ಪೋಯಿಲೋಡಿ ಕಿಂಡಿ ಅಣೆಕಟ್ಟು ನಿರ್ಮಿಸಿ
Team Udayavani, Mar 12, 2021, 2:20 AM IST
ಬಂಟ್ವಾಳ: ಹರಿಯುವ ನೀರಿಗೆ ಕಟ್ಟ ಹಾಕಿ ಅಲ್ಲಿನ ನೀರನ್ನು ಕೃಷಿ ಕಾರ್ಯಕ್ಕೆ ಬಳಸುವ ಕಾರ್ಯ ಹೆಚ್ಚಿನ ಕಡೆಗಳಲ್ಲಿ ನಡೆಯುತ್ತಿದ್ದು, ಸರಕಾರವು ಸಣ್ಣ ನೀರಾವರಿ ಇಲಾಖೆಯ ಮೂಲಕ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ಕೃಷಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುತ್ತಿದೆ. ನಾವೂರು ಗ್ರಾಮದ ಪೊçಲೋಡಿಯಲ್ಲಿ ತೋಡಿಗೆ ಇದೀಗ ತಾತ್ಕಾಲಿಕ ಕಟ್ಟ ಹಾಕುತ್ತಿದ್ದು, ಈ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಕೃಷಿಕರು ಆಗ್ರಹಿಸುತ್ತಿದ್ದಾರೆ.
ಸುಮಾರು 5 ದಶಕಗಳ ಹಿಂದೆ ಕೃಷಿಕರೇ ಸೇರಿ ಕಲ್ಲು, ಮಣ್ಣನ್ನು ಬಳಸಿ ಕಟ್ಟ ನಿರ್ಮಿಸುತ್ತಿದ್ದರು. ಆದರೆ ವಿದ್ಯುತ್ ಪಂಪ್ಗ್ಳು, ಕೊಳವೆಬಾವಿಗಳು ಬಂದ ಬಳಿಕ ಇಂತಹ ಕಟ್ಟಗಳು ದೂರವಾದವು. ಆದರೆ ಈಗ ಇಂತಹ ಕಟ್ಟಗಳೇ ಅನಿವಾರ್ಯವಾಗಿದ್ದು, ಹೀಗಾಗಿ ಎಲ್ಲ ಕಡೆಯೂ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
10 ಮಂದಿ ಸೇರಿ ಕಟ್ಟ ನಿರ್ಮಾಣ :
ಪೊçಲೋಡಿ ಪ್ರದೇಶದಲ್ಲಿ ತೋಡಿನ ಒಂದು ಬದಿ ನಾವೂರು ಗ್ರಾ.ಪಂ.ಹಾಗೂ ಮತ್ತೂಂದು ಬದಿ ಪಂಜಿಕಲ್ಲು ಗ್ರಾಮ ಪಂಚಾಯತ್ಗೆ ಸೇರುತ್ತದೆ. ಹಿಂದೆ ಸುಮಾರು 10 ರೈತರು ಸೇರಿ ಇಲ್ಲಿ ಕಟ್ಟ ನಿರ್ಮಿಸಿ ತಮ್ಮ ತೋಟಕ್ಕೆ ನೀರು ಹರಿಸಿ ಕೊಳ್ಳುತ್ತಿದ್ದರು. ಆದರೆ ಕಾಲಕ್ರಮೇಣ ಅವ ರಿಗೆ ನೀರಿನ ಬೇರೆ ಮೂಲಗಳು ಸಿಕ್ಕಿದ ಪರಿಣಾಮ ಕಟ್ಟ ನಿರ್ಮಿಸುವುದನ್ನೇ ಬಿಟ್ಟು ಬಿಟ್ಟರು.
ಪ್ರಸ್ತುತ ಸ್ಥಳೀಯ ಹೆಕ್ಕೊಟ್ಟು ನಿವಾಸಿ ಪ್ಲಾಸಿಡ್ ಡಿ’ಸೋಜಾ ಸ್ವಂತ ಖರ್ಚಿನಿಂದ ಗೋಣಿ ಚೀಲಗಳನ್ನು ಬಳಸಿ ಕಟ್ಟ ನಿರ್ಮಿಸುತ್ತಾರೆ.
ಸಮೃದ್ಧ ನೀರು :
ತೋಡಿನಲ್ಲಿ ನೀರು ಹರಿಯುತ್ತಿದ್ದರೂ, ರೈತರು ತಮ್ಮ ತೋಟಗಳಿಗೆ ಕೊಳವೆ ಬಾವಿಯ ಮೂಲಕವೇ ನೀರು ಹಾಕಿದಾಗ ತೋಡಿನಲ್ಲಿ ಹರಿಯುವ ನೀರಿನ ಪ್ರಮಾಣವೂ ಕಡಿಮೆಯಾಗುತ್ತದೆ. ಜನವರಿ-ಫೆಬ್ರವರಿ ಬಂತೆಂದರೆ ಸಾಕು ತೋಡುಗಳು ಬತ್ತಿ ಹೋಗಿರುತ್ತವೆ. ಆದರೆ ಕಿಂಡಿ ಅಣೆಕಟ್ಟುಗಳಿರುವ ತೋಡುಗಳಲ್ಲಿ ಬಿರು ಬೇಸಗೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುವುದನ್ನು ಕಾಣ ಬಹುದಾಗಿದೆ.
ಕಿಂಡಿ ಅಣೆಕಟ್ಟುಗಳ ಕುರಿತು ರೈತರು ಶಾಸಕರ ಮೂಲಕ ಮನವಿ ನೀಡಬೇಕಾಗುತ್ತದೆ. ಅಣೆಕಟ್ಟಿಗೆ ಅನುದಾನಗಳು ಶಾಸಕರ ಮೂಲಕ ಬರುವುದರಿಂದ ಪ್ರತೀವರ್ಷ ಅವರ ಮೂಲಕವೇ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ. ಬೇಕಾದ ಕಿಂಡಿ ಅಣೆಕಟ್ಟಿನ ಸ್ಥಳ ಪರಿಶೀಲನೆ ನಡೆಸಿ ಯೋಜನಾ ವರದಿ ಸಿದ್ಧಪಡಿಸಬೇಕಾಗುತ್ತದೆ.
-ಶಿವಪ್ರಸನ್ನ ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ.
ಹಿಂದೆ ನಾವು 10 ರೈತರು ಸೇರಿಕೊಂಡು ಕಟ್ಟ ನಿರ್ಮಿಸಿ ನೀರನ್ನು ಉಪಯೋಗಿಸುತ್ತಿದ್ದೆವು. ಆದರೆ ಈಗ ರೈತರಿಗೆ ನೀರಿನ ಬೇರೆ ಮೂಲ ಇರುವುದರಿಂದ ಪ್ಲಾಸಿಡ್ ಡಿ’ಸೋಜಾ ಅವರು ತಮ್ಮ ಸ್ವಂತ ಖರ್ಚಿನಿಂದ ಕಟ್ಟ ನಿರ್ಮಿಸುತ್ತಿದ್ದಾರೆ. ಹಿಂದೊಮ್ಮೆ ಕಿಂಡಿ ಅಣೆಕಟ್ಟು ಬೇಕು ಎಂದು ಪಂಜಿಕಲ್ಲು ಗ್ರಾ.ಪಂ.ಗೆ ಮನವಿ ನೀಡಿದ್ದೆವು. -ಮ್ಯಾಕ್ಸಿಂ ಸಿಕ್ವೇರಾ, ಸ್ಥಳೀಯ ಕೃಷಿಕ.
-ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ