ಪಾಲಿಕೆಯಿಂದ ಹೊಸತಾದ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಕೆ
Team Udayavani, Jul 4, 2018, 1:06 PM IST
ಮಹಾನಗರ: ನಗರದ ಜೋಡುಮಠ ರಸ್ತೆಯ ಶ್ರೀ ರಾಘವೇಂದ್ರ ಬೃಂದಾವನದ ಮುಂದೆ ಹಾಕಿರುವ ಕಾಂಕ್ರೀಟ್ ಹಲಗೆಯೊಂದು ಮುರಿದು ಅಪಾಯವನ್ನು ಆಹ್ವಾನಿಸುತ್ತಿದೆ ಎಂದು ‘ಸುದಿನ’ ಈ ಹಿಂದೆ ಮಾಡಿದ ವರದಿಗೆ ಇದೀಗ ಸ್ಥಳೀಯಾಡಳಿತ ಸ್ಪಂದಿಸಿದೆ. ಕೇಂದ್ರ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಮಳೆ ನೀರು ಅಲ್ಲಿಯ ತ್ಯಾಜ ಸೇರಿ, ಹರಿದು ಭವಂತಿ ರಸ್ತೆಯಿಂದ ಸಾಗಿ ಬಂದು ಶ್ರೀ ರಾಘವೇಂದ್ರ ಬೃಂದಾವನದ ಬಳಿಯಿಂದ ಸಾಗಿ ತ್ರಿಶುಲೇಶ್ವರ ದೇವಸ್ಥಾನದ ಬಳಿಯಲ್ಲಿರುವ ಅಗಲವಾದ ಚರಂಡಿಯನ್ನು ಸೇರುತ್ತಿತ್ತು. ಈ ಚರಂಡಿಗೆ ಹಾಸಲಾಗಿದ್ದ ಕಾಂಕ್ರೀಟ್ ಹಲಗೆ ಮುರಿದಿತ್ತು. ಇದೇ ದೇವಸ್ಥಾನಕ್ಕೆ ದಿನಂಪ್ರತಿ ನೂರಾರು ಭಕ್ತರು ಆಗಮಿಸುತ್ತಿದ್ದು, ಅವರಿಗೂ ತೊಂದರೆ ಉಂಟಾಗುತ್ತಿತ್ತು.
ಈ ಬಗ್ಗೆ ;ಸುದಿನ’ ಜು. 2ರಂದು ‘ಜಿಲ್ಲಾಡಳಿತದ ಕಳಪೆ ಕಾಮಗಾರಿಗೆ ಇದೇ ಸಾಕ್ಷಿ’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿದ್ದು, ಇದನ್ನು ಗಮನಿಸಿದ ಸ್ಥಳೀಯಾಡಳಿತ ಇದೀಗ ಇದೇ ಜಾಗದಲ್ಲಿ ಹೊಸತಾದ ಕಾಂಕ್ರಿಟ್ ಸ್ಲಾಬ್ ಅಳವಡಿಸಿದೆ. ಶ್ರೀ ರಾಘವೇಂದ್ರ ಬೃಂದಾವನದ ಮುಂದೆ ಹೊಸದಗಿನ ಅಳವಡಿಸಿರುವ ಕಾಂಕ್ರೀಟ್ ಹಲಗೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ
ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!
Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!
Hubli; ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು
ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.