ಜೀವನೋತ್ಸಾಹ ಮೂಡಿಸಿದ ನವರೂಪ: ವಿದುಷಿ ಮಂಜುಳಾ ಸುಬ್ರಹ್ಮಣ್ಯ
ಉದಯವಾಣಿ ನವರೂಪ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಣೆ
Team Udayavani, Nov 25, 2021, 4:44 AM IST
ಪುತ್ತೂರು: ಕೋವಿಡ್ ಸಂಕಷ್ಟ ಕಾಲ ಕಳೆದು ಮರಳಿ ಜೀವನೋತ್ಸಾಹ ಮೂಡಿಸಲು ಉದಯವಾಣಿಯ ನವರೂಪ ಕಾರ್ಯಕ್ರಮ ಪೂರಕವಾಗಿತ್ತು ಎಂದು ನೃತ್ಯ ನಿರ್ದೇಶಕಿ, ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹೇಳಿದರು.
ನವರಾತ್ರಿ ಪ್ರಯುಕ್ತ ಉದಯವಾಣಿ ಆಯೋಜಿಸಿದ ನವರೂಪ ಕಾರ್ಯಕ್ರಮದ ಅದೃಷ್ಟಶಾಲಿಗಳಿಗೆ ಬುಧವಾರ ಪುತ್ತೂರು ಉದಯವಾಣಿ ಕಚೇರಿಯಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು. ನವಬಣ್ಣಗಳ ಮೂಲಕ ಮಹಿಳೆ ತನ್ನ ಭಾವನೆಗಳನ್ನು ಅಭಿವ್ಯಕ್ತಿಪಡಿಸಿಕೊಳ್ಳಲು ನವರೂಪ ವೇದಿಕೆಯಾಯಿತು ಎಂದರು.
ಸೀರೆ ನಮ್ಮ ಪರಂಪರೆಯ ಕೊಂಡಿ. ಪುರಾಣ ಕಾಲದಿಂದಲೂ ಇಲ್ಲಿಯ ತನಕ ಅದರ ಮನ್ನಣೆ ಮುಂದುವರಿದಿದೆ ಎಂದ ಅವರು, ಮಹಿಳೆಯರನ್ನು ಕೇಂದ್ರೀಕರಿ ಸಿಕೊಂಡು ಈ ಕಾರ್ಯಕ್ರಮ ಹಮ್ಮಿಕೊಂಡ ಕಾರಣ ದಿನಂಪ್ರತಿ ಒತ್ತಡದ ಕೆಲಸಗಳಲ್ಲಿಯೇ ಕಾಲ ಕಳೆಯುವ ಮಹಿಳೆಯರಿಗೆ ಸಂಭ್ರಮಿಸುವ ಅವಕಾಶವೊಂದು ದೊರೆಯಿತು ಎಂದವರು ಶ್ಲಾಘಿಸಿದರು.
ಅಭಿಮಾನದ ಪತ್ರಿಕೆ
ಉದಯವಾಣಿ ಅಭಿಮಾನದ ಪತ್ರಿಕೆ. ಅದು ಪ್ರತೀ ಮನೆ ಮನೆಯಲ್ಲಿ ಇರಬೇಕು ಎಂದು ಬಯಸುವವರೇ ಅಧಿಕ. ಹಾಗಾಗಿ ಮನೆಯಲ್ಲಿ ಮಹಿಳೆಯರು ಪತ್ರಿಕೆ ಓದುವ ಅಭಿರುಚಿ ಬೆಳೆಸಲು ಇಂತಹ ಚಟುವಟಿಕೆಗಳು ಸಹಕಾರಿ ಎಂದರು.
ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ಮಾತನಾಡಿ, ಹೆಣ್ಣಿಗೆ ಗೌರವ ಕೊಡುವ ಮನೆ ನಂದಗೋಕುಲದಂತೆ ಇರುತ್ತದೆ. ಅಂತಹ ಶಕ್ತಿ ಆಕೆಗಿದೆ. ಹಾಗಾಗಿ ದೇವಿ ಸ್ವರೂಪದಲ್ಲಿ ಹೆಣ್ಣನ್ನು ಪೂಜಿಸುವ ಪರಂಪರೆ ನಮ್ಮ ನೆಲದ್ದು. ನವರೂಪದ ಮೂಲಕ ನವ ರಾತ್ರಿಯನ್ನು ಸಂಭ್ರಮಿಸುವ ಅವಕಾಶ ಇಮ್ಮಡಿಯಾಯಿತು ಎನ್ನುವುದಕ್ಕೆ ಈ ಚಟುವಟಿಕೆಗೆ ಬಂದ ಅಭೂತ ಪೂರ್ವ ಸ್ಪಂದನೆಯೇ ಸಾಕ್ಷಿ ಎಂದರು.
ಇದನ್ನೂ ಓದಿ:ರಾಜ್ಯ ರೈತರ ಸಂಘದಿಂದ ಸುವರ್ಣ ವಿಧಾನಸೌಧ ಮುತ್ತಿಗೆ ಎಚ್ಚರಿಕೆ
ಸಾಮಾಜಿಕ ಜಾಲದಲ್ಲಿ ಒಂದು ಫೋಟೋ ಕಳುಹಿಸಿದರೆ ಬೆರಳೆಣಿಕೆಯ ಲೈಕ್ಗಳು ಬರಬಹುದು, ಬಾರದೆ ಇರಬಹುದು. ಆದರೆ ನವರೂಪದಲ್ಲಿ ಆಯ್ಕೆಗೊಂಡು ಉದಯವಾಣಿಯಲ್ಲಿ ಪ್ರಕಟಗೊಂಡ ಫೋಟೋ ಪ್ರತೀ ದಿನ ಐದು ಲಕ್ಷ ಓದುಗರಿಗೆ ತಲುಪಿದೆ ಎಂದ ಅವರು, ನಂಬಿಕೆ, ವಿಶ್ವಾಸ, ಪಾರದರ್ಶಕತೆ ಮೂಲಕ ಅದೃಷ್ಟಶಾಲಿಗಳ ಆಯ್ಕೆ ನಡೆದಿದೆ. ನವರೂಪದ ಯಶಸ್ಸು ಓದುಗರಿಗೆ ಸಲ್ಲಬೇಕು ಎಂದರು.
ಪ್ರಮೀಳಾ ಜೈನ್ ಮತ್ತು ಕುಟುಂಬ ಮಡಂತ್ಯಾರು, ವಿಶಾಲಾಕ್ಷಿ ಮತ್ತು ಬಳಗ ನಿಡ³ಳ್ಳಿ, ಪೂಜಾ ಪ್ರಭು ಮತ್ತು ಬಳಗ ಪುತ್ತೂರು, ಅಳಕ್ಕೆ ಸಹೋದರಿಯರು ತಣ್ಣೀರುಪಂತ, ಶ್ಲೋಕಾ ಮತ್ತು ಬಳಗ ಪುತ್ತೂರು, ಮೋನಿಕಾ ಮತ್ತು ಗೆಳತಿ ಯರು ಸುಳ್ಯ ಇವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಯಿತು. ಉದಯ ವಾಣಿ ಮಾರುಕಟ್ಟೆ ವಿಭಾಗದ ಸೀನಿಯರ್ ಮ್ಯಾನೇಜರ್ ಸತೀಶ್ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು