ತುರ್ತುಪರಿಸ್ಥಿತಿ ಸಂತ್ರಸ್ತರ ನೆರವಿಗೆ ಸರಕಾರ ಮುಂದಾಗಲಿ


Team Udayavani, May 5, 2019, 6:11 AM IST

turtu-paristiti

ಕುಂಬಳೆ : ಕಳೆದ 1975ರಲ್ಲಿ ದೇಶಾದಾದ್ಯಂತ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತುಪರಿಸ್ಥಿತಿಯ ವಿರುದ್ಧ ಲೋಕನಾಯಕ ಜಯಪ್ರಕಾಶ್‌ ನಾರಾಯಣ ಅವರ ಲೋಕಸಂಘರ್ಷ ಸಮಿತಿ ಸಂಘಟನೆಯ ಮೂಲಕ ಹೋರಾಟ ನಡೆಸಿ ಮಡಿದವರ, ಹಲ್ಲೆಗೊಳಗಾಗಿ ಅಶಕ್ತರಾಗಿ ಹಾಸಿಗೆ ಹಿಡಿದಿರುವ ಮತ್ತು ಭೂಗತರಾಗಿ ಕಾರ್ಯಾಚರಿಸಿದವರಿಗೆ, ಸೊತ್ತುಗಳನ್ನು ಕಳಕೊಂಡ ಸಂಘ ಪರಿವಾರದ ಎಲ್ಲರಿಗೂ ರಾಜ್ಯ ಸರಕಾರ ಚಿಕಿತ್ಸಾ ನೆರವು, ಸಹಾಯಧನ ಮತ್ತು ಪಿಂಚಣಿ ನೀಡಬೇಕೆಂಬುದಾಗಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಸಮಿತಿಯ ಸಂಘಟನೆಯ ಕಾಸರಗೋಡು ಜಿಲ್ಲಾಧ್ಯಕ್ಷ ವಿ.ರವೀಂದ್ರನ್‌ ಸರಕಾರವನ್ನು ಒತ್ತಾಯಿಸಿದರು.

ಕಾಸರಗೋಡಿನ ಟೌನ್‌ ಬ್ಯಾಂಕ್‌ಹಾಲ್‌ನಲ್ಲಿ ನಡೆದ ಸಂಘಟನೆಯ ಸಭೆಯಲ್ಲಿ ಮಾತನಾಡಿದ ಅವರು ತುರ್ತುಪರಿಸ್ಥಿತಿ ವಿರುದ್ಧ ಹೋರಾಟವನ್ನು ದ್ವಿತೀಯ ಸ್ವಾತಂತ್ರÂ ಹೋರಾಟವಾಗಿ ಪರಿಗಣಿಸಬೆಕು. ಹೋರಾಟಗಾರರಿಗೆ ಸರಕಾರ ಮಾನ್ಯತೆ ನೀಡಬೇಕು.

ಹೋರಾಟದಲ್ಲಿ ಮಡಿದವರ ಮನೆಯವರಿಗೆ ಸರಕಾರದ ಎಲ್ಲ ಸವಲತ್ತುಗಳನ್ನು ನೀಡಬೇ ಕೆಂಬುದಾಗಿ ಸಭೆಯಲ್ಲಿ ಒತ್ತಾಯಿ ಸಲಾಯಿತು.
ಈ ಕುರಿತು ರಾಜ್ಯ ಸರಕಾರದ ಅಡಿಶನಲ್‌ ಚೀಫ್‌ ಸೆಕ್ರೆಟರಿಯವರು ಕಳೆದ     18-2-2019 ರಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲು ಸುತ್ತೋಲೆ ಹೊರಡಿಸಿರುವರು.ಇದರಂತೆ ಆಯಾ ಗ್ರಾಮ ಕಚೇರಿ ಗ್ರಾಮಾಧಿಕಾರಿಗಳಿಂದ ಜಿಲ್ಲಾಡಳಿತ ವರದಿ ಕೇಳಿದ್ದರೂ ಹೆಚ್ಚಿನ ಗ್ರಾಮಾಧಿಕಾರಿಗಳು ಲೋಕಸಭಾ ಚುನಾವಣೆಯ ನೆಪ ಒಡ್ಡಿ ಸಕಾಲದಲ್ಲಿ ವರದಿ ಸಲ್ಲಿಸದೆ ಕರ್ತವ್ಯದಲ್ಲಿ ವಿಮುಖತೆ ತೋರಿರುವುದಾಗಿಯೂ ಇನ್ನು° ಕೆಲವು ಆಡಳಿತ ಪಕ್ಷದ ಅಧಿಕಾರಿಗಳು ಇದನ್ನು ನಿರ್ಲಕ್ಷ್ಯಗೊಳಿಸಿರುವುದಾಗಿ ಸಭೆಯಲ್ಲಿ ಆರೋಪಿಸಲಾಯಿತು.

ದೇಶಾದಾದ್ಯಂತ ಕೇಂದ್ರ ಸರಕಾರದ ಆದೇಶದಂತೆ ಬಿ.ಜೆ.ಪಿ.ಆಡಳಿತ ನಡೆಸುವ ಎಲ್ಲ ಸರಕಾರಗಳು ತುರ್ತುಪರಿಸ್ಥಿತಿ ಸಂತ್ರಸ್ತರಿಗೆ ನೆರವು ಮತ್ತು ಪಿಂಚಣಿ ನೀಡುತ್ತಿದ್ದರೂ ರಾಜ್ಯ ಸರಕಾರ ಬಹಳಷ್ಟು ವಿಳಂಬವಾಗಿ ಇದಕ್ಕೆ ಮುಂದಾಗಿದೆ. ಅದರಲ್ಲೂ ತುರ್ತುಪರಿಸ್ಥಿತಿ ಕಾಲದಲ್ಲಿ ಯಾವುದೇ ಪ್ರತಿಭಟನೆ ನಡೆಸದೆ ಅವಿತಿದ್ದ ಸಿ.ಪಿ.ಎಂ.ಪಕ್ಷ ಇಂದು ಆಡಳಿತದ ನೆಪದಲ್ಲಿ ಪಕ್ಷದ ಕಾರ್ಯಕರ್ತರನ್ನು ಹೋರಾಟಗಾರರೆಂಬುದಾಗಿ ಬಿಂಬಿಸಿ ನೆರವಿಗೆ ಮುಂದಾಗಿದೆ ಎಂಬುದಾಗಿ ಸಭೆಯಲ್ಲಿ ಆರೋಪಿಸಲಾಯಿತು.

ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಮಿಸ ಕಾಯಿದೆಯಡಿ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ ನ್ಯಾಯವಾದಿ ಕೆ.ಸುಂದರ ರಾವ್‌ ಸಭೆಯ ಅಧ್ಯಕ್ಷತೆ ವಹಿಸಿದರು.

ಸಂಘಟನೆಯ ರಾಜ್ಯ ಸಮಿತಿ ಸದಸ್ಯ ತಂಬಾನ್‌ ಪಿ ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹೋರಾಟಗಾರರು ಮತ್ತು ಭೂಗತರಾಗಿ ಕಾರ್ಯಾಚರಿಸಿದ ಕಾರ್ಯಕರ್ತರು ಭಾಗವಹಿಸಿದರು.

ಸಂಘಟನೆಯ ಕೋಶಾಧಿಕಾರಿ ಎಂ.ಮಹಾಬಲ ರೈ ಅವರು ಸ್ವಾಗತಿಸಿದರು. ಕಾರ್ಯದರ್ಶಿ ವಂದಿಸಿದರು.

ಕೃಷಿಯಂತ್ರಗಳಿಗೆ ಹಾನಿ
ತುರ್ತುಪರಿಸ್ಥಿತಿ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 15 ತಂಡಗಳು ಹೋರಾಟ ನಡೆಸಿ ಸಹಸ್ರಾರು ಕಾರ್ಯಕರ್ತರು ಬಂಧನ ಕ್ಕೊಳಗಾಗಿ ಜೈಲುವಾಸ ಅನುಭವಿಸಿರುವರು.ಹಲವು ಹೋರಾಟಗಾರರಿಗೆ ಹಿಂಸೆ ನೀಡಿ ರಾತ್ರಿಕಾಲದಲ್ಲಿ ದೂರದ ಕಾಡಿನಲ್ಲಿ ನಿರ್ಜನ ಪ್ರದೇಶದಲ್ಲಿ ಬಿಡಲಾಗಿದೆ. ಪೈವಳಿಕೆ ಪಂಚಾಯತ್‌ ವ್ಯಾಪ್ತಿಯ ಹಲವಾರು ಸಂಘಪರಿವಾರದ ಮನೆಗಳಿಗೆ ಪೊಲೀಸರ ತಂಡ ದಾಳಿ ನಡೆಸಿರುವುದಲ್ಲದೆ ಕಂಗು ಬಾಳೆ ಕೃಷಿಗಳನ್ನು ಮತ್ತು ಕೃಷಿಯಂತ್ರಗಳಿಗೆ ಹಾನಿ ಎಸಗಿದೆ. ಆದರೆ ಸಂತ್ರಸ್ತರಿಗೆ ಈ ತನಕ ಯಾವುದೇ ಪರಿಹಾರ ದೊರೆಯದೆ ಅನ್ಯಾಯವಾಗಿದೆ.ಆದುದರಿಂದ ಇವರಿಗೆ ತತ್‌ಕ್ಷಣ ಸರಕಾರ ನೆರವು ಮತ್ತು ಪಿಂಚಣಿ ನೀಡಬೇಕೆಂಬುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಟಾಪ್ ನ್ಯೂಸ್

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.