ಕುಂಬಳೆ ರೈಲ್ವೇ ಕೆಳ ಸೇತುವೆ ಅವ್ಯವಸ್ಥೆ
ಪಂ. ಸದಸ್ಯನ ನೇತೃತ್ವದಲ್ಲಿ ದುರಸ್ತಿ
Team Udayavani, Jun 24, 2019, 5:29 AM IST
ಕುಂಬಳೆ: ಕುಂಬಳೆಯಲ್ಲಿ ನೂತನವಾಗಿ ನಿರ್ಮಿಸಿದ ರೈಲ್ವೇ ಕೆಳ ಸೇತುವೆಗೆ ಕುಂಬಳೆ ಪಂಚಾಯತ್ಸದಸ್ಯರಾದ ಕೆ. ಸುಧಾಕರ ಕಾಮತ್ ಅವರ ನೇತೃತ್ವದಲ್ಲಿ ದುರಸ್ತಿ ಭಾಗ್ಯ ಲಭಿಸಿತು.
ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ನೂತನವಾಗಿ ನಿರ್ಮಿಸಿದ ಕೆಳ ಸೇತುವೆಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸೇತುವೆಯ ಕೆಳಭಾಗದಲ್ಲಿ ನೀರು ಹೋಗದೆ ವಾಹನ ಸಂಚಾರಕ್ಕೆ ಹಾಗು ಪಾದಚಾರಿಗಳಿಗೆ ಹೋಗಲು ಸಾಧ್ಯವಾಗದೆ ಸಮಸ್ಯೆಗೆ ತುತ್ತಾಗಿದ್ದರು. ಈ ಬಗ್ಗೆ ನಾಗರಿಕರು ಕೊಡಲೇ ವಾರ್ಡ್ ಸದಸ್ಯರಾದ ಕೆ. ಸುಧಾಕರ ಕಾಮತ್ ಅವರ ಗಮನಕ್ಕೆ ತಂದರು. ಕೂಡಲೇ ಸ್ಪಂದಿಸಿದ ಸದಸ್ಯರು ನಾಗರಿಕರನ್ನು ಸೇರಿಸಿಕೊಂಡು ರೈಲ್ವೇ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜೆಸಿಬಿ ಮುಖಾಂತರ ಚರಂಡಿ ವ್ಯವಸ್ಥೆಯನ್ನು ಸರಿ ಮಾಡಿದರು. ಅದೇ ರೀತಿ ಸೇತುವೆಯ ಕೆಳಭಾಗದಲ್ಲಿ ನಿಂತ ನೀರನ್ನು ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ರಿಕ್ಷಾ ಚಾಲಕರು ಹಾಗೂ ನಾಗರಿಕರು ಸೇರಿ ಸ್ವಚ್ಛ ಮಾಡಿ ಚರಂಡಿಯನ್ನು ಶುಚಿಗೊಳಿಸಿ ಸಮಸ್ಯೆಯನ್ನು ಪರಿಹರಿಸಲಾಯಿತು.
ಸ್ಥಳೀಯರ ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಪಂಚಾಯತ್ ಸದಸ್ಯರಾದ ಕೆ. ಸುಧಾಕರ ಕಾಮತ್ ಅವರು ಸ್ಥಳೀಯರ ಪ್ರಶಂಸೆಗೆ ಪಾತ್ರರಾದರು.