ತೊಟ್ಟೆತ್ತೋಡಿ ಕ್ಷೇತ್ರದ ಜೀರ್ಣೋದ್ಧಾರ ಮನವಿ ಪತ್ರ ಕೊಂಡೆವೂರು ಶ್ರೀ ಬಿಡುಗಡೆ
Team Udayavani, Apr 16, 2019, 6:30 AM IST
ಕುಂಬಳೆ: ಶ್ರೀ ಮಲರಾಯ ಬಂಟ ದೆ„ವಸ್ಥಾನ ಬುಡ್ರಿಯ ತೊಟ್ಟೆತ್ತೋಡಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಇದರ ವಿನಂತಿ ಪತ್ರವನ್ನುಶ್ರೀ ಕ್ಷೇತ್ರದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಅವರು ಬಿಡುಗಡೆ ಗೊಳಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷೆ ಪ್ರೇಮಾ ಕೆ ಭಟ್ ಅವರು ಅಧ್ಯಕ್ಷತೆ ವಹಿಸಿದ್ದು, ಕಾರ್ಯಾಧ್ಯಕ್ಷ ವಸಂತ ಭಟ್ ತೊಟ್ಟೆತ್ತೋಡಿ, ವಾಮಯ ಪೂಜಾರಿ ಕಲ್ಲಗದ್ದೆ ಬುಡ್ರಿಯ, ಗಣಪತಿ ಭಟ್ ಅಮ್ಮೆನಡ್ಕ, ನಾರಾಯಣ ನಾ„ಕ್ ನಡುಹಿತ್ಲು ಕುಳೂರು, ದಾಮೋದರ ಸಿ ಅಡ್ಕದಗುರಿ, ತಿಮ್ಮಪ್ಪ ಮೂಲ್ಯ ಬುಡ್ರಿಯ ಅವರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಡಾ| ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಸದಾಶಿವರಾವ್ ಚಿಗುರುಪಾದೆ ಅವರು ವಂದಿಸಿದರು.