ಕಡಬ: 2ನೇ ಬಾರಿ ಜಿಲ್ಲೆಯಲ್ಲೇ ಗುರಿ ಮೀರಿದ ಸಾಧನೆ
ಮಹಾತ್ಮಾ ಗಾಂಧಿ ನರೇಗಾ ಯೋಜನೆ
Team Udayavani, May 23, 2022, 10:07 AM IST
ಕಡಬ: ಕಡಬ ತಾಲೂಕು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2021-22 ನೇ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲೇ ಗುರಿ ಮೀರಿದ ಸಾಧನೆಯನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಾಲೂಕಿನ ವ್ಯಾಪ್ತಿಯ 21 ಗ್ರಾ.ಪಂ. ಗಳ ಮೂಲಕ ಸರಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಜನತೆಗೆ ಉದ್ಯೋಗವನ್ನು ನೀಡುತ್ತಾ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ಸರಕಾರ 2021-22 ರಲ್ಲಿ 2,00,509 ಮಾನವ ದಿನ ಸೃಜಿಸುವ ವಾರ್ಷಿಕ ಗುರಿಯನ್ನು ನಿಗದಿಪಡಿಸಿತ್ತಾದರೂ, ನವೆಂಬರ್ 2021 ರಲ್ಲಿಯೇ ತಾಲೂಕು ಶೇ. 100 ಗುರಿಯನ್ನು ಸಾಧಿಸಿ ಮಾರ್ಚ್ ಅಂತ್ಯಕ್ಕೆ 2,78,081 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.139 ಸಾಧನೆಯನ್ನು ಮಾಡಿ ಜಿಲ್ಲೆಯಲ್ಲೇ ಅಧಿಕ ಗುರಿಯನ್ನು ಸಾಧಿಸಿದ ತಾಲೂಕಾಗಿ ಗುರುತಿಸಿಕೊಂಡಿದೆ.
ವೈಯಕ್ತಿಕ ಕಾಮಗಾರಿಗಳೇ ಹೆಚ್ಚು
ತಾಲೂಕಿನಲ್ಲಿ ಒಟ್ಟಾರೆ ಬಾವಿ 125, ತೋಟಗಾರಿಕಾ ಅಭಿವೃದ್ಧಿ 1362, ಆಡು ಶೆಡ್ 26, ದನದ ಹಟ್ಟಿ 284, ಹಂದಿ ಶೆಡ್ 14, ಕೋಳಿ ಶೆಡ್ 70, ಸೋಕ್ ಪಿಟ್ 219, ಕೃಷಿ ಹೊಂಡ 9, ಶೌಚಾಲಯ ನಿರ್ಮಾಣ 61, ಎರೆಹುಳು ಗೊಬ್ಬರ ಘಟಕ 40, ಮಳೆ ನೀರು ಇಂಗು ಗುಂಡಿ ಕಾಮಗಾರಿ 73, ಗೋಬರ್ ಗ್ಯಾಸ್ ಘಟಕ 12, ಮೀನುಗಾರಿಕ ಹೊಂಡ 6, ಗೊಬ್ಬರ ಗುಂಡಿ ನಿರ್ಮಾಣ 43 ಹೀಗೆ ಒಟ್ಟು 2,409 ವೈಯಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕ ಕಾಮಗಾರಿಗಳಲ್ಲಿ 5 ಕಿಂಡಿ ಅಣೆಕಟ್ಟು, 1 ಅಂಗನವಾಡಿ ಕೇಂದ್ರ, 63 ಸಿ.ಸಿ. ರಸ್ತೆ, 6 ಸಾರ್ವಜನಿಕ ತೆರೆದ ಬಾವಿ, 3 ಗ್ರಾಮೀಣ ಉದ್ಯಾನವನ ನಿರ್ಮಾಣ, 50 ತೋಡಿನ ಹೂಳೆತ್ತುವ ಕಾಮಗಾರಿ, 5 ಪೌಷ್ಟಿಕ ತೋಟ ರಚನೆ, 16 ಗ್ರಾ.ಪಂ. ಹಾಗೂ ಶಾಲಾ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, 14 ಸಾರ್ವಜನಿಕ ಪ್ರದೇಶದಲ್ಲಿ ಮಳೆ ನೀರು ಇಂಗು ಗುಂಡಿ ನಿರ್ಮಾಣ, 11 ಶಾಲಾ ಆವರಣ ಗೋಡೆ ರಚನೆ, 1 ಸಂಜೀವಿನಿ ಕಟ್ಟಡ ಹೀಗೆ ಒಟ್ಟು 183 ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ವರ್ಷದಿಂದ ವರ್ಷ ಪ್ರಗತಿ
2021-22 ರಲ್ಲಿ ಒಟ್ಟು 9.80 ಕೋ.ರೂ. ಒಟ್ಟು ಅನುದಾನ ಬಳಕೆ ಮಾಡಿಕೊಂಡಿದ್ದು 8 ಕೋ.ರೂ. ಕೂಲಿ ಮೊತ್ತ ಹಾಗೂ 1.80 ಕೋ.ರೂ. ಸಾಮಗ್ರಿ ಅನುದಾನವನ್ನು ಬಳಸಿಕೊಳ್ಳಲಾಗಿದೆ. 2020-21 ನೇ ಆರ್ಥಿಕ ವರ್ಷದಲ್ಲಿ 2,49,483 ಮಾನವ ದಿನಗಳನ್ನು ಸೃಜಿಸುವ ಮೂಲಕ 6.75 ಕೋ.ರೂ ಕೂಲಿ ಹಾಗೂ 1.5 ಕೋ.ರೂ. ಸಾಮಗ್ರಿ ಒಟ್ಟು 8.25 ಕೋ.ರೂ ಅನುದಾನವನ್ನು ಪಡೆದುಕೊಳ್ಳಲಾಗಿತ್ತು.
2 ಪ್ರಶಸ್ತಿ
ನರೇಗಾ ಕಾರ್ಯ ಸಾಧನೆಗಾಗಿ ಶಿರಾಡಿ ಗ್ರಾ.ಪಂ. ಗೆ ಮತ್ತು ಯೋಜನೆಯ ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಭರತ್ ರಾಜ್ ಅವರಿಗೆ ನರೇಗಾ ರಾಜ್ಯ ಪ್ರಶಸ್ತಿ ದೊರೆತಿದೆ
ಗ್ರಾಮ ಪಂಚಾಯತ್ಗಳ ಸಾಧನೆ
ಶಿರಾಡಿ 24985, ಗೋಳಿತೊಟ್ಟು 24857, ಬೆಳಂದೂರು 23124 ಸುಬ್ರಹ್ಮಣ್ಯ 20515 ಈ 4 ಗ್ರಾ.ಪಂ. ಗಳು ಸತತ ಎರಡನೇ ವರ್ಷದಲ್ಲಿ ಅಧಿಕ ಮಾನವ ದಿನ ಸೃಜನೆಯನ್ನು ಮಾಡಿವೆ. 4 ಗ್ರಾ.ಪಂ.ಗಳ ಸಾಧನೆ ಕಡಬ ತಾಲೂಕಿನಲ್ಲಿ ಅಡಿಕೆ ಗಿಡ ನಾಟಿ ಹಾಗೂ ದನದ ಹಟ್ಟಿ ನಿರ್ಮಾಣ ಕಾಮಗಾರಿಗಳನ್ನು ಹೆಚ್ಚಾಗಿ ಅನುಷ್ಠಾ ನಗೊಳಿಸಲಾಗಿದೆ. ಕಳೆದ ವರ್ಷ ತಾಲೂಕಿನ 4 ಗ್ರಾ.ಪಂ.ಗಳು ಜಿಲ್ಲೆಯಲ್ಲೇ ಗಣನೀಯ ಕಾರ್ಯವನ್ನು ಮಾಡಿವೆ. –ನವೀನ್ ಭಂಡಾರಿ ಎಚ್., ಕಾರ್ಯನಿರ್ವಾಹಕ ಅಧಿಕಾರಿ, ಕಡಬ ತಾ.ಪಂ.
ಸಹಕಾರ, ಶ್ರಮದಿಂದ ಸಾಧನೆ
2 ವರ್ಷಗಳಿಂದ ನರೇಗಾ ಯೋಜನೆಯಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನ, ಗ್ರಾ.ಪಂ. ಆಡಳಿತ ವರ್ಗದ ಸಹಕಾರ ಮತ್ತು ನರೇಗಾ ತಂಡದ ಶ್ರಮದ ಫಲದಿಂದ ಗುರಿ ಮೀರಿ ಸಾಧನೆ ಮಾಡಲು ಸಾಧ್ಯವಾಗಿದೆ. –ಚೆನ್ನಪ್ಪ ಗೌಡ ಕಜೆಮೂಲೆ, ಸಹಾಯಕ ನಿರ್ದೇಶಕರು(ಗ್ರಾ.ಉ.), ತಾ.ಪಂ. ಕಡಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ