ATM Fraud: ಎಟಿಎಂ ಬಳಸಲು ಸಹಾಯ ಮಾಡಿದಾತನಿಂದ ವಂಚನೆ!
1 ಲಕ್ಷ ರೂ. ಲಪಟಾಯಿಸಿದ ಅಪರಿಚಿತ
Team Udayavani, Mar 16, 2024, 9:30 AM IST
ಬೆಳ್ತಂಗಡಿ: ಎಟಿಎಂನಿಂದ ಹಣ ಪಡೆಯಲು ಸಹಾಯ ಮಾಡಿದ ವ್ಯಕ್ತಿಯೊಬ್ಬ ಬಳಿಕ ಅವರ ಖಾತೆಯಿಂದ 1 ಲಕ್ಷಕ್ಕೂ ಅಧಿಕ ಹಣ ತೆಗೆದು ವಂಚಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಎಟಿಎಂ ಬಳಕೆ ಗೊತ್ತಿಲ್ಲದ ಮೇಲಂತಬೆಟ್ಟು ಗ್ರಾಮದ ಶರೀಫ್ (53) ಅವರು ಜ. 11ರಂದು ಎಟಿಎಂನಿಂದ ಹಣ ಪಡೆಯಲು ಅಪರಿಚಿತ ವ್ಯಕ್ತಿಯೊಬ್ಬನ ಸಹಾಯ ಬಯಸಿ ಕಾರ್ಡ್, ಪಿನ್ ನಂಬರ್ ಇತ್ಯಾದಿ ವಿವರಗಳನ್ನು ಆತನಿಗೆ ನೀಡಿದರು. ಆತ ಅವರು ಹೇಳಿದಷ್ಟು (3 ಸಾವಿರ ರೂ.) ಹಣ ತೆಗೆದುಕೊಟ್ಟ ಬಳಿಕ ಬೇರೆ ಯಾವುದೋ ಕಾರ್ಡನ್ನು ಮರಳಿಸಿದ್ದ.
ಆ ವಿಷಯ ಅರಿಯದ ಅವರು ಹಣ, ಕಾರ್ಡ್ ಪಡೆದು ಮರಳಿದ್ದರು. ಮೂರು ದಿನಗಳ ಅನಂತರ ಅವರ ಖಾತೆಯಿಂದ 1,05,300 ರೂ. ಕಡಿತವಾಯಿತು. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಲು ತೆರಳಿದಾಗ ಎಟಿಎಂನಲ್ಲಿ ನೆರವು ನೀಡಿದ ವ್ಯಕ್ತಿ ಬೇರೊಂದು ಎಟಿಎಂ ಕಾರ್ಡನ್ನು ನೀಡಿರುವುದು ಅರಿವಿಗೆ ಬಂತು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!