61 ವರ್ಷಗಳ ಹಿಂದೆ ಹೈನುಗಾರರು ಒಟ್ಟಾಗಿ ನಿರ್ಮಿಸಿದ ಸಂಘ

ವಿಟ್ಲ ಹಾಲು ಉತ್ಪಾದಕರ ಸಹಕಾರ ಸಂಘ

Team Udayavani, Feb 27, 2020, 4:26 AM IST

JADU-21

ವಿಟ್ಲ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಿದವರು ಉರಿಮಜಲು ವೆಂಕಪ್ಪಯ್ಯ ಮತ್ತು ಹೈನುಗಾರ ಕೃಷಿಕ ಬಂಧುಗಳು. ಆಗ ವಿಟ್ಲಮುಟ್ನೂರು, ವಿಟ್ಲಪಟ್ನೂರು, ಅಳಿಕೆ, ಕನ್ಯಾನ ಗ್ರಾಮಗಳಿಂದಲೂ ಹಾಲು ಆವಕವಿತ್ತು.

ವಿಟ್ಲ: ವಿಟ್ಲ ಹಾಲು ಸರಬರಾಜು ಸಂಘವೆಂಬ ಹೆಸರಲ್ಲಿ ಸ್ವತಂತ್ರವಾಗಿ ಈ ಸಂಘವು 1959ರ ಜೂ. 13ರಂದು ವಿಟ್ಲ ಮತ್ತು ಸುತ್ತಮುತ್ತಲ ಹೈನುಗಾರರಿಂದ ಸ್ಥಾಪನೆ ಯಾಯಿತು. ವಿಟ್ಲ ಪೇಟೆಯಲ್ಲಿ ಬಾಡಿಗೆ ಕಟ್ಟಡ ದಲ್ಲಿ ಹಾಲು ಸಂಗ್ರಹ ಪ್ರಾರಂಭಿಸಲಾಗಿತ್ತು. 1982ರಲ್ಲಿ ಈ ಸಂಘವು ದ.ಕ. ಹಾಲು ಒಕ್ಕೂ ಟದ ವ್ಯಾಪ್ತಿಗೆ ಸೇರಿಕೊಂಡಿತು. ಇಂದಿಗೂ ಅದೇ ಬಾಡಿಗೆ ಕಟ್ಟಡದಲ್ಲಿ ಹಾಲು ಸಂಗ್ರಹಿಸಲಾ ಗುತ್ತಿದೆಯಾದರೂ ಬೊಬ್ಬೆಕೇರಿಯಲ್ಲಿ 7 ಸೆಂಟ್ಸ್‌ ಭೂಮಿ ಖರೀದಿಸಿ, ಸ್ವಂತ ನಿವೇಶನದಲ್ಲಿ 1996 ರಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಇದರಲ್ಲಿ ಗೋದಾಮು, ಮೀಟಿಂಗ್‌ ಹಾಲ್‌ ಇದೆ.

ವಿಟ್ಲ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಿದವರು ಉರಿಮಜಲು ವೆಂಕಪ್ಪಯ್ಯ ಮತ್ತು ಹೈನುಗಾರ ಕೃಷಿಕ ಬಂಧು ಗಳು. ಆಗ ವಿಟ್ಲಮುಟ್ನೂರು, ವಿಟ್ಲಪಟ್ನೂರು, ಅಳಿಕೆ, ಕನ್ಯಾನ ಗ್ರಾಮಗಳಿಂದಲೂ ಹಾಲು ಆವಕವಿತ್ತು. ಹಿಂದೆ ದಿನವೊಂದಕ್ಕೆ 1,000 ಲೀ.ಗೂ ಹೆಚ್ಚು ಹಾಲು ಸಂಗ್ರಹವಾಗುತ್ತಿತ್ತು. ಕ್ರಮೇಣ ಆಯಾಯ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಸ್ಥಾಪನೆ ಯಾದವು. ಇದೀಗ ವಿಟ್ಲಕಸಬಾ ಗ್ರಾಮದಲ್ಲಿ ಈ ಸಂಘವಲ್ಲದೆ, ಬದನಾಜೆ, ಮಂಗಳಪದವು, ಬೊಳಂತಿಮೊಗರು, ಕಡಂಬು ಎಂಬಲ್ಲಿ ಪ್ರತ್ಯೇಕ ಹಾಲು ಸಹಕಾರಿ ಸಂಘಗಳಾಗಿವೆ. ಆದು ದರಿಂದ ಪ್ರಸ್ತುತ ದಿನವೊಂದಕ್ಕೆ 660 ಲೀ. ಹಾಲು ಸಂಗ್ರಹವಾಗುತ್ತಿದೆ.

ಪ್ರಸ್ತುತ 258 ಮಂದಿ ಸದಸ್ಯರು, 12 ಮಂದಿ ನಿರ್ದೇಶಕರಿದ್ದಾರೆ. ಅಧ್ಯಕ್ಷರಾಗಿ ಕೆ.ಐ. ಸುಬ್ರಹ್ಮಣ್ಯ ಭಟ್‌, ಕಾರ್ಯದರ್ಶಿ ಯಾಗಿ ರಾಧಾಕೃಷ್ಣ ನಾಯಕ್‌ ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. ಬಾಲಕೃಷ್ಣ ಅವರು ಪಶುಗಳಿಗೆ ಕೃತಕ ಗರ್ಭಧಾರಣೆ ನಿರ್ವಹಿಸುತ್ತಿದ್ದಾರೆ. ಅಮೃತ ಯೋಜನೆ, ಸಂಘ ಸಂಸ್ಥೆಗಳಿಗೆ ಸಹಾಯಧನ, ನೆರೆ ಪರಿಹಾರ, ಸದಸ್ಯರ ಅನಿರೀಕ್ಷಿತ ಅವಘಡ ಗಳಿಗೆ ರೈತ ಕಲ್ಯಾಣ ಟ್ರಸ್ಟ್‌ ಜತೆಗೂಡಿ ಪರಿಹಾರ ಒದಗಿಸಲಾಗುತ್ತಿದೆ. ಇಂದಿನವರೆಗೆ ಸಂಘವು ಲಾಭ ದಾಖಲಿಸಿದ್ದು, ಸತತವಾಗಿ ಆಡಿಟ್‌ ರಿಪೋರ್ಟ್‌ನಲ್ಲಿ ಎ ವರ್ಗೀಕರಣ ಪಡೆದಿದೆ. ಸದಸ್ಯರಿಗೆ ಪ್ರಸಕ್ತ ಸಾಲಿನಲ್ಲಿ ಶೇ. 25 ಡಿವಿಡೆಂಟ್‌ ವಿತರಿಸಿದೆ.

ಈವರೆಗೆ ಅವಿರೋಧ ಆಯ್ಕೆ
ಸಂಘಕ್ಕೆ ನಿರಂತರ ಹಾಲು ಪೂರೈಸುವವರೇ ಸಂಘದ ನಿರ್ದೇಶಕರಾಗ ಬೇಕೆಂಬ ನಿಯಮವಿರುವುದರಿಂದ ನೈಜ ಹೈನುಗಾರರೇ ಸಂಘದ ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ. ಈ ಸಂಘದ ನಿರ್ದೇಶಕರನ್ನು, ಅಧ್ಯಕ್ಷ-ಉಪಾಧ್ಯಕ್ಷರನ್ನು ಅವಿರೋಧವಾಗಿಯೇ ಆಯ್ಕೆ ಮಾಡಿಕೊಂಡು ಬಂದಿರುವುದು ವಿಶೇಷವಾಗಿದೆ.

ವಿಶೇಷ ಯೋಜನೆಗಳು
ಹೈನುಗಾರರಿಗೆ ವಿಶೇಷ ಯೋಜನೆಗಳನ್ನು ನೀಡಿ, ಸರಕಾರದಿಂದ ಮತ್ತು ಹಾಲು ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಹಾಲು ಪೂರೈಸುವ ಸದಸ್ಯರಿಗೆ ಒದಗಿಸಲಾಗುತ್ತಿದೆ. ಇಂದು ಈ ಭಾಗದ ಅತ್ಯಂತ ಹೆಚ್ಚು ಹಾಲು ಸಂಗ್ರಹ ಮತ್ತು ಮಾರಾಟ ಕೇಂದ್ರವಾಗಿ ಸಮಾಜಕ್ಕೆ ಉಪಯುಕ್ತವಾಗಿದೆ. ಪೇಟೆಯ ಅದೆಷ್ಟೋ ಮಂದಿ ಈ ಸಂಘದ ಹಾಲನ್ನು ಅವಲಂಬಿಸಿದ್ದಾರೆ.

ಗುಣಮಟ್ಟದ ಹಾಲು ಪೂರೈಕೆ, ದ.ಕ. ಹಾಲು ಒಕ್ಕೂಟದವರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಸರಕಾರದಿಂದ, ಒಕ್ಕೂಟದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಸದಸ್ಯರಿಗೆ ತಲುಪಿಸಲಾಗುತ್ತದೆ. ಸಿಬಂದಿಯನ್ನು ಖಾಯಂ ಮಾಡಲಾಗಿದ್ದು ಎಲ್ಲ ಸೌಲಭ್ಯ ಸಿಗುವಂತಾಗಿದೆ.
– ಸೇರಾಜೆ ಕೆ.ಐ. ಸುಬ್ರಹ್ಮಣ್ಯ ಭಟ್‌, ಅಧ್ಯಕ್ಷರು

ಮಾಜಿ ಅಧ್ಯಕ್ಷರು
ಸ್ಥಾಪಕಾಧ್ಯಕ್ಷ ಉರಿಮಜಲು ವೆಂಕಪ್ಪಯ್ಯ, ಲೂಯಿಸ್‌ ಸಿಕ್ವೇರ, ನೂಜಿ ಸುಬ್ರಹ್ಮಣ್ಯ ಭಟ್‌, ಮಂಜುನಾಥ ನಾಯಕ್‌, ಕಾಂತಪ್ಪ ಆಳ್ವ, ಕೂಡೂರು ಕೃಷ್ಣ ಭಟ್‌, ಮೋಹನ ಶೆಟ್ಟಿ ವಿಟ್ಲ, ಆಲಂಗಾರು ಬಾಲಕೃಷ್ಣ ಭಟ್‌, ಪುರುಷೋತ್ತಮ ಭಟ್‌ ಬದನಾಜೆ, ಮೋಹನ ಗೌಡ ಕಾಯರ್‌ಮಾರ್‌,

ಮಾಜಿ ಕಾರ್ಯದರ್ಶಿಗಳು 
ಸ್ಥಾಪಕ ಕಾರ್ಯದರ್ಶಿ ಜನಾರ್ದನ ಭಟ್‌ ಪೆರುವಾಯಿ, ರೋಹಿಣಿ, ಅಲೆಕ್ಸ್‌ ಕ್ರಾಸ್ತಾ, ಸಂಜೀವ ಗೌಡ, ರಾಮ ಭಟ್‌ ಕೆದಿಮಾರು, ಮಾಧವ ಕುದ್ರೆತ್ತಾಯ, ಪುರುಷೋತ್ತಮ ಭಟ್‌.

-   ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.