ಜೆಜೆಎಂ ಮೊದಲ ಹಂತ: ಸಿವಿಲ್‌ ಕಾಮಗಾರಿ ಶೇ. 100 ಪೂರ್ಣ

2ನೇ ಹಂತದ ಕಾಮಗಾರಿ ಪ್ರಗತಿ: 3ನೇ ಹಂತದ ಡಿಪಿಆರ್‌ ಸಿದ್ಧ

Team Udayavani, May 26, 2022, 9:10 AM IST

construction

ಪುತ್ತೂರು: ಜಲಜೀವನ್‌ ಮಿಷನ್‌ನಡಿ ಮನೆ-ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ನಳ್ಳಿ ಸಂಪರ್ಕ ಒದಗಿಸುವ ಯೋಜನೆಗೆ ಸಂಬಂಧಿಸಿ ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಮೊದಲ ಹಂತದಲ್ಲಿ ಸಿವಿಲ್‌ ಕಾಮಗಾರಿ ಶೇ. 100ರಷ್ಟು ಪೂರ್ಣಗೊಂಡಿದೆ.

ಜೆಜೆಎಂ ಮೂಲಕ ಪ್ರತೀ ಮನೆಗಳಿಗೆ ಕಾರ್ಯಾ ತ್ಮಕ ನಳ್ಳಿ ನೀರು ಸಂಪರ್ಕ(ಎಫ್‌ಎಚ್‌ಟಿಸಿ)ಒದಗಿಸುವ ನಿಟ್ಟಿನಲ್ಲಿ ಯಾವ ಮನೆಗಳಿಗೆ ನಳ್ಳಿ ಸಂಪರ್ಕ ಬೇಕಾಗುತ್ತದೆ ಎನ್ನುವುದನ್ನು ಗ್ರಾ.ಪಂ. ಮೂಲಕ ಗುರುತಿಸಲಾಗಿತ್ತು. ಅನಂತರ ಅಗತ್ಯವಿರುವ ಸ್ಥಳಗಳಲ್ಲಿ ಟ್ಯಾಂಕ್‌ ನಿರ್ಮಿಸಿ ಆಯಾಯ ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಮೂರು ಹಂತದಲ್ಲಿ ಜೆಜೆಎಂ ಅನುಷ್ಠಾನಕ್ಕೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗಿದೆ.

1,111 ಮನೆಗಳಿಗೆ ಸಂಪರ್ಕ

ಜೆಜೆಎಂ ಮೊದಲ ಹಂತದಲ್ಲಿ ಅವಿಭಜಿತ ಪುತ್ತೂರು ತಾಲೂಕಿನಲ್ಲಿ 547.35 ಲಕ್ಷ ರೂ.ವೆಚ್ಚದಲ್ಲಿ 15 ಗ್ರಾ.ಪಂ.ಗಳ 20 ಗ್ರಾಮಗಳಲ್ಲಿ 1,274 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಗುರುತಿಸಲಾಗಿತ್ತು. ಇದರಲ್ಲಿ ನೀರಿನ ಮೂಲ ಹೊಂದಿರುವ ಫಲಾನು ಭವಿಗಳ ಅಪೇಕ್ಷೆಯಂತೆ ಅವ ರನ್ನು ಹೊರತು ಪಡಿಸಿ ಉಳಿದ 1,111 ಮನೆ ಗಳಿಗೆ ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇದರಲ್ಲಿ 10 ಓವರ್‌ ಹೆಡ್‌ ಟ್ಯಾಂಕ್‌, ಭೂ ಮಟ್ಟದ 33 ಟ್ಯಾಂಕ್‌, 37 ಕೊಳವೆಬಾವಿ, 43 ಟಿ.ಸಿ. ಅಳವಡಿಸಲಾಗಿದೆ. ಶೇ.100 ರಷ್ಟು ಸಿವಿಲ್‌ ಕಾಮಗಾರಿ ಮುಕ್ತಾಯಗೊಂಡಿದೆ.

ಎರಡನೇ ಹಂತದಲ್ಲಿ 26 ಗ್ರಾ.ಪಂ. ವ್ಯಾಪ್ತಿಯಲ್ಲಿ 5,258 ಮನೆಗಳಿಗೆ ನಳ್ಳಿ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 6,742.5 ಲಕ್ಷ ರೂ. ಅನು ದಾನ ವ್ಯಯಿಸಲಾಗುತ್ತದೆ. 39 ಕಾಮಗಾರಿ ಕೈಗೆ ತ್ತಿಕೊಂಡು 131 ಓವರ್‌ ಹೆಡ್‌ಟ್ಯಾಂಕ್‌, 61 ಭೂ ಮಟ್ಟದ ಟ್ಯಾಂಕ್‌, 227 ಕೊಳವೆ ಬಾವಿ, 172 ಟಿ.ಸಿ. ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 39 ಕಾಮಗಾರಿಗಳ ಪೈಕಿ 29 ಕಾಮಗಾರಿಗೆ ಟೆಂಡರ್‌ ಆಗಿದ್ದು, 27 ಕಾಮಗಾರಿ ಪ್ರಾರಂಭಿಸಲಾಗಿದೆ.

3ನೇ ಹಂತಕ್ಕೆ ಡಿಪಿಆರ್‌

ಮೊದಲ ಎರಡು ಹಂತದ ಕಾಮಗಾರಿ ಪೂರ್ಣಗೊಳಿಸಿ ಮೂರನೇ ಹಂತದ ಕಾಮಗಾರಿಗೆ ಡಿಪಿಆರ್‌ ತಯಾರಿ ಸಲಾಗಿದೆ. ಮೂರನೇ ಹಂತ ಕೊನೆಯ ಭಾಗವಾಗಿದ್ದು ಇದರಲ್ಲಿ ತಾಲೂಕಿನಲ್ಲಿ ಬಾಕಿ ಇರುವ ನಳ್ಳಿ ಸಂಪರ್ಕ ರಹಿತ ಮನೆ ಗಳನ್ನು ಗುರುತಿಸಿ ಸಂಪರ್ಕ ನೀಡಬೇಕಿದೆ. ಈ ನಿಟ್ಟಿನಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಿದ್ದು ಅದರ ಆಧಾರದಲ್ಲಿ ಡಿಪಿಆರ್‌ ಸಿದ್ಧಗೊಂಡಿದೆ.

ಖರ್ಚು-ವೆಚ್ಚ ಹೇಗೆ?

ಜೆಜೆಎಂ ಯೋಜನೆಯ ಅನುಷ್ಠಾನವು ಕೇಂದ್ರ, ರಾಜ್ಯ ಹಾಗೂ ಫಲಾನುಭವಿಯ ಸಹಭಾಗಿತ್ವದಲ್ಲಿ ಆಗುತ್ತಿದೆ. ಶೇ. 50 ರಷ್ಟು ಕೇಂದ್ರ, ಶೇ. 40ರಷ್ಟು ರಾಜ್ಯ ಸರಕಾರ ಅನುದಾನ ನೀಡುತ್ತಿದೆ. ಉಳಿದ ಶೇ. 10ರಷ್ಟನ್ನು ಫಲಾನುಭವಿಗಳಿಂದ ಪಡೆದು ಸರಕಾರಕ್ಕೆ ಪಾವತಿಸಲಾಗುತ್ತದೆ. ಗ್ರಾ.ಪಂ. ಮೂಲಕ ಫಲಾ ನುಭವಿಗಳಿಂದ ಸಂಗ್ರಹಿಸಲಾದ ಹಣ ದಲ್ಲಿ ವಾಟರ್‌ವೆುನ್‌, ನಳ್ಳಿ ಸಂಪರ್ಕ ನಿರ್ವಹಣೆ ಇತ್ಯಾದಿ ಕಾರ್ಯ ಗಳಿಗೆ ಬಳಸುವ ಉದ್ದೇಶ ಹೊಂದಲಾಗಿದೆ.

ಸರಕಾರಕ್ಕೆ ಪ್ರಸ್ತಾವ

ತಾಲೂಕಿನ ಪ್ರತೀ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸುವ ಮಹತ್ವದ ಯೋಜನೆ ಇದಾಗಿದೆ. ಪೂರಕವಾಗಿ ಬಹು ಗ್ರಾಮ ಕುಡಿಯುವ ನೀರಿನ ಯೋಜ ನೆಯಡಿ ಎಎಂಆರ್‌ ಡ್ಯಾಂ ನಿಂದ ನೀರು ಸಂಗ್ರಹಿಸಿ ಎಲ್ಲ ಗ್ರಾ.ಪಂ. ಗಳಲ್ಲಿ ಜೆಜೆ ಎಂ ಮೂಲಕ ನಿರ್ಮಿಸಿದ ಟ್ಯಾಂಕ್‌ಗೆ ಪೂರೈಸಿ ಅಲ್ಲಿಂದ ಮನೆ ಮನೆಗೆ ನಳ್ಳಿ ಮೂಲಕ ತಲುಪಿಸುವ ನಿಟ್ಟಿನಲ್ಲಿಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. -ಸಂಜೀವ ಮಠಂದೂರು, ಶಾಸಕರು, ಪುತ್ತೂರು

ಪರ್ಯಾಯ ವ್ಯವಸ್ಥೆ

ಮೊದಲ ಹಂತದಲ್ಲಿ 60 ಕಾಮಗಾರಿಗಳ ಸಿವಿಲ್‌ ಕೆಲಸ ಪೂರ್ಣ ಗೊಂಡಿದೆ. ಎರಡನೆ ಹಂತದಲ್ಲಿ 27 ಕಾಮಗಾರಿ ಪ್ರಗತಿಯಲ್ಲಿದೆ. ಮೂರನೇ ಹಂತದಲ್ಲಿ ಡಿಪಿಆರ್‌ ಸಿದ್ಧವಾಗಿದೆ. ಪರ್ಯಾಯ ವ್ಯವಸ್ಥೆ ಇದ್ದು, ನಳ್ಳಿ ನೀರಿನ ಸಂಪರ್ಕ ಬೇಡ ಎನ್ನುವವರು ತಿಳಿಸಬೇಕು. ಭವಿಷ್ಯದಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ಆ ಮನೆ ಯವರು ಗ್ರಾ.ಪಂ. ಅನ್ನು ಸಂಪರ್ಕಿಸಿ ನೀರಿನ ಸಂಪರ್ಕ ಪಡೆದು ಕೊಳ್ಳಬೇಕು. ಅವರಿಗೆ ಜೆಜೆಎಂ ಮೂಲಕ ಅವಕಾಶ ಸಿಗದು. -ರೂಪ್ಲ ನಾಯಕ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಪುತ್ತೂರು

ಟಾಪ್ ನ್ಯೂಸ್

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.