Puttur: ಬಾಲ್ಯ ವಿವಾಹಕ್ಕೆ ಉತ್ತೇಜನೆ: ಪ್ರಕರಣದಿಂದ ವಿಮೋಚನೆ
Team Udayavani, Apr 17, 2024, 6:30 AM IST
ಪುತ್ತೂರು: ಬಾಲ್ಯ ವಿವಾಹಕ್ಕೆ ಉತ್ತೇಜಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೀಡಿದ್ದ ದೂರಿನ ಮೇರೆಗೆ ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿದ್ದವರನ್ನು ಪೂರ್ಣಪ್ರಮಾಣದ ತನಿಖೆಯ ಮೊದಲೇ ಪುತ್ತೂರು ನ್ಯಾಯಾಲಯವು ಪ್ರಕರಣದಿಂದ ವಿಮೋಚನೆಗೊಳಿಸಿದೆ.
ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ. ಹೆಗಡೆ ನೀಡಿದ್ದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2018ನ ನ. 14ರಂದು ಉಪ್ಪಿನಂಗಡಿ ನೆಕ್ಕಿಲಾಡಿ ಆದರ್ಶ ನಗರದ ಸುಲೇಮಾನ್ ಅವರ ಪುತ್ರ ಮಹಮದ್ ಸಾದಿಕ್ ಜತೆ ಪುತ್ತೂರು ಕೂರ್ನಡ್ಕ ಮಸೀದಿಯ ಮೌಲಿಯಾದ ಬಂಬ್ರಾನ್ ಉಸ್ತಾದ್ ಅವರ ಅಪ್ರಾಪ್ತ ವಯಸ್ಸಿನ ಬಾಲಕಿಯ ನಿಖಾ ಶಾಸ್ತ್ರವನ್ನು ನೆರವೇರಿಸಿ ಬಾಲ್ಯ ವಿವಾಹವನ್ನು ನಡೆಸಿರುತ್ತಾರೆ ಎಂದು ಬಾಲಕಿಯ ಮಲತಾಯಿಯ ದೂರಿನ ಹಿನ್ನೆಲೆಯಲ್ಲಿ ಅಂದಿನ ಸಿಡಿಪಿಒ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ತನಿಖಾಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಈ ನಡುವೆ ಆರೋಪಿಗಳು ತಮ್ಮ ಪರ ವಕೀಲರ ಮುಖಾಂತರ ಪ್ರಕರಣದಿಂದ ವಿಮೋಚನೆ (ಡಿಸ್ಟಾರ್ಜ್) ಮಾಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರಕಾರಿ ಅಭಿಯೋಜಕರು ತಕರಾರು ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಪ್ರಕರಣದಲ್ಲಿ ಆರೋಪಿಸಲಾದ ಆರೋಪವು ಆಧಾರ ರಹಿತವಾದದ್ದು, ಆ ದಿನ ದೂರಿನಂತೆ, ಕೇವಲ ನಿಶ್ಚಿತಾರ್ಥ ಮಾತ್ರ ನೆರವೇರಿದ್ದು ಬಾಲ್ಯ ವಿವಾಹ ನೆರವೇರಿರುವುದಿಲ್ಲ. ಮದುವೆ ನಡೆದಿದೆ ಎನ್ನುವುದಕ್ಕೆ ದಾಖಲೆ ಇರುವುದಿಲ್ಲ, ಅಭಿಯೋಜನೆಯು ಈ ಪ್ರಕರಣವನ್ನು ಸಂಶಯಾತೀತವಾದದ್ದು ಎಂದು ನಿರೂಪಿಸಲು ವಿಫಲವಾಗಿರುತ್ತದೆ ಎಂದು ಹೇಳಿ ಆರೋಪಿಗಳಾದ ಹಾಜಿ ಯು.ಟಿ ಅಬ್ದುಲ್ ಅಜೀಜ್, ಹಾಜಿರ, ಇಬ್ರಾಹಿಂ ಚಾಪಳ್ಳ, ಸುಲೇಮಾನ್, ಅಪ್ಪಾ, ಮೊಹಮ್ಮದ್ ಸಾದಿಕ್ ಅವರನ್ನು ಪ್ರಕರಣದಿಂದ ವಿಮೋಚನೆಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ