ತ್ರಿದಿನ ರಂಜಾನ್ ಪ್ರಭಾಷಣ
Team Udayavani, May 14, 2019, 5:07 PM IST
ಬದಿಯಡ್ಕ : ಎಸ್.ಕೆ.ಎಸ್.ಎಸ್.ಎಫ್. ಬದಿಯಡ್ಕ ಮಂಡಲದ ತ್ರಿದಿನ ರಮ್ಲಾನ್ ಪ್ರಭಾಷಣವು ನೆಲ್ಲಿಕಟ್ಟೆ ಅಬ್ದು ರಸಾಕ್ ಒಡಿಟೋರಿಯಂನಲ್ಲಿ ಪ್ರಾರಂಭಗೊಂಡಿತು.
ವ್ಯವಸಾಯಿ ಪ್ರಮುಖರಾದ ಬೆರ್ಕಾ ಅಬ್ದುಲ್ಲ ಕುಂಞಿ ಹಾಜಿ ಧ್ವಜರೋಹಣಗೈದರು. ಪಿ.ಬಿ.ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದರು. ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಎಂ.ಎ. ಖಾಸಿಂ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು.