ಕೈಕಂಬ ಪರ್ಲಿಯಾ: ಗುಜರಿ ಸೊತ್ತುಗಳಿಗೆ ಬೆಂಕಿ ತಗಲಿ ನಷ್ಟ
Team Udayavani, Feb 9, 2023, 12:10 AM IST
ಬಂಟ್ವಾಳ: ಬಿ.ಸಿ. ರೋಡಿನ ಕೈಕಂಬ ಪರ್ಲಿಯಾ ಬಳಿ ಬುಧವಾರ ಮುಂಜಾನೆ ಗುಜರಿ ಅಂಗಡಿಯ ಹೊರಭಾಗದಲ್ಲಿ ಶೇಖರಿಸಿಟ್ಟಿದ್ದ ಗುಜರಿ ಸಾಮಗ್ರಿಗಳಿಗೆ ಬೆಂಕಿ ತಗಲಿದ ಘಟನೆ ನಡೆದಿದ್ದು, ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ಠಾಣೆಯ ತಂಡ ತೆರಳಿ ಬೆಂಕಿ ನಂದಿಸುವ ಕಾರ್ಯನಿರ್ವಹಿಸಿದ್ದಾರೆ.
ಸ್ಥಳೀಯ ನಿವಾಸಿ ಯಾಕುಬ್ ಅವರಿಗೆ ಸೇರಿದ ಗುಜರಿ ಸೊತ್ತು ಗಳು ಸುಟ್ಟು ಹೋಗಿದ್ದು, ಸುಮಾರು 25 ಸಾವಿರ ರೂ. ನಷ್ಟ ಸಂಭವಿಸಿರಬಹುದೆಂದು ಅಂದಾಜಿಸ ಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಗುಜರಿ ರಾಶಿ ಹಾಕಿದ್ದು, ಪೂರ್ತಿ ಸುಟ್ಟಿದ್ದರೆ ಸ್ಥಳೀಯ ಮನೆಗಳಿಗೆ ಹಬ್ಬುವ ಅಪಾಯವಿತ್ತು. ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಹೆಚ್ಚಿನ ಹಾನಿ ತಪ್ಪಿದೆ.
ಕಾರ್ಯಾಚರಿಸಿದ ತಂಡ
ಬಂಟ್ವಾಳ ಅಗ್ನಿಶಾಮಕದಳದ ಚಂದ್ರ ಕಾಂತ, ರೋಹಿತ್, ರಾಜೇಶ್, ಕಿರಣ್ ಕುಮಾರ್, ಪ್ರಸಾದ್, ನಾಗರಾಜ್, ವಿಜಯ ಕುಮಾರ್ ಮೊದಲಾದವರು ಕಾರ್ಯಾಚರಣೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು