Sandalwood: ಶ್ರೀಗಂಧ ಕೊರಡು ಸಹಿತ ಬಂಧನ
Team Udayavani, Mar 21, 2024, 10:37 AM IST
ಕಾಸರಗೋಡು: ಸ್ಕೂಟರ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 5.5 ಕಿಲೋ ಶ್ರೀಗಂಧ ಕೊರಡುಗಳನ್ನು ಚುನಾವಣ ಫ್ಲೈಯಿಂಗ್ ಸ್ಕ್ವ್ಯಾಡ್ ವಶ ಪಡಿಸಿಕೊಂಡಿದ್ದು, ಈ ಸಂಬಂಧ ಮುಳಿಯಾರು ಬಾವಿ ಕೆರೆಯ ಕೆ.ಮೂಸಾ (32) ಎಂಬಾತನನ್ನು ಬಂಧಿಸಿದೆ.
ಹೊಸದುರ್ಗ ಮಡಿಕೈ ವಾಚ್ಚಿಕ್ಕಾನದಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಪ್ಲೈಯಿಂಗ್ ಸ್ಕ್ವ್ಯಾಡ್ ಸೆಕ್ಟರ್ ನ ಮ್ಯಾಜಿಸ್ಟ್ರೇಟ್ ಹಾಗೂ ಕಯ್ಯೂರು-ಚೀಮೇನಿ ಪಂಚಾಯತ್ ಕಾರ್ಯದರ್ಶಿ ರಮೇಶನ್, ಅರಣ್ಯ ಅಧಿಕಾರಿಗಳು ಮತ್ತು ನೀಲೇಶ್ವರ ಎಸ್ಐ ಕೆ.ವಿ. ಮಧುಸೂದನನ್ ನೇತೃತ್ವದಲ್ಲಿ ಶ್ರೀಗಂಧ ವಶಪಡಿಸಲಾಯಿತು.
ಸ್ಕೂಟರ್ ಹಾಗೂ ಶ್ರೀಗಂಧದ ಮರಗಳನ್ನು ಕಡಿಯಲು ಬಳಸಲಾದ ಮೂರು ಕೊಡಲಿಗಳು, ಗರಗಸ ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ