ಬಾಳೆಗೊನೆಗಳ ಮಧ್ಯೆ ಗಾಂಜಾ ಬಚ್ಚಿಟ್ಟು ಸಾಗಾಟ; ಪೊಲೀಸರ ದಾಳಿ; ಆರೋಪಿಗಳು ಪರಾರಿ
Team Udayavani, Jul 22, 2020, 12:57 PM IST
ಮಂಜೇಶ್ವರ: ಬಾಳೆ ಗೊನೆಗಳ ಮಧ್ಯೆ ಒಂದು ಕ್ವಿಂಟಾಲ್ ಗಾಂಜಾವನ್ನು ಬಚ್ಚಿಟ್ಟು ಸಾಗಾಟ ಮಾಡುತಿದ್ದ ಪಿಕಪ್ ವಾಹನವನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದು ಅರೋಪಿಗಳು ಪರಾರಿಯಾದ ಘಟನೆ ಕರ್ನಾಟಕ _ಕೇರಳ ಗಡಿಭಾಗ ಕಾಸರಗೋಡಿನ ಕುಂಜತ್ತೂರು ಪದವಿನಲ್ಲಿ ನಡೆದಿದೆ.
ಪೊಲೀಸರು ಮಂಜೇಶ್ವರ ಕುಂಜತ್ತೂರು ಪದವು ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅದೇ ದಾರಿಯಾಗಿ ಬಂದ ಪಿಕಪ್ ವ್ಯಾನ್ನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಲಾಗಿದ್ದು , ನಿಲ್ಲಿಸಿದ್ದ ವಾಹನವನ್ನು ಪೊಲೀಸರು ತಪಾಸಣೆ ಮಾಡಲು ಸಮೀಪಿಸುತಿದಂತೆ ಆರೋಪಿಗಳು ವಾಹನವನ್ನು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಬೆನ್ನಟ್ಟಿದ ಪೊಲೀಸರು ಪಿಕಪ್ ವ್ಯಾನನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವ್ಯಾನ್ನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.
ತಪಾಸಣೆ ನಡೆಸಿದಾಗ ವಾಹನದಲ್ಲಿ ಗಾಂಜಾ ಪತ್ತೆಯಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.