ATM Fraud: ಎಟಿಎಂ ಬಳಸಲು ಸಹಾಯ ಮಾಡಿದಾತನಿಂದ ವಂಚನೆ!
1 ಲಕ್ಷ ರೂ. ಲಪಟಾಯಿಸಿದ ಅಪರಿಚಿತ
Team Udayavani, Mar 16, 2024, 9:30 AM IST
ಬೆಳ್ತಂಗಡಿ: ಎಟಿಎಂನಿಂದ ಹಣ ಪಡೆಯಲು ಸಹಾಯ ಮಾಡಿದ ವ್ಯಕ್ತಿಯೊಬ್ಬ ಬಳಿಕ ಅವರ ಖಾತೆಯಿಂದ 1 ಲಕ್ಷಕ್ಕೂ ಅಧಿಕ ಹಣ ತೆಗೆದು ವಂಚಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಎಟಿಎಂ ಬಳಕೆ ಗೊತ್ತಿಲ್ಲದ ಮೇಲಂತಬೆಟ್ಟು ಗ್ರಾಮದ ಶರೀಫ್ (53) ಅವರು ಜ. 11ರಂದು ಎಟಿಎಂನಿಂದ ಹಣ ಪಡೆಯಲು ಅಪರಿಚಿತ ವ್ಯಕ್ತಿಯೊಬ್ಬನ ಸಹಾಯ ಬಯಸಿ ಕಾರ್ಡ್, ಪಿನ್ ನಂಬರ್ ಇತ್ಯಾದಿ ವಿವರಗಳನ್ನು ಆತನಿಗೆ ನೀಡಿದರು. ಆತ ಅವರು ಹೇಳಿದಷ್ಟು (3 ಸಾವಿರ ರೂ.) ಹಣ ತೆಗೆದುಕೊಟ್ಟ ಬಳಿಕ ಬೇರೆ ಯಾವುದೋ ಕಾರ್ಡನ್ನು ಮರಳಿಸಿದ್ದ.
ಆ ವಿಷಯ ಅರಿಯದ ಅವರು ಹಣ, ಕಾರ್ಡ್ ಪಡೆದು ಮರಳಿದ್ದರು. ಮೂರು ದಿನಗಳ ಅನಂತರ ಅವರ ಖಾತೆಯಿಂದ 1,05,300 ರೂ. ಕಡಿತವಾಯಿತು. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಲು ತೆರಳಿದಾಗ ಎಟಿಎಂನಲ್ಲಿ ನೆರವು ನೀಡಿದ ವ್ಯಕ್ತಿ ಬೇರೊಂದು ಎಟಿಎಂ ಕಾರ್ಡನ್ನು ನೀಡಿರುವುದು ಅರಿವಿಗೆ ಬಂತು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.