುತಿಯನ್ನು ಪ್ರವಾಸೋದ್ಯಮ ಗ್ರಾಮವಾಗಿ ಅಭಿವೃದ್ಧಿ.
– ಪ್ರಾದೇಶಿಕ ವೈವಿಧ್ಯತೆಗಳ ಊಟೋಪಚಾರ ಕೇಂದ್ರಗಳ ಸ್ಥಾಪನೆ.
– 50, 15, 10 ಎಂಬಂತೆ ಸೀಟುಗಳಿರುವ ಪ್ರಯಾಣ ಸೌಕರ್ಯ.
– ವಳಪಟ್ಟಣನಿಂದ ಅಳಿಕಲ್ ಫೆರಿ, ಮಾಟ್ಟೂಲ್, ತೆಕ್ಕುಂಬಾಟ್, ಪಳಯಂಗಾಡಿ, ವಡಿಕಲ್ಗಳಲ್ಲಿ ದೈವ ಕ್ರೂಸ್- ಇದಕ್ಕಾಗಿ 41.48 ಕೋ. ರೂ. ಮಂಜೂರು ಮಾಡಲಾಗಿದೆ.
– ತೆಕ್ಕುಂಬಾಟ್ ದ್ವೀಪವನ್ನು ಪ್ರವಾಸೋದ್ಯಮ ಗ್ರಾಮವಾಗಿ ಅಭಿವೃದ್ಧಿ.
– ವಿದೇಶಿ ಪ್ರವಾಸಿಗರಿಗೆ ಸಹಿತ ದೈವಗಳ ವೈವಿಧ್ಯತೆ ವೀಕ್ಷಿಸಲು ಮಡಕ್ಕರದಲ್ಲಿ ಓಪನ್ ಏರ್ ಥಿಯೇಟರ್, ವಾಡಿಕಲ್ನಲ್ಲಿ ಖಾಯಂ ರಂಗಭೂಮಿ ವೇದಿಕೆ ನಿರ್ಮಾಣ, ಹೌಸ್ ಬೋಟು ಸೌಕರ್ಯ – ಇದಕ್ಕಾಗಿ 22.23 ಕೋಟಿ ರೂ. ಮಂಜೂರು ಮಾಡಲಾಗಿದೆ.
– ಪಳಯಂಗಾಡಿಯಿಂದ ಕುಪ್ಪತ್ಗೆ ಕಾಂಡ್ಲಾ ಕ್ರೂಸ್.
– ಮುತ್ತುಕುಡದಲ್ಲಿ ದೋಣಿ ಸ್ಪರ್ಧೆ ಪವಿಲಿಯನ್, ಹೊಳೆಯಲ್ಲಿ ಸಂಚಾರಿ ಥಿಯೇಟರ್.
– ಕಾಂಡ್ಲಾ ಸಂಪತ್ತು ಬಗ್ಗೆ ಅಧ್ಯಯನ ಮಾಡಲು ಪ್ರತ್ಯೇಕ ವ್ಯವಸ್ಥೆ – ಇದಕ್ಕಾಗಿ 18.84 ಕೋಟಿ ರೂ. ಮಂಜೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ