ಗೇರು ಪ್ರಪಂಚದ ಸಮಗ್ರತೆ ತೆರೆದಿಡುವ ಮ್ಯೂಸಿಯಂ
ಪುತ್ತೂರಿನ ಗೇರು ಸಂಶೋಧನ ನಿರ್ದೇಶನಾಲಯ
Team Udayavani, May 27, 2022, 9:42 AM IST
ಪುತ್ತೂರು: ರಾಷ್ಟ್ರ ಮಟ್ಟದಲ್ಲೇ ಗೇರು ಪ್ರಪಂಚದ ಸಮಗ್ರತೆ ತೆರೆದಿಡುವ ಸರಕಾರಿ ಕ್ಷೇತ್ರದ ಮೊದಲ ಸಮಗ್ರ ಗೇರು ಮ್ಯೂಸಿಯಂ ಪುತ್ತೂರಿನ ಗೇರು ಸಂಶೋಧನ ನಿರ್ದೇಶನಾಲಯದ ಆವರಣದಲ್ಲಿ ಇದೆ.
ರಾಜ್ಯದ ಏಕೈಕ, ದೇಶದ ಅತೀ ದೊಡ್ಡ ಗೇರು ಮ್ಯೂಸಿಯಂ ಇದಾಗಿದೆ. ಭಾರತೀಯ ಕೃಷಿ ಸಂಶೋ ಧನ ಪರಿಷತ್(ಐಸಿಎಆರ್) ಅಡಿ ಪುತ್ತೂರಿನ ಗೇರು ಸಂಶೋಧನ ನಿರ್ದೇಶನಾಲಯ(ಡಿಸಿಆರ್)ವಠಾರದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಂಡಿದೆ.
ಗೇರು ಆರೋಗ್ಯ ಚಿಕಿತ್ಸಾಲಯ ವಸ್ತು ಸಂಗ್ರಹಾಲಯ
ಈ ಮ್ಯೂಸಿಯಂಗೆ ಗೇರು ಆರೋಗ್ಯ ಚಿಕಿತ್ಸಾಲಯ-ವಸ್ತು ಸಂಗ್ರಹಾಲಯ ಎಂದು ಹೆಸರಿಡಲಾಗಿದೆ. ಡಿಸಿಆರ್ ಸ್ಥಾಪನೆ, ಅದರ ಸಾಧನೆ, ತಳಿ ಸಂಶೋಧನೆ, ರಾಷ್ಟ್ರಮಟ್ಟದಲ್ಲಿ ಗೇರು ಕೃಷಿಗೆ ಸಂಬಂಧಿಸಿದ ಸಂಶೋಧನೆಗಳು, ತಳಿ ಆವಿಷ್ಕಾರಗಳು, ಅದರ ಸ್ವಭಾವ ಇತ್ಯಾದಿಗಳನ್ನು ದೃಶ್ಯ ಮತ್ತು ಪರಿಕರದ ಮೂಲಕ ಇಲ್ಲಿ ಪ್ರದರ್ಶಿಸಲಾಗಿದೆ. ಗೇರು ಕೃಷಿ ನಿರ್ವಹಣೆ, ಗೊಬ್ಬರ ವಿಧಾನ, ನೀರಾವರಿ, ಗೇರು ಕೃಷಿಗಿರುವ ರೋಗ ನಿಯಂತ್ರಣದ ಸಾಕ್ಷ್ಯಚಿತ್ರಗಳು ಈ ಮ್ಯೂಸಿಯಂನಲ್ಲಿ ಇದೆ.
60 ಲಕ್ಷ ರೂ. ವೆಚ್ಚ
ರಾಷ್ಟ್ರೀಯ ಕೃಷಿ ವಿಜ್ಞಾನ ಯೋಜನೆ (ಆರ್ಕೆವಿವೈ)ಅಡಿ ಕೇಂದ್ರ ಸರಕಾರ ರೈತ ಕಲ್ಯಾಣ ಯೋಜನೆಯಲ್ಲಿ ಪುತ್ತೂರಿನ ಡಿಸಿಆರ್ಗೆ 2 ಕೋಟಿ ರೂ. ಅನುದಾನ ನೀಡಿತ್ತು. ಡಿಸಿಆರ್ ಪ್ರಭಾರ ಆಡಳಿತ ನಿರ್ದೇಶಕರಾಗಿದ್ದ ಡಾ| ಎಂ.ಜಿ.ನಾಯಕ್ ಪುತ್ತೂರಿನಲ್ಲಿ ಗೇರು ಮ್ಯೂಸಿಯಂ ತೆರೆಯುವ ಯೋಜನೆ ರೂಪಿಸಿದರು. ಅದರಂತೆ 60 ಲಕ್ಷ ರೂ.ವೆಚ್ಚದಲ್ಲಿ ಸಂಗ್ರಹಾಲಯ ನಿರ್ಮಿಸಲಾಗಿದೆ. ಗೇರು ಹಣ್ಣಿನಿಂದ ತಯಾರಿಸುವ ಜ್ಯೂಸ್, ಜಾಮ್, ಜೆಲ್ಲಿ, ಉಪ್ಪಿನಕಾಯಿ, ವೈನ್ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ, ಗೇರು ಹಣ್ಣಿ ನಿಂದ ತಯಾರಿಸುವ ಚ್ಯವನ್ಪ್ರಾಶ್, ಬೇಬಿ ಪೌಡರ್ನ ಬಗ್ಗೆ ಮಾಹಿತಿ ಇದೆ. ಗೋಡಂಬಿಯಲ್ಲಿರುವ ವಿಟಮಿನ್, ಪೋಷಕಾಂಶ, ಹಣ್ಣಿನಲ್ಲಿರುವ ಅಂಶಗಳ ಅನಾವರಣವು ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ.
ಪುತ್ತೂರಿನ ಡಿಸಿಆರ್ ಸಾಧನೆ
ಗೇರು ಸಂಶೋಧನೆ ನೆಲೆಯಲ್ಲಿ ಸ್ಥಾಪಿಸ ಲಾದ ಪುತ್ತೂರಿನ ಡಿಸಿಆರ್ 3 ದಶಕಗಳಿಂದ ಗೇರು ಕೃಷಿಯ ಬೆಳವಣಿಗೆಯ ನಿಟ್ಟಿನಲ್ಲಿ ಹತ್ತಾರು ಪ್ರಯೋಗ ಒಡ್ಡಿ ಯಶ ಕಂಡಿದೆ. ಅವುಗಳ ಸಾಲಿನಲ್ಲಿ ಈ ಮ್ಯೂಸಿಯಂ ಕೂಡ ಒಂದಾಗಿದೆ. ಈ ಮಾದರಿಯ ಸಮಗ್ರ ವಸ್ತು ಸಂಗ್ರಹಾಲಯ ಐಸಿಎಆರ್ ಅಡಿಯ ಸಂಸ್ಥೆಗಳಲ್ಲೇ ವಿಶಿಷ್ಟವಾದದು ಎಂದು ಗುರುತಿಸಲಾಗಿದೆ. ದಿಲ್ಲಿಯಲ್ಲಿ ಇಂಥದೇ ಒಂದು ಮ್ಯೂಸಿಯಂ ಇದೆ ಯಾದರೂ, ಸಮಗ್ರತೆ ದೃಷ್ಟಿಯಿಂದ ಪುತ್ತೂರಿನ ಮ್ಯೂಸಿಯಂ ವಿಶಾಲವಾಗಿದೆ.
ಸಮಗ್ರ ಚಿತ್ರಣ
ಗೇರು ಬೆಳೆ ಭಾರತಕ್ಕೆ ಬಂದ ರೀತಿ, ಬೆಳೆದ ರೀತಿ, ವೈಜ್ಞಾನಿಕ ಬೆಳವಣಿಗೆ, ಮಾರುಕಟ್ಟೆ, ತಳಿ ವೈವಿಧ್ಯತೆ, ಬೇಸಾಯ ಕ್ರಮ, ಹೊಸ ತಳಿ, ಹಣ್ಣಿನ ಮೌಲ್ಯ ವರ್ಧನೆ ಹೀಗೆ ವಿವಿಧ ಗೇರು ಕೃಷಿಯ ಸಮಗ್ರ ಚಿತ್ರಣವನ್ನು ಮ್ಯೂಸಿಯಂನಲ್ಲಿ ತೆರೆದಿಡಲಾಗಿದೆ. -ಡಾ| ದಿನಕರ ಅಡಿಗ, ಪ್ರಧಾನ ವಿಜ್ಞಾನಿ, ಪುತ್ತೂರು ಡಿಸಿಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ