Manipal-Statebank: ಎಸಿ ಬದಲು ನಾನ್ ಎಸಿ ಬಸ್ ಸಂಚಾರ
ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆ ಲಾಭ
Team Udayavani, Feb 9, 2024, 10:29 AM IST
ಮಂಗಳೂರು: ಮಂಗಳೂರಿನ ಸ್ಟೇಟ್ಬ್ಯಾಂಕ್ನಿಂದ ಮಣಿಪಾಲ ನಡುವೆ ಕಾರ್ಯಾಚರಿಸುತ್ತಿದ್ದ ಹವಾನಿಯಂತ್ರಿತ ಕೆಎಸ್ಸಾರ್ಟಿಸಿ ಬಸ್ಗಳ ಬದಲು ಕರ್ನಾಟಕ ಸಾರಿಗೆ ಬಸ್ ಓಡಾಟ ಆರಂಭವಾಗಿದ್ದು, ಮಣಿಪಾಲ – ಉಡುಪಿ-ಸ್ಟೇಟ್ಬ್ಯಾಂಕ್ ಮತ್ತು ಉಡುಪಿ-ಮಂಗಳೂರು (ಬಿಜೈ) ರೂಟ್ಗಳಲ್ಲಿ ಪ್ರತ್ಯೇಕ ಬಸ್ಗಳು ಸಂಚರಿಸುತ್ತಿವೆ.
ಈ ಹಿಂದೆ ಮಂಗಳೂರು ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ 4 ವೋಲ್ವೋ ಬಸ್ಗಳು ಸಂಚರಿಸುತ್ತಿದ್ದವು. ವಿಮಾನ ನಿಲ್ದಾಣ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾದ ಕಾರಣ ಆ ಟ್ರಿಪ್ಗಳನ್ನು ರದ್ದುಗೊಳಿಸಿ ಆದೇ ಬಸ್ಸನ್ನು ಸ್ಟೇಟ್ಬ್ಯಾಂಕ್ನಿಂದ ಮಣಿಪಾಲಕ್ಕೆ ಕಾರ್ಯಾಚರಣೆ ಗೊಳಿಸಲಾಗಿತ್ತು. ಆದರೆ ಆ ಬಸ್ಗಳು ದುರಸ್ತಿಗೆ ಬಂದಿರುವ ಕಾರಣ ಆ ಮಾರ್ಗದಲ್ಲಿ ಸಾರಿಗೆ ಬಸ್ ಸಂಚರಿಸುತ್ತಿದೆ.
ರಾಜ್ಯ ಸರಕಾರ ಶಕ್ತಿ ಯೋಜನೆ ಆರಂಭಗೊಳಿಸಿದ ಬಳಿಕ ಈ ರೂಟ್ಗಳಲ್ಲಿ ಮಹಿಳೆಯರಿಗೆ ಅನುಕೂಲವಾಗುವ ಉದ್ದೇಶ ದಿಂದ ಸಾರಿಗೆ ಬಸ್ಗಳನ್ನು ಬಿಡುವಂತೆಯೂ ಆಗ್ರಹ ಕೇಳಿಬಂದಿತ್ತು. ಸದ್ಯ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದ್ದು ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ