Alvas Virasat: ಜನಮನ ಸೆಳೆಯುತ್ತಿದೆ ಆಳ್ವಾಸ್‌ ವಿರಾಸತ್‌


Team Udayavani, Dec 15, 2023, 10:46 AM IST

6-alvas

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಾಲ್ಕು ದಿನಗಳ ಸಾಂಸ್ಕೃತಿಕ ಸಿರಿ-ಸೊಬಗಿನ 29ನೇ ವರ್ಷದ “ಆಳ್ವಾಸ್‌ ವಿರಾಸತ್‌ 2023′ ವಿದ್ಯಾಗಿರಿಯಲ್ಲಿ ಆರಳಿಕೊಂಡಿದೆ. ಸಂಜೆಯ ಸಾಂಸ್ಕೃತಿಕ ಕಲಾಪಗಳ ಮುನ್ನುಡಿಯಾಗಿ ಬೆಳಗಿನಿಂದ ರಾತ್ರಿ 10ರ ವರೆಗೆ ಕೃಷಿಸಿರಿ ವೇದಿಕೆ- ಮುಂಡ್ರುದೆಗುತ್ತು ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಮತ್ತು ಪರಿಸರದಲ್ಲಿ ಏಳು ಬಗೆಯ ಮೇಳಗಳ ತೆರೆ ತೆರೆದಾಗಿದೆ, ಜನ ಮನ ಸೆಳೆಯತೊಡಗಿದೆ.

ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲ-ಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಮೇಳ ಮತ್ತು ಛಾಯಾಚಿತ್ರಗಳ ಮೇಳ ಹೀಗೆ ಸಪ್ತ ಮೇಳಗಳ ಸಿರಿವಂತಿಕೆ ಇಲ್ಲಿ ಅನಾವರಣಗೊಂಡಿದೆ.

ಭುವನೇಶ್ವರಿ ದೇವಿ, ಆಕೆಯ ಸುತ್ತಲೂ ಭಾರತದ ವಿವಿಧ ರಾಜ್ಯಗಳ ಪ್ರಜೆಗಳ ಆಳೆತ್ತರದ ಮೂರ್ತಿಗಳು ಒಂದೆಡೆ ಭಾವೈಕ್ಯ ಸಾರುತ್ತಿವೆ. ಇನ್ನು ಕೋಟಿ ಚೆನ್ನಯ, ಸಂಗೊಳ್ಳಿರಾಯಣ್ಣ, ವಿವೇಕಾನಂದ, ಗಾಂಧಿ, ಬುದ್ದ, ಆದಿಯೋಗಿ ಶಿವ, ಮೀರಾಬಾಯಿ, ಬಾಹುಬಲಿ, ಹೂರಾಶಿಯ ನಡುವೆ ಕಂಗೊಳಿಸುವ ಅಂಬೇಡ್ಕರ, ಮೈಸೂರು ಮಹಾರಾಜರು, ಮತ್ತೂಂದೆಡೆ ಯಕ್ಷಗಾನದ ವೇಷಗಳು, ಮಹಿಷಾಸುರ, ರಾಧಾಕೃಷ್ಣ, ವೀರಗಾಸೆಯ ಶೂರ, ಡೊಳ್ಳು ಮೊದಲಾದ ಜಾನಪದ ಕುಣಿತಗಳ ಆಳೆತ್ತರದ ಮೂರ್ತಿಗಳು ಜೀವಂತ ಇರುವಂತ ಭಾಸವಾಗುತ್ತಿದೆ. ಬೃಹತ್‌ ಸಿಂಹ ಬಾಯ್ತೆರೆದು ತಲೆಯಲ್ಲಾಡಿಸುತ್ತಿರುವುದು, ಗಾಳಿಯ ಒತ್ತಡಕ್ಕೆ ವಾಹನ ಮಾರ್ಗದರ್ಶನ ಮಾಡುವ ಗಾಳಿ ಬೊಂಬೆ, ಬಕ, ಕೋಳಿ, ಹದ್ದು, ಆನೆ, ಜಿರಾಫೆ, ಹೂವುಗಳಲ್ಲಿ ಮೈದಳೆದ ನವಿಲು, ನಗಿಸುವ ಮೋಟು, ಕುಸ್ತಿಪಟು, ಪುಟಾಣಿಗಳ ನೆಚ್ಚಿನ ಕಾರ್ಟೂನ್‌ ಪಾತ್ರಗಳು, ಆನೆ, ಜಿರಾಫೆ, ಎತ್ತು, ಮಹಿಷಾಸುರ, ಯಕ್ಷಗಾನ, ಎತ್ತಿನ ಬಂಡಿ, ಚಕ್ರ, ಗಣಪತಿ, ಡೊಳ್ಳು ಕುಣಿತ, ವೀರಗಾಸೆ, ಹನುಮಂತ, ಲಕ್ಷ್ಮೀ ನರಸಿಂಹ, ವೀರಭದ್ರ ಕಥಕ್ಕಳಿ ಕಾಟೂìನ್‌ ಪಾತ್ರಧಾರಿಗಳಾದ ಚೋಟಾ ಭೀಮ್‌, ಚುಟ್ಕಿ, ರಾಜು, ಕಾಲಿಯಾ, ಡೊನಾಲ್ಡ್‌ ಡಕ್‌ ಇವೆಲ್ಲ ಪುಟಾಣಿಗಳನ್ನಲ್ಲದೆ ಹಿರಿಯರನ್ನೂ ರಂಜಿಸುವಂತಿವೆ.

ಈ ಕಲಾಕೃತಿಗಳನ್ನು ಮರ, ಲೋಹ, ಸಿಮೆಂಟ್‌, ರಬ್ಬರ್‌, ಬಟ್ಟೆ ಮೊದಲಾದ ಮಾಧ್ಯಮಗಳಿಂದ ರಚಿಸಲಾಗಿದೆ. ಪ್ರಮುಖ ವೇದಿಕೆಯ, ರಸ್ತೆ ಬದಿಯಲ್ಲೂ ಸಾಲಾಗಿ ನಿಂತ ಗೊಂಬೆಗಳು ಮುದ ನೀಡುತ್ತಿವೆ.

ಫಲಪುಷ್ಪ

ಚೆಂಡು ಹೂ, ಸದಾಪುಷ್ಪ, ಸೇವಂತಿಗೆ, ಜೀನ್ಯ, ಗೌರಿ, ಡಾಲಿ, ಲಿಲ್ಲಿ, ಕೇಪುಳ, ಸಿಲ್ವರ್‌ ಡಸ್ಟ್‌ ಲವೆಂಡಾರ್‌, ಅನೆಸೊಪ್ಪು, ಅಂತೋರಿಯಮ್‌, ಮಲ್ಲಿಗೆ, ಸಲ್ವಿಯ ಸ್ಪೆಂಡನ್ಸ್‌, ಸೆಲೋಶಿಯ, ಚೆ„ನೀಸ್‌ ಫ್ರಿಂಜ್‌, ಪಿಂಗ್‌ ಫಿಗ್‌ ಮೊದಲಾದ, ಮೂರೂವರೆ ಲಕ್ಷಕ್ಕೂ ಅಧಿಕ ಪುಷ್ಪಗಳ ನಂದನವನವೇ ಇಲ್ಲಿ ಅರಳಿಕೊಂಡಿದೆ.

ಹೂವಿನಿಂದಲೇ ರಚಿಸಿದ ಆನೆ, ಕುದುರೆ, ಜಿರಾಫೆ, ನವಿಲು ಮೊದಲಾದ ಕಲಾಕೃತಿಗಳು ನೋಟಕರ ಮನಸೆಳೆಯುತ್ತಿವೆ ಆವರಣದಲ್ಲೇ ಬೆಳೆಸಿದ ತರಕಾರಿಗಳಾದ ಬೆಂಡೆ , ಸೋರೆಕಾಯಿ, ಟೊಮೆಟೊ, ಬದನೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಹಾಗಲಕಾಯಿ, ಔಷಧೀಯ ಸಸ್ಯಗಳಾದ ಅಮ್ರ, ನಂದಿ, ಬಕುಳ, ಶಾಲ್ಮಲಿ, ಜಂಬೂ, ತಿಲಕ, ತಾರೇಕಾಯಿ, ಪ್ರಿಯಂಗು, ಕದಂಬ, ತೆಂದುಕ, ಅಶ್ವತ್ಥ, ಶಿರೀಶ, ಸಪ್ತ ಪರ್ಣಿ, ದೇವದಾರು, ಸಂಪಿಗೆ, ಅಶೋಕ, ಕಪಿತ, ಶಾಲವೃಕ್ಷ, ನಾಗಕೇಸರ, ಪಾಲಶ ಗಿಡ ಸೇರಿದಂತೆ ನೂರಾರು ಸಸ್ಯ ಸಂಕಲವಿದೆ.

ಕೃಷಿಮೇಳ

ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಘಟ್ಟಗಳ ಸಮಗ್ರ ಚಿತ್ರಣ ನೀಡುವ ಮಳಿಗೆಗಳು, ಪ್ರಾತ್ಯಕ್ಷಿಕೆಗಳು, ನರ್ಸರಿಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ಸಸ್ಯ ಪ್ರಭೇದಗಳು, ಉಪಕರಣ-ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇಲ್ಲಿವೆ.

ಆಹಾರ ಮೇಳ

ಆಹಾರ ಮೇಳದಲ್ಲಿ ಸುಮಾರು 150ಕ್ಕೂ ಅಧಿಕ ಮಳಿಗೆಗಳಲ್ಲಿ ಬಹುಬಗೆಯ ಆಹಾರ, ತಿಂಡಿತಿನಿಸುಗಳಿವೆ. ತಿಂಡಿ ತಿನಿಸು ಪಾನೀಯಾದಿಗಳಿಗೆ ಜನ ಮುಗಿಬೀಳುತ್ತಲಿದ್ದಾರೆ.

ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ

ವಿವಿಧ ರಾಜ್ಯಗಳ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿ ಕೈಗಾರಿಕೆ, ಕರಕುಶಲ, ಪ್ರಾಚ್ಯವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಬಟ್ಟೆಬರೆ ದಿರಿಸುಗಳ ಮಳಿಗೆಗಳೂ ಇವೆ.

ಚಿತ್ರಕಲಾ ಮೇಳ

ಸುಮಾರು 200ಕ್ಕೂ ಹೆಚ್ಚು ದೇಶ ವಿದೇಶಗಳ ಕಲಾಕಾರರ 500ಕ್ಕೂ ಅ ಕ ಚಿತ್ರಕಲಾಕೃತಿಗಳು ಪ್ರದರ್ಶನಕ್ಕಿವೆ.

ಛಾಯಾಚಿತ್ರಗಳ ಪ್ರದರ್ಶನ

ಸೃಜನಶೀಲತೆ ಸಾರುವ ಛಾಯಾಚಿತ್ರಪ್ರದರ್ಶನದೊಂದಿಗೆ ವಿರಾಸತ್‌ ಅಂಗವಾಗಿ ನಡೆಸಲಾದ ವನ್ಯಜೀವಿ ಛಾಯಾಚಿತ್ರದ ಸ್ಪರ್ಧೆಗೆ ಬಂದ ಸುಮಾರು 3000ಕ್ಕೂ ಅಧಿಕ ಛಾಯಚಿತ್ರಗಳ ಪ್ರದರ್ಶನ ನಡೆಯುತ್ತಿದೆ.

ಇದರ ಜತೆ ಜತೆಗೆ ಸ್ಕೌಟ್‌ -ಗೆ„ಡ್ಸ್‌ ಸಾಹಸಮಯ ಚಟುವಟಿಕೆ ಕೇಂದ್ರವು ಸುಮಾರು 2 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದ್ದು ಮಕ್ಕಳಲ್ಲಿ ಸಾಹಸಮಯ ಪ್ರವೃತ್ತಿ, ಧೈರ್ಯ ಹಾಗೂ ಸ್ಪಂದನೆಯನ್ನು ತುಂಬುವಲ್ಲಿ ಸಹಕಾರಿಯಾಗುವ ತಾಣವಾಗಿದೆ. ಈ ಎಲ್ಲ ಪ್ರದರ್ಶನ-ಮಾರಾಟ ಮಳಿಗೆ ಗಳು ಗುರುವಾರದಿಂದ ರವಿವಾರದ ತನಕ ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ತೆರೆದಿರುತ್ತವೆ. ಒಟ್ಟಿನಲ್ಲಿ ಮನಸ್ಸನ್ನರಳಿಸುವ ನಂದನವನ ಇಲ್ಲಿ ಅರಳಿಕೊಂಡಿದೆ.

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.