ಉಜಿರೆ ರಬ್ಬರ್ ಸೊಸೈಟಿಗೆ ಶಾಸಕರ ಭೇಟಿ
Team Udayavani, Apr 10, 2020, 12:04 PM IST
ಶಾಸಕ ಹರೀಶ್ ಪೂಂಜ ಉಜಿರೆ ರಬ್ಬರ್ ಸೊಸೈಟಿ ಭೇಟಿ ನೀಡಿ ಮಾಹಿತಿ ಪಡೆದರು.
ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಹಿತವನ್ನು ಕಾಪಾಡುವ ದೃಷ್ಟಿಯಿಂದ ತಾಲೂಕಿನಲ್ಲಿ ರಬ್ಬರ್ ಖರೀದಿಸಲು ಬೆಳ್ತಂಗಡಿ ರಬ್ಬರ್ ಸೊಸೈಟಿಗೆ ಅನುಮತಿ ನೀಡಲಾಗಿದ್ದು, ಗುರುವಾರ ಖರೀದಿ ಆರಂಭಗೊಂಡಿದೆ.
ಶಾಸಕ ಹರೀಶ್ ಪೂಂಜ ಗುರುವಾರ ಉಜಿರೆ ರಬ್ಬರ್ ಸೊಸೈಟಿ ಭೇಟಿ ನೀಡಿ ಮಾಹಿತಿ ಪಡೆದರು. ಉಜಿರೆ ರಬ್ಬರ್ ಸೊಸೈಟಿ ಸಿಇಒ ರಾಜು ಶೆಟ್ಟಿ ಬೆಂಗೆತ್ಯಾರು ಮಾಹಿತಿ ನೀಡಿ, ಉಜಿರೆ ಮುಖ್ಯ ಕಚೇರಿಯಲ್ಲಿ 32 ಮಂದಿ ಸದಸ್ಯರು ಮತ್ತು ಗುರುವಾಯನಕೆರೆ ಶಾಖೆಯಲ್ಲಿ 20 ಮಂದಿ ಸದಸ್ಯರಿಂದ ರಬ್ಬರ್ ಖರೀದಿಸಲಾಯಿತು ಎಂದು ಅವರು ಹೇಳಿದರು. ಒಟ್ಟು 52 ಸದಸ್ಯರ ಪೈಕಿ ಸುಮಾರು 7 ಲಕ್ಷ ರೂ. ಮೌಲ್ಯದ 5,100 ಕೆ.ಜಿ. ರಬ್ಬರ್ ಖರೀದಿಸಲಾಗಿದೆ ಎಂದರು.
ತಲಾ 100 ಕೆ.ಜಿ. ರಬ್ಬರ್ ಖರೀದಿಗೆ ಅನುಮತಿ
ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಸಿಬಂದಿಯ ಸಹಕಾರದೊಂದಿಗೆ ಗುರುವಾಯನಕೆರೆ ಹಾಗೂ ಉಜಿರೆ ಖರೀದಿ ಕೇಂದ್ರಗಳಲ್ಲಿ ಪ್ರತಿ ದಿನ 50 ಬೆಳೆಗಾರರಿಂದ ತಲಾ 100 ಕೆ.ಜಿ. ರಬ್ಬರ್ ಖರೀದಿಸಲು ಅನುಮತಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ