ಕಾಸರಗೋಡು ವೀಣಾವಾದಿನಿಯಲ್ಲಿ ನಾದೋಪಾಸನ ರಸಿಕಪ್ರಿಯ ಸಂಗೀತ ಕಾರ್ಯಕ್ರಮ
Team Udayavani, May 18, 2019, 4:29 PM IST
ಬದಿಯಡ್ಕ: ಮೇ.25 ರಂದು ಸದ್ಗುರು ತ್ಯಾಗರಾಜ ಸ್ವಾಮಿ ಸ್ಮರಣಾರ್ಥ ವೀಣಾವಾದಿನಿ ಬಳ್ಳಪದವು ನಾರಾಯಣೀಯಂನಲ್ಲಿ ನಡೆಯಲಿರುವ ವೀಣಾವಾದಿನಿಯಲ್ಲಿ ನಾದೋಪಾಸನ ರಸಿಕಪ್ರಿಯ ಸಂಗೀತ ಕಾರ್ಯಕ್ರಮವನ್ನು ವಿದ್ವಾನ್ ಯು.ಎಸ್.ರಾಮಕೃಷ್ಣ ಭಟ್ ಪುತ್ತೂರು ನಿರ್ವಹಿಸಲಿದ್ದಾರೆ.
ಆ ಪ್ರಯುಕ್ತ ವೀಣಾವಾದಿನಿ ಪೆರ್ಲ ಶಾಖೆಯ ವಿದ್ಯಾರ್ಥಿನಿ ಕು.ರತ್ನಮಾಲಾ ಇವರಿಂದ ನಾದೋಪಾಸನಾ ಸಂಗೀತ ಕಾರ್ಯಕ್ರಮವು ನಡೆಯಲಿದೆ. ವಯಲಿನ್ನಲ್ಲಿ ಪ್ರಭಾಕರ ಕುಂಜಾರು ಹಾಗೂ ಮೃದಂಗದಲ್ಲಿ ಶ್ರೀಧರ ಭಟ್ ಸಹಕರಿಸಲಿದ್ದಾರೆ.
ಅಪರಾಹ್ನ 4.45ಕ್ಕೆ ಪ್ರಾರಂಭವಾಗುವ ರಸಿಕಪ್ರಿಯ ಸಂಗೀತ ಕಾರ್ಯಕ್ರಮದಲ್ಲಿ ಕಾಂಞಂಗಾಡ್.ಟಿ.ಪಿ.ಶ್ರೀನಿವಾಸನ್ ಅವರ ಗಾಯನ ಕಾರ್ಯಕ್ರಮವು ನಡೆಯಲಿದ್ದು ವಯಲಿನ್ನಲ್ಲಿ ಎಸ್.ನವನೀತ ಕೃಷ್ಣ ಹಾಗೂ ಮೃದಂಗದಲ್ಲಿ ಯೋಗೀಶ ಶರ್ಮಾ ಬಳ್ಳಪದವು ಸಾಥ್ ನೀಡುವರು. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಪರೂಪದ ಸಂಗೀತ ರಸಸಂಜೆಗೆ ಸಾಕ್ಷಿಯಾಗಬಹುದಾಗಿದೆ.