ಕೋವಿಡ್ ಮೂರನೇ ಅಲೆಗೆ ಸಿದ್ಧರಾಗಿ : ಮುನ್ಸಿಪಲ್ ಕಮಿಷನರ್ ಗೆ ಆದಿತ್ಯ ಠಾಕ್ರೆ ಹೇಳಿದ್ದೇನು.?
Team Udayavani, May 3, 2021, 9:44 PM IST
ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರ : ಕೋವಿಡ್ ಸೋಂಕಿನ ಮುಂದಿನ ಅಲೆಗೆ ಸಿದ್ಧತೆಯಲ್ಲಿರುವಂತೆ ಪೀಡಿಯಾಟ್ರಿಕ್ ಕೋವಿಡ್-19 ಕೇರ್ ವಾರ್ಡ್ ರಚಿಸುವಂತೆ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆದಿತ್ಯ ಠಾಕ್ರೆ ಸೂಚಿಸಿದ್ದಾರೆ.
ಸೋಮವಾರ (ಮೇ 3) ಹೆಚ್ಚುವರಿ ಮುನ್ಸಿಪಲ್ ಕಮಿಷನರ್ (ಎಂಸಿಜಿಎಂ) ಮುಂಬೈ ಸಂಜೀವ್ ಜೈಸ್ವಾಲ್ ಅವರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರುವುದನ್ನು ಆದಿತ್ಯ ಠಾಕ್ರೆ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ, ನಾವು ಮಹಾರಾಷ್ಟ್ರದಲ್ಲಿ 3 ನೇ ಅಲೆಯನ್ನು ನಿಯಂತ್ರಣ ಮಾಡುವುದ್ಕಾಗಿ ತಯಾರಿ ನಡೆಸುತ್ತಿರುವಾಗ, ಮುಂಬೈನಲ್ಲಿ ನಾವು ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲು ನಾನು ಎಎಂಸಿ ಸಂಜೀವ್ ಜೈಸ್ವಾಲ್ ಜಿ ಅವರನ್ನು ಭೇಟಿಯಾದೆ. ಮುಂದಿನ ಅಲೆಯನ್ನು ಎದುರಿಸಲು ಪೀಡಿಯಾಟ್ರಿಕ್ ಕೋವಿಡ್ ಕೇರ್ ವಾರ್ಡ್ ಅನ್ನು ನಾವು ರಚಿಸಬೇಕೆಂದು ನಾನು ಅವರಿಗೆ ಸೂಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಓದಿ : ಬಂಟ್ವಾಳ: 600 ಮಂದಿಗೆ ಊಟ ನೀಡುವ ಮೂಲಕ ಒಂದು ದಿನದ ಹಸಿವು ನೀಗಿಸಿ ಮಾದರಿಯಾದ ಯುವಕರು
As we prepare for 3rd wave capacity building in Maharashtra, I met AMC @SJaiswal_IAS ji to discuss the measures we’ve undertaken in Mumbai.
I have suggested to him that we create a paediatric covid care ward anticipating the next wave and the demographic it may target (1/n)
— Aaditya Thackeray (@AUThackeray) May 3, 2021
ಪೀಡಿಯಾಟ್ರಿಕ್ ಕೋವಿಡ್ ಕೇರ್ ಕೇರ್ ಜೊತೆಗೆ, ನಾವು ಈಗ ಗಮನಹರಿಸಿರುವ ಮತ್ತೊಂದು ಅಂಶವೆಂದರೆ, ಪೋಷಕರಿಗೆ ಕೋವಿಡ್ ಕೇರ್ ಕೇಂದ್ರಗಳಲ್ಲಿ ಇರಬೇಕಾಗಬಹುದು ಮತ್ತು ಅವರ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದಿರಬಹುದು. ಆ ಸಮಸ್ಯೆಯನ್ನು ನಿವಾರಿಸುವ ಬಗೆಗೂ ಕೂಡ ನಾವು ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳು ಮುಂಬೈನಲ್ಲಿ ಕೋವಿಡ್ ರೂಪಾಂತರಿ ಸೋಂಕು ಭಾರಿ ಏರಿಕೆ ಕಂಡಿದ್ದು, ಹಾಸಿಗೆಗಳು ಮತ್ತು ಸೌಲಭ್ಯಗಳ ಲಭ್ಯತೆಯಿಂದಾಗಿ ನಾವು ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಸಾಧಯವಾಯಿತು. ಮುಂಬರುವ ಕೆಲವು ದಿನಗಳಲ್ಲಿ ನ್ಯೂ ಜಂಬೋಸ್ ನಲ್ಲಿ ಸುಮಾರು 6500 O2 ಹಾಸಿಗೆಗಳು ಮತ್ತು ಸುಮಾರು 1500 ಹೆಚ್ಚು ಐಸಿಯು / ಎಚ್ ಡಿ ಯು ಹಾಸಿಗೆಗಳ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಓದಿ : ಬಾಗಲಕೋಟೆ: ಕಾಳ ಸಂತೆಯಲ್ಲಿ ರೆಮ್ ಡಿಸ್ವಿಯರ್ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!