ಬಂಟ್ವಾಳ: 600 ಮಂದಿಗೆ ಊಟ ನೀಡುವ ಮೂಲಕ ಒಂದು ದಿನದ ಹಸಿವು ನೀಗಿಸಿ ಮಾದರಿಯಾದ ಯುವಕರು
Team Udayavani, May 3, 2021, 9:16 PM IST
ಬಂಟ್ವಾಳ: ಬಿ.ಸಿ.ರೋಡಿನಿಂದ ಮೂಲ್ಕಿವರೆಗೆ ರಸ್ತೆ ಬದಿಯಲ್ಲಿದ್ದ ನಿರ್ಗತಿಕರು, ಚೆಕ್ ಪೋಸ್ಟ್ ನಲ್ಲಿದ್ದ ಪೊಲೀಸರು ಸೇರಿದಂತೆ ಸುಮಾರು 600 ಮಂದಿಗೆ ಊಟ ನೀಡುವ ಮೂಲಕ ಬಂಟ್ವಾಳದ ಯುವಕ ಮಾದರಿಯಾಗಿದ್ದಾರೆ. ಜತೆಗೆ ಬಿಜೈ ಕಾಪಿಕಾಡಿನ ಸ್ನೇಹದೀಪ್ ಹೋಮ್ ಫಾರ್ ಚಿಲ್ಡ್ರನ್ಸ್ ಸಂಸ್ಥೆ ಹಾಗೂ ಮೂಲ್ಕಿಯ ಮೈಮುನಾ ಫೌಂಡೇಶನ್ ಆಶ್ರಮವಾಸಿಗಳಿಗೂ ಊಟ ನೀಡಿದ್ದಾರೆ.
ಮೇ 2 ರಂದು ಬಂಟ್ವಾಳದ ಅಜಿಲಮೊಗರಿನ ಅಭಿಷೇಕ್ ಸುವರ್ಣ ಹಾಗೂ ಆತನ ಸ್ನೇಹಿತರು ಈ ಕಾರ್ಯ ಮಾಡಿದ್ದು, ಮುಂದಿನ ದಿನಗಳಲ್ಲಿ ಲಾಕ್ಡೌನ್ ಸಮಯ ಪ್ರತಿವಾರ ಈ ರೀತಿ ಊಟ ನೀಡುವ ಆಲೋಚನೆ ಹೊಂದಿದ್ದಾರೆ. ಪಿಕ್ಆಪ್ ವಾಹನದ ಮೂಲಕ ಸಸ್ಯಹಾರ ಹಾಗೂ ಮಾಂಸಾಹಾರ ಎರಡೂ ಬಗೆಯ ಆಹಾರವನ್ನೂ ನೀಡಿದ್ದಾರೆ.
ಊಟದ ಜತೆಗೆ ನೀರಿನ ಬಾಟಲ್ ಹಾಗೂ ಕೋವಿಡ್ನಿಂದ ರಕ್ಷಣೆಗೆ ಮಾಸ್ಕ್ ನೀಡಿ ಅದನ್ನು ಬಳಕೆ ಮಾಡುವಂತೆಯೂ ಕಿವಿಮಾತು ಹೇಳಿದ್ದಾರೆ. ಅಭಿಷೇಕ್ ಜತೆಗೆ ಅವರ ಸ್ನೇಹಿತರಾದ ನಟರಾಜ್ ಸುವರ್ಣ, ಕ್ಯಾನನ್ ಲೋಬೊ, ಧೀರ್ ಡಿಸೋಜಾ, ಲತೀಶ್ ಪೂಜಾರಿ, ಸಂದೀಪ್ ಶೆಟ್ಟಿ, ಪ್ರಕಾಶ್ ಅಂಚನ್, ಸಂತೋಷ್ ಕುಲಾಲ್, ಗಿರೀಶ್ ಕುಲಾಲ್, ಶಿವಾನಂದ್, ನಿತೇಶ್ ಪೂಜಾರಿ ಹಾಗೂ ಜಗದೀಶ್ ಪೂಜಾರಿ ಅವರು ಸಹಕರಿಸಿದ್ದಾರೆ.
ಅನ್ನಕ್ಕಾಗಿ ಪರಿತಪಿಸುವವರ ಒಂದು ದಿನದ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗಿದ್ದು, ಮುಂದೆ ಪ್ರತಿ ವಾರ ಇದೇ ರೀತಿ ಊಟ ನೀಡುವ ಆಲೋಚನೆ ಇದೆ ಎಂದು ಅಭಿಷೇಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!