Sulya: ಗ್ರಾಮೀಣ ಭಾಗದಲ್ಲಿ ಬಸ್‌ ತಂಗುದಾಣದ ಸ್ಥಿತಿ ಶೋಚನೀಯ

ನಿರ್ವಹಣೆಯಿಲ್ಲದೆ ಬಳಕೆಯಾಗದ ತಂಗುದಾಣ

Team Udayavani, Aug 24, 2023, 2:43 PM IST

4-sulya

ಸುಳ್ಯ: ಗ್ರಾಮೀಣ ಭಾಗದಲ್ಲಿ ಸ್ಥಳೀಯ ಗ್ರಾ.ಪಂ. ಅನುದಾನದಲ್ಲಿ ನಿರ್ಮಿಸಲಾದ ಬಸ್‌ ತಂಗುದಾಣಗಳು ಇಂದು ಶೋಚನೀಯ ಸ್ಥಿತಿಯಲ್ಲಿದ್ದು, ನಿರ್ವಹಣೆ, ಕಾಯಕಲ್ಪ ನೀಡದ ಹಿನ್ನೆಲೆ ಜನತೆಯ ಬಳಕೆಯಿಂದ ದೂರವಾಗುತ್ತಿದೆ.

ಸುಳ್ಯ ತಾಲೂಕಿನ ಹಲವೆಡೆ ಇಂತಹ ಬಸ್‌ ತಂಗುದಾಣಗಳು ಕಾಣಬಹುದಾಗಿದೆ. ಅದರಲ್ಲೂ ಸ್ಥಳೀಯ ಸಂಪರ್ಕ ರಸ್ತೆಗಳ ಸಮೀಪ ಇರುವ ಬಸ್‌ ತಂಗುದಾಣಗಳೇ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಿಂದ ದೂರವಿರುವುದು ಕಾಣಬಹುದಾಗಿದೆ.

ಹಳೆಯ ಬಸ್‌ ತಂಗುದಾಣಗಳು

ಶೋಚನೀಯ ಸ್ಥಿತಿಯಲ್ಲಿರುವ ಬಸ್‌ ತಂಗುದಾಣಗಳಲ್ಲಿ ಹೆಚ್ಚಿನವು ದಶಕಗಳ ಹಿಂದೆ ನಿರ್ಮಿಸಲಾದ ಬಸ್‌ ತಂಗುದಾಣಗಳೇ ಆಗಿವೆ ಎನ್ನುತ್ತಾರೆ ಸ್ಥಳೀಯರು. ಅವುಗಳ ನಿರ್ವಹಣೆ ಸರಿಯಾಗಿ ಮಾಡದೆ ಜನರು ತಂಗುದಾಣಗಳನ್ನು ಬಳಸುತ್ತಿಲ್ಲ.

ಕಸದ ರಾಶಿ

ಹಲವೆಡೆ ಬಸ್‌ ತಂಗುದಾಣಗಳು ಉತ್ತಮ ರೀತಿಯಲ್ಲಿ ಇದ್ದು, ಜನರು ಬಳಸುತ್ತಿದ್ದರೂ ಕೆಲವು ಅನಾಗರಿಕ ವರ್ತನೆಯ ಜನರಿಂದ ಬಸ್‌ ತಂಗುದಾಣದಲ್ಲಿ ಕಸದ ರಾಶಿ ಕಾಣಬಹುದಾಗಿದೆ. ಅಲ್ಲದೇ ಮದ್ಯದ ಬಾಟಲಿ, ತಿಂಡಿ-ತಿನಿಸುಗಳ ಪ್ಯಾಕೆಟ್‌ ಮತ್ತಿತರ ವಸ್ತುಗಳು ಬಸ್‌ ತಂಗುದಾಣದಲ್ಲಿ ಅಲ್ಲಲ್ಲಿ ಬಿದ್ದಿದ್ದು, ಪ್ರಯಾಣಿಕರು ತಂಗುದಾಣದ ಪ್ರಯೋಜನ ಪಡೆಯಲು ಮುಜುಗರಪಡಬೇಕಾಗಿದೆ.

ನಿರ್ವಹಣೆಯೇ ಸವಾಲು

ಸ್ಥಳೀಯಾಡಳಿತ ಜನತೆಯ ಬೇಡಿಕೆಯಂತೆ ಅನುದಾನ ಹೊಂದಿಸಿ ಬಸ್‌ ತಂಗುದಾಣ ನಿರ್ಮಿಸಿದರೂ ಅದರ ನಿರ್ವಹಣೆ ಮಾತ್ರ ಸವಾಲಿನ ಕೆಲಸ. ಎಷ್ಟೋ ಕಡೆಗಳಲ್ಲಿ ಬಸ್‌ ತಂಗುದಾಣದ ಮೇಲ್ಛಾವಣಿಗಳು ಬೀಳುವ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿದೆ. ಹಲವೆಡೆ ತಂಗು ದಾಣ ಬಳಕೆಯಿಲ್ಲದೆ ಪಾಳುಬಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ಹೆಚ್ಚಿನ ಕಡೆಗಳಲ್ಲಿ ಬಸ್‌ ತಂಗುದಾಣದ ಬಳಿ ಗಿಡಗಂಟಿಗಳು ಬೆಳೆದು, ಜನರು ಬಳಕೆಗೆ ಹಿಂದೇಟು ಹಾಕುತ್ತಾರೆ.

ಇಂದು ಆಧುನಿಕ ಮಾದರಿಯ(ಫ್ಯಾಬ್ರಿಕೇಶನ್‌ ಆಧಾರಿತ) ಬಸ್‌ ತಂಗುದಾಣಗಳು ನಿರ್ಮಾಣ ಗೊಂಡಿದ್ದರೂ, ಹಳೆಯ ತಂಗುದಾಣಗಳ ಕಾಯಕಲ್ಪಕ್ಕೆ ಸ್ಥಳೀಯಾಡಳಿತ ಮುಂದಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಬಸ್‌ ತಂಗುದಾಣದ ಬಳಿ ವಾಣಿಜ್ಯ ಉದ್ದೇಶದ ಕೊಠಡಿಯನ್ನೂ ತೆರೆಯಲಾಗಿದ್ದರೂ ಅದು ಕೂಡ ಕೆಲವೆಡೆ ಉಪಯೋಗವಾಗುತ್ತಿಲ್ಲ. ಹಲವೆಡೆ ಜನರು ಬಸ್‌ ತಂಗುದಾಣದ ಹೊರ ಭಾಗದಲ್ಲಿ ನಿಂತು ಕಾಯಬೇಕಾದ ಸ್ಥಿತಿ ಇದೆ. ಸರಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಬಸ್‌ ತಂಗುದಾಣಗಳು ವಿವಿಧ ಕಾರಣ ಗಳಿಂದ ಶೋಚನೀಯ ಸ್ಥಿತಿ ಹಾಗೂ ಜನರ ಬಳಕೆಯಿಂದ ದೂರವಿದ್ದು, ಸ್ಥಳೀಯಾಡಳಿತ ಗಮನ ಹರಿಸಿ ಜನ ಬಳಕೆಗೆ ಪೂರಕವಾಗುವಂತೆ ನಿರ್ವಹಣೆ, ಕಾಯಕಲ್ಪ ಮಾಡಬೇಕಾಗಿದೆ. ಶಿಥಿಲಗೊಂಡಿರುವ ತಂಗುದಾಣ ಗಳ ದುರಸ್ತಿ, ಬೇಡಿಕೆ ಇರುವಲ್ಲಿ ತಂಗುದಾಣ ನಿರ್ಮಿಸುವ ಕೆಲಸವೂ ಆಗಲಿ ಎಂಬುದು ಸಾರ್ವಜನಿಕರ ಆಗ್ರಹ.

ಅನುದಾನ ಇರಿಸಲಾಗಿದೆ: ಶಿಥಿಲಗೊಂಡಿರುವ ಬಸ್‌ ತಂಗುದಾಣಗಳ ದುರಸ್ತಿಗೆ ಕ್ರೀಯಾಯೋಜನೆಯಲ್ಲಿ ಅನುದಾನ ಇರಿಸಲಾಗಿದೆ. ಮುಂದೆ ದುರಸ್ತಿ ಕಾರ್ಯ ನಡೆಸಲಾಗುವುದು. -ಪುರುಷೋತ್ತಮ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಹರಿಹರ ಪಲ್ಲತ್ತಡ್ಕ

ಗ್ರಾ.ಪಂ. ಜವಾಬ್ದಾರಿ: ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಬಸ್‌ ತಂಗುದಾಣಗಳ ನಿರ್ವಹಣೆ ಜವಾ ಬ್ದಾರಿ ಗ್ರಾ.ಪಂ.ಗಳಾಗಿದೆ. ಅವರೇ ಅದರ ನಿರ್ವಹಣೆ ಮಾಡಬೇಕು. –ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ ತಾ.ಪಂ. ಸುಳ್ಯ

„ದಯಾನಂದ ಕಲ್ನಾರ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.