ಬಿ.ಸಿ.ರೋಡ್‌-ಪಾಣೆಮಂಗಳೂರು ಹೆದ್ದಾರಿ : ಬೀದಿ ದೀಪಗಳಿದ್ದರೂ ಕತ್ತಲೆಯಲ್ಲೇ ಸಾಗಬೇಕಾದ ಸ್ಥಿತಿ


Team Udayavani, Jan 24, 2021, 2:20 AM IST

ಬಿ.ಸಿ.ರೋಡ್‌-ಪಾಣೆಮಂಗಳೂರು ಹೆದ್ದಾರಿ : ಬೀದಿ ದೀಪಗಳಿದ್ದರೂ ಕತ್ತಲೆಯಲ್ಲೇ ಸಾಗಬೇಕಾದ ಸ್ಥಿತಿ

ಬಂಟ್ವಾಳ: ಸಾಮಾನ್ಯ ಹೆದ್ದಾರಿ, ಸೇತುವೆಗಳಲ್ಲಿ ಅಪಘಾತವನ್ನು ತಪ್ಪಿಸುವ ಉದ್ದೇಶ ಹಾಗೂ ಪಾದಚಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬೀದಿದೀಪಗಳನ್ನು ಅಳವಡಿ ಸಲಾಗುತ್ತದೆ. ಆದರೆ ಬಿ.ಸಿ.ರೋಡ್‌ನಿಂದ ಪಾಣೆ ಮಂಗಳೂರುವರೆಗೆ ಅಳವಡಿಸಲಾದ 61 ಬೃಹತ್‌ ಬೀದಿದೀಪಗಳಲ್ಲಿ ಯಾವುದೂ ಕೂಡ ಉರಿಯುತ್ತಿಲ್ಲ.!

ಬಿ.ಸಿ.ರೋಡ್‌-ಮಾಣಿ-ಉಪ್ಪಿನಂಗಡಿ ಹೆದ್ದಾರಿ ಯಲ್ಲಿ ನಿತ್ಯ ಸಾವಿರಾರು ವಾಹನಗಳು ತೆರಳುತ್ತಿದ್ದು, ರಾತ್ರಿ ಹೊತ್ತು ಕೂಡ ಹೆಚ್ಚಿನ ವಾಹನಗಳು ಎರಡೂ ದಿಕ್ಕಿನಿಂದಲೂ ಸಾಗುತ್ತವೆ. ವಾಹನ ಚಾಲಕರು/ಸವಾರರ ದುಡುಕು, ಬೆಳಕಿನ ಕೊರತೆಯ ಪರಿಣಾಮ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಹೀಗಾಗಿ ಇಲ್ಲಿ ಬೆಳಕು ಅಗತ್ಯವಾಗಿದೆ.ಆದರೆ ಅದಕ್ಕಾಗಿ ಅಳವಡಿಸಿದ ಬೀದಿದೀಪ ಉರಿಯದೇ ಇರುವುದು ವಿಪರ್ಯಾಸ.

ಬಿ.ಸಿ.ರೋಡ್‌ನ‌ ನಾರಾಯಣ ಗುರು ವೃತ್ತದಿಂದ ಪಾಣೆಮಂಗಳೂರಿನ ಶ್ರೀ ಕಲ್ಲುರ್ಟಿ ಗುಡಿಯವರೆಗೆ ಹೆದ್ದಾರಿಗೆ ಸೂಕ್ತವೆನಿಸಿದ 61 ಬೀದಿದೀಪಗಳನ್ನು ಅಳವಡಿಸಲಾಗಿದೆ. ಆದರೆ ಪ್ರಸ್ತುತ ಅದರಲ್ಲಿ ಬೆರಳೆಣಿಕೆಯ ಬೀದಿದೀಪಗಳು ಉರಿಯುತ್ತಿದೆ. ಕೆಲವೊಂದು ಕೆಲವೊಮ್ಮೆ ಚಿಮಿಣಿ ದೀಪದಂತೆ ಉರಿಯುವುದು ಕಂಡುಬರುತ್ತದೆ.

ಬೀದಿದೀಪಗಳನ್ನು ಅಳವಡಿಸಿರುವ ಪ್ರದೇಶ ಬಂಟ್ವಾಳ ಪುರಸಭೆ ಹಾಗೂ ನರಿಕೊಂಬು ಗ್ರಾ.ಪಂ.ವ್ಯಾಪ್ತಿಗೆ ಬರುತ್ತಿದೆ. ಹೀಗಾಗಿ ಈ ಕುರಿತು ಹೊಂದಾಣಿಕೆಯಿಂದ ದೀಪಗಳ ದುರಸ್ತಿ ಕಾರ್ಯ ನಡೆಯಬೇಕಿದೆ.

2014ರಲ್ಲಿ ಬೀದಿದೀಪಗಳನ್ನು ಪುರಸಭೆಯ 10 ಲಕ್ಷ ರೂ.ಅನುದಾನದಲ್ಲಿ ದುರಸ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಆ ಬಳಿಕ ನಿರ್ವಹಣೆಯೂ ನಡೆದಿಲ್ಲ. ದೀಪಗಳು ದುರಸ್ತಿಯಾಗದೇ ಇದ್ದರೆ ಮುಂದೊಂದು ದಿನ ಅದರ ಕಂಬಗಳು ಕೂಡ ಯಾರ್ಯಾರ ಪಾಲಾಗುವ ಸಾಧ್ಯತೆಯೂ ಇದೆ. ಹೀಗಾಗಿ ಅದಕ್ಕಿಂತ ಮುಂಚೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ದೀಪಗಳ ದುರಸ್ತಿಗೆ ಮುಂದಾಗಬೇಕಿದೆ.

ಸೇತುವೆಗೆ ದೀಪ ಅತೀ ಅಗತ್ಯ :

ಬಿ.ಸಿ.ರೋಡ್‌-ಪಾಣೆಮಂಗಳೂರು ಮಧ್ಯೆ ನೇತ್ರಾವತಿ ಸೇತುವೆಯೂ ಇದ್ದು, ಅದಕ್ಕೂ ಬೀದಿದೀಪಗಳು ಅಗತ್ಯವಾಗಿದೆ. ಸಾಮಾನ್ಯವಾಗಿ ಸೇತುವೆಗಳಲ್ಲಿ ವಾಹನಗಳು ನಿಕಟವಾಗಿ ಆಗುವುದು, ಪಾದಚಾರಿಗಳು ಸೀಮಿತ ಸ್ಥಳದಲ್ಲಿ ಸಾಗುವುದರಿಂದ ಬೆಳಕು ಬೇಕಾಗುತ್ತದೆ. ಈಗಾಗಲೇ ಹಲವು ಮಂದಿ ಇದೇ ಸೇತುವೆಯ ಮೂಲಕ ರಾತ್ರಿ ಹೊತ್ತು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೂಕ್ತ ಬೆಳಕಿದ್ದಾಗ ಆತ್ಮಹತ್ಯೆಯ ಸಂಖ್ಯೆಗೂ ಕಡಿವಾಣ ಬೀಳುವ ಸಾಧ್ಯತೆ ಇರುತ್ತದೆ.

ಜತೆಗೆ ರಾತ್ರಿ ಹೊತ್ತು ಹೆದ್ದಾರಿ, ನದಿಗೆ ಕಸ ಹಾಕುವ ಘಟನೆಗಳು ಕೂಡ ನಡೆಯುತ್ತಿದ್ದು, ಇದರ ಮಧ್ಯೆ ಒಂದು ಕಡೆ ಕಸ ಕೂಡ ರಾಶಿ ಬಿದ್ದುಕೊಂಡಿದೆ. ಹೀಗಾಗಿ ಅದರ ನಿಯಂತ್ರಣಕ್ಕೂ ಇದು ಪೂರಕವಾಗಲಿದೆ.

ಸಂಪೂರ್ಣ ಶಿಥಿಲಗೊಂಡಿದೆ :

ಬೀದಿದೀಪಗಳನ್ನು ಅಳವಡಿಸಿದ ಬೃಹತ್‌ ಕಂಬಗಳು ಸರಿಯಾಗಿದೆ. ಆದರೆ ಬಹುತೇಕ ಕಂಬಗಳಲ್ಲಿ ಮೇಲಿರುವ ದೀಪಗಳು ಸಂಪೂರ್ಣ ಶಿಥಿಲಗೊಂಡಿವೆ. ಬಹುತೇಕ ದೀಪಗಳಲ್ಲಿ ಕೇವಲ ಅದರ ಪೆಟ್ಟಿಗೆಗಳು ಕಂಡುಬಂದರೆ ಇನ್ನು ಕೆಲವು ದೀಪಗಳಲ್ಲಿ ಬಲ್ಬ್ ಕೂಡ ಇಲ್ಲದಾಗಿದೆ. ಒಂದಷ್ಟು ಕಂಬಗಳಲ್ಲಿ ಪೆಟ್ಟಿಗೆ ಹಾಗೂ ದೀಪಗಳಲ್ಲದೆ ಬರೀ ಕಂಬ ಕಾಣುತ್ತಿದೆ.

ಮರಗಳ ರೆಂಬೆಗಳು ತುಂಬಿವೆ :

ಹಲವು ಬೀದಿದೀಪಗಳು ಹೆದ್ದಾರಿ ಬದಿಯ ಮರದ ರೆಂಬೆಗಳ ಮಧ್ಯದಲ್ಲಿದ್ದು, ಅವುಗಳು ಉರಿದರೂ ಬೆಳಕು ಕಾಣುವುದಿಲ್ಲ.  ಬಿ.ಸಿ.ರೋಡ್‌ ವೃತ್ತದ ಬಳಿ ಹಾಗೂ ಹಳೆ ಟೋಲ್‌ ಫ್ಲಾಝಾದ ಬಳಿ  ಇಂತಹ ಸಮಸ್ಯೆಗಳಿವೆ. ಬೆಳಕು ಸರಿಯಾಗಿ ಪಸರಿಸಲು ಬೇಕಾದ ಅಗತ್ಯ ಕೆಲಸಗಳನ್ನು ಮಾಡಬೇಕಾಗಿದೆ.

ಹೆದ್ದಾರಿಯಲ್ಲಿ ಅಪಘಾತಗಳನ್ನು ತಪ್ಪಿಸಲು ಬೀದಿದೀಪಗಳು ಅತಿ ಅಗತ್ಯವಾಗಿದೆ. ಇಲ್ಲಿ ಬೀದಿದೀಪ ಉರಿಯದೇ ಇರುವ ಕುರಿತು ಗಮನಕ್ಕೆ ಬಂದಿದೆ. 2014ರಲ್ಲಿ 10 ಲಕ್ಷ ರೂ.ಅನುದಾನದಲ್ಲಿ ಅವುಗಳನ್ನು ದುರಸ್ತಿ ಮಾಡಲಾಗಿತ್ತು. ಮುಂದೆ ಸಂಬಂಧಪಟ್ಟವರ ಗಮನಕ್ಕೆ ತಂದು ಬೀದಿದೀಪಗಳ ದುರಸ್ತಿಗೆ ಅನುದಾನವಿರಿಸುವ ಕಾರ್ಯ ಮಾಡಲಾಗುವುದು. -ಲೀನಾ ಬ್ರಿಟ್ಟೊ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.