ಮಾರುಕಟ್ಟೆಯಲ್ಲಿ  ಸಿಗುತ್ತಿಲ್ಲ ಬೆಂಡೆ, ಮೆಣಸು ಗಿಡಗಳು


Team Udayavani, Jul 4, 2018, 2:25 PM IST

4-july-9.jpg

ಬಜಪೆ : ತರಕಾರಿ ಗಿಡಗಳಿಗೆ ಬಜಪೆ ವ್ಯಾಪ್ತಿಯಲ್ಲಿ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಇಲ್ಲಿ ಹೆಚ್ಚಿನ ತರಕಾರಿ ಗಿಡಗಳು ಸಂತೆಯಲ್ಲಿ ಬಿಕರಿಯಾಗುತ್ತವೆ. ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತರಕಾರಿ ಗಿಡಗಳಿಗೆ ಹಾನಿಯಾಗಿದ್ದು, ಮಾರುಕಟ್ಟೆಯಲ್ಲಿ ಗಿಡಗಳು ಸಿಗದೆ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.

ತರಕಾರಿಯ ರಾಣಿ ಎಂದೇ ಕರೆಯಲ್ಪಡುವ ಇಲ್ಲಿನ ಬೆಂಡೆಗೆ ಭಾರೀ ಬೇಡಿಕೆ ಇದೆ. ಹೆಚ್ಚಿನ ಕೃಷಿಕರು ಇದನ್ನು ಎಕರೆಗಟ್ಟಲೆ ಬೆಳೆಯುತ್ತಾರೆ. ಈ ಬಾರಿ ಮಹಾ ಮಳೆಗೆ ಭತ್ತದ ಕೃಷಿ ಜತೆಗೆ ತರಕಾರಿ ಕೃಷಿಗೆ ಪೆಟ್ಟು ಬಿದ್ದಿದೆ. ಇದರಿಂದ ತರಕಾರಿ ಕೃಷಿಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ಹೀಗಾಗಿ ಇಲ್ಲಿನ ಮಾರುಕಟ್ಟೆಯಲ್ಲಿ ಸದಾ ಕಾಣಸಿಗುತ್ತಿದ್ದ ಬೆಂಡೆ ಹಾಗೂ ಮೆಣಸಿನ ಗಿಡ ಈ ಬಾರಿ ಕಾಣುತ್ತಿಲ್ಲ.

ಇಲ್ಲಿನ ಕೃಷಿಕರು ತಿಂಗಳ ಹಿಂದೆಯೇ ತರಕಾರಿ ಬೆಳೆಗೆ ತಯಾರು ಮಾಡಿ ಬೀಜ ಬಿತ್ತನೆ ಮಾಡಿದ್ದರು. ಮಳೆ ಜಾಸ್ತಿಯಾದ ಕಾರಣ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ಗಿಡಗಳು ಮೇಲೆ ಬರಲಿಲ್ಲ. ಬಂದರೂ ಕೆಲವು ಅಲ್ಲಲ್ಲಿ ಮಾತ್ರ. ಗಿಡಗಳ ಬುಡಕ್ಕೆ ಒಂದು ಬಾರಿಯೂ ಮಣ್ಣು ಹಾಕಲು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಮಳೆ, ಬಿಸಿಲು ಇದ್ದರೆ ಒಂದು ತಿಂಗಳೊಳಗೆ ಎರಡು ಬಾರಿ ಗಿಡಗಳ ಬುಡಕ್ಕೆ ಮಣ್ಣು ಹಾಕಲು ಸಿಗುತಿತ್ತು. ಗಿಡಗಳು ಒಂದು ಅಡಿಯಷ್ಟು ಉದ್ದನೇ ಬೆಳೆಯುತ್ತಿತ್ತು. ಗೊಬ್ಬರ ಹಾಕಲು ಗಿಡಗಳು ಬೆಳೆದಿಲ್ಲ. ಸಾಲು ಸಾಲಲ್ಲಿ ಬಿತ್ತಿದ ಬೀಜಗಳಲ್ಲಿ ಅಲ್ಲಲ್ಲಿ ಮಾತ್ರ ಮೊಳಕೆ ಬಂದು ಗಿಡಗಳಾಗಿವೆ. ಬೇರೆ ಬೀಜ ಬಿತ್ತುವಂತೆ ಇಲ್ಲ. ಈಗಿರುವ ಗಿಡಗಳ ವ್ಯತ್ಯಾಸದಿಂದಾಗಿ ಬುಡಗಳಿಗೆ ಗೊಬ್ಬರ ಹಾಕಲು ತೊಂದರೆಯಾಗುತ್ತಿದೆ.

ಸೋಮವಾರ ಸ್ವಲ್ಪ ಬಿಸಿಲು ಕಾಣಿಸಿಕೊಂಡಿರುವುದು ಕೃಷಿಕರಲ್ಲಿ ಕೊಂಚ ನಿರೀಕ್ಷೆ ಮೂಡಿಸಿದೆ. ಹೀಗಾಗಿ ಸಂತೆಯಲ್ಲಿ ತರಕಾರಿ ಗಿಡ ಖರೀದಿಸಲು ಜನ ಮುಗಿಬಿದ್ದರು. ಒಂದೆರಡು ಕಟ್ಟು ಮಾತ್ರ ಬೆಂಡೆ, ಮೆಣಸಿನ ಗಿಡಗಳು ಮಾರುಕಟ್ಟೆಯಲ್ಲಿದ್ದದ್ದು ವ್ಯಾಪಾರಿಗಳು ಮಾತ್ರವಲ್ಲ ಗ್ರಾಹಕರಲ್ಲೂ ನಿರಾಸೆ ಮೂಡಿಸಿತ್ತು. ಹರಿವೆ 50 ಗಿಡಗಳ ಒಂದು ಕಟ್ಟು 30ರೂಪಾಯಿ, ಕುಂಬಳ ಕಾಯಿ 15 ಗಿಡಗಳ ಒಂದು ಕಟ್ಟು 40 ರೂಪಾಯಿ, 30 ಅಲಸಂಡೆ ಗಿಡಕ್ಕೆ 40 ರೂಪಾಯಿ, 30 ಬದನೆಗಿಡಗಳ ಕಟ್ಟು ಒಂದಕ್ಕೆ 30 ರೂಪಾಯಿಗೆ ಮಾರಾಟವಾಯಿತು. 20 ಬೆಂಡೆ ಗಿಡಗಳ ಒಂದು ಕಟ್ಟು 50 ರೂಪಾಯಿ, 300 ಮೆಣಸಿನ ಗಿಡಗಳ ಒಂದು ಕಟ್ಟು 80 ರೂಪಾಯಿಗೆ ಮಾರಾಟವಾದವು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಮಾರಾಟಕ್ಕೆ ಗಿಡವೇ ಇಲ್ಲ
ಪ್ರತಿ ವರ್ಷ ನಾನು 1.5 ಎಕರೆಯಲ್ಲಿ ಬೆಂಡೆ ಕೃಷಿ ಮಾಡುತ್ತಿದ್ದೆ. ಈ ಬಾರಿಯೂ ಮಾಡಿದ್ದೇನೆ. ಅದರ ಜತೆ ಹೀರೆಕಾಯಿ, ಮುಳ್ಳು ಸೌತೆ ಕೂಡ ಬೆಳೆದಿದ್ದೇನೆ. ಭಾರೀ ಮಳೆಯಿಂದಾಗಿ ಬೆಂಡೆ ಗಿಡಗಳು ಮೇಲೆ ಬರಲಿಲ್ಲ. ಬೆಳವಣಿಗೆ ಕುಂಠಿತವಾಗಿದೆ. ಕಳೆದ ಬಾರಿ ಸಾಲಿನಲ್ಲಿ ಸುಮಾರು 300 ಕಟ್ಟು ಬೆಂಡೆ ಗಿಡಗಳನ್ನು ಮಾರಾಟ ಮಾಡಿದ್ದೆ. ಆದರೆ ಈ ಬಾರಿ ಒಂದು ಕಟ್ಟು ಬೆಂಡೆ ಗಿಡವೂ ಮಾರುವಂತಿಲ್ಲವಾಗಿದೆ. ಮುಳ್ಳುಸೌತೆ ಗಿಡಗಳ ಬಳ್ಳಿ ಮೇಲೆ ಬರಬೇಕಿತ್ತು. ಅದು ಕೂಡ ಬಂದಿಲ್ಲ.
 - ಲಾನ್ಸಿ ಡಿ’ಸೋಜಾ
ಅಡ್ಕಬಾರೆಯ ಕೃಷಿಕ

ಮಳೆಗೆ ಕರಗಿತು ಗಿಡ
ಮಾರುಕಟ್ಟೆಯಿಂದ 250 ಹರಿವೆ ಗಿಡಗಳನ್ನು ಕೊಂಡು ಹೋಗಿ, 25 ಸೆಂಟ್ಸ್‌ ಜಾಗದಲ್ಲಿ ನೆಟ್ಟಿದ್ದೆ. ಮಳೆಗೆ ಎಲ್ಲ ಗಿಡಗಳು ಕರಗಿ ಹೋಗಿವೆ. ಈಗ ಮತ್ತೂಮ್ಮೆ ಕೊಂಡೊಯ್ಯಲು ಮಾರುಕಟ್ಟೆಗೆ ಬಂದಿದ್ದೇನೆ.
 - ಮ್ಯಾಕ್ಸಿಂ, ಪೆರ್ಮುದೆ 

ಟಾಪ್ ನ್ಯೂಸ್

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.