ಯಕ್ಷಗಾನ ಉಳಿಸುವ ಯುವ ಪೀಳಿಗೆ ಪ್ರಯತ್ನ ಸಂತೋಷಕರ: ರವೀಶ ತಂತ್ರಿ
Team Udayavani, Nov 17, 2018, 3:35 AM IST
ಕಾಸರಗೋಡು: ವಿಶ್ವದೆಲ್ಲೆಡೆ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಈ ಕಾಲಘಟ್ಟದಲ್ಲಿ ಕಾಸರಗೋಡು ಕೂಡ್ಲಿನ ಯುವಕರು ಯಕ್ಷಗಾನವನ್ನು ಉಳಿಸುವುದಕ್ಕೆ ಪ್ರಯತ್ನಿಸುತ್ತಿರುವುದು ಸಂತೋಷದ ವಿಷಯ ಎಂಬುದಾಗಿ ಕುಂಟಾರು ರವೀಶ ತಂತ್ರಿ ಅವರು ಅಭಿಪ್ರಾಯಪಟ್ಟರು. ಅವರು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ ದಲ್ಲಿ ಯಕ್ಷಾಭಿಮಾನಿ ಕೂಡ್ಲು ಇದರ ಪ್ರಥಮ ವಾರ್ಷಿಕೋತ್ಸವ ‘ಯಕ್ಷ ಸಂಭ್ರಮ -2018’ ನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದರು. ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಧೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ ಕೂಡ್ಲು ಅವರು ಅಂಬೇಡ್ಕರ್ ಕಾಲನಿಯ ನಾರಾಯಣ ಮತ್ತು ಮನ್ನಿಪ್ಪಾಡಿಯ ಜನಾರ್ದನ ಹೆಗಡೆ ಅವರಿಗೆ ಯಕ್ಷಾಭಿಮಾನಿ ಕೂಡ್ಲು ಸ್ವರೂಪಿಸಿದ ಚಿಕಿತ್ಸಾ ಸಹಾಯ ನಿಧಿಯನ್ನು ವಿತರಿಸಿದರು.
ಕೂಡ್ಲು ಮೇಳದ ವ್ಯವಸ್ಥಾಪಕ ರವಿರಾಜ ಅಡಿಗ ಮತ್ತು ಧಾರ್ಮಿಕ ಮುಂದಾಳು ವೆಂಕಟ್ರಮಣ ಹೊಳ್ಳ ಕಾಸರಗೋಡು ಶುಭಹಾರೈಸಿದರು. ಯಕ್ಷಾಭಿಮಾನಿ ಕೂಡ್ಲು ಇದರ ಅಧ್ಯಕ್ಷ ಸುನಿಲ್ ಗಟ್ಟಿ ಮತ್ತು ಕಾರ್ಯದರ್ಶಿ ಅರ್ಪಿತ್ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆಯೊಂದಿಗೆ ರಾಮ್ ಪ್ರಸಾದ್ ಕೂಡ್ಲು ಸಭಾ ಕಾರ್ಯಕ್ರಮವನ್ನು ಆರಂಭಿಸಿದರು. ಕಿಶೋರ್ ಕೂಡ್ಲು ಸ್ವಾಗತಿಸಿದರು. ಕೋಶಾಧಿಕಾರಿ ಪ್ರವೀಣ್ ಕೂಡ್ಲು ವಂದಿಸಿದರು.
ಸಮ್ಮಾನ
ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ವೇಷಧಾರಿ ಕಟೀಲು ಮೇಳಗಳಲ್ಲಿ ಸುದೀರ್ಘ ವರ್ಷಗಳ ತಿರುಗಾಟದ ನಂತರ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಪೆರುವಾಯಿ ನಾರಾಯಣ ಶೆಟ್ಟಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ರಂಜಿತ್ ಗೋಳಿಯಡ್ಕ ಸಮ್ಮಾನ ಪತ್ರ ವಾಚಿಸಿದರು. ಯುವ ಕಲಾವಿದ ಗುರುರಾಜ್ ಹೊಳ್ಳ ಬಾಯಾರು ಅಭಿನಂದನ ಭಾಷಣ ಮತ್ತು ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು.
ಯಕ್ಷಗಾನ ಪ್ರದರ್ಶನ
ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಭಾನುಮತಿ ಪರಿಣಯ ಮತ್ತು ಚಿತ್ರಸೇನ ಕಾಳಗ’ ಎಂಬ ಯಕ್ಷಗಾನ ಪ್ರದರ್ಶಿಸಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪದ್ಯಾಣ ಗಣಪತಿ ಭಟ್, ರಾಮಕೃಷ್ಣ ಮಯ್ಯ ಸಿರಿಬಾಗಿಲು, ತಲ್ಪನಾಜೆ ವೆಂಕಟ್ರಮಣ ಭಟ್ ಸಹಕರಿಸಿದರು. ಚೆಂಡೆ-ಮದ್ದಳೆಯಲ್ಲಿ ಹರೀಶ್ ರಾವ್ ಅಡೂರು, ಲವ ಕುಮಾರ್ ಐಲ, ಶ್ರೀಧರ ವಿಟ್ಲ, ಚಕ್ರತಾಳದಲ್ಲಿ ಚಂದ್ರಮೋಹನ ಕೂಡ್ಲು ಸಹಕರಿಸಿದರು. ಮುಮ್ಮೇಳದಲ್ಲಿ ಸ್ತ್ರೀ ಪಾತ್ರದಲ್ಲಿ ಬಾಲಕೃಷ್ಣ ಸೀತಾಂಗೋಳಿ, ಅರುಣ್, ಮವ್ವಾರು ಬಾಲಕೃಷ್ಣ ಮಣಿಯಾಣಿ ಸಹಕರಿಸಿದರು. ರಾಧಾಕೃಷ್ಣ ನಾವಡ ಮಧೂರು, ಶಂಭಯ್ಯ ಭಟ್ ಕಂಜರ್ಪಣೆ, ವಸಂತ ಗೌಡ ಕಾರ್ಯತ್ತಡ್ಕ, ಹರಿನಾರಾಯಣ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಸಂತೋಷ್ ಮಾನ್ಯ, ಮೋಹನ ಬೆಳ್ಳಿಪ್ಪಾಡಿ, ನಾರಾಯಣ ಮೂಲಡ್ಕ, ಡಾ| ಶ್ರುತಕೀರ್ತಿ ರಾಜ್, ಪ್ರಕಾಶ್ ನಾಯಕ್ ನೀರ್ಚಾಲು, ಸಚಿನ್ ಕೆ. ಅಮೀನ್, ಶಿವರಾಜ್ ಬಜಕೂಡ್ಲು, ಕಿಶೋರ್ ಕೂಡ್ಲು, ರಂಜಿತ್ ಗೋಳಿಯಡ್ಕ, ವಿಕಾಸ್, ವಿಘ್ನೇಶ್ ಕೂಡ್ಲು, ದತ್ತೇಶ್ ಮಾವಿನಕಟ್ಟೆ, ಲತೇಶ್, ಶ್ರೀರಾಮ್ ಕೂಡ್ಲು ಮೊದಲಾದವರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…