ಮುಳಿಯ: ಗೋಪೂಜೆ ಸಂಪನ್ನ
Team Udayavani, Nov 9, 2018, 2:45 PM IST
ಅಳಿಕೆ: ಅಳಿಕೆ ಗ್ರಾಮದ ಮುಳಿಯ ಅಮೃತಧಾರಾ ಗೋಲೋಕದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ನಿರ್ದೇಶನದಂತೆ ಗೋಪೂಜೆ ನೆರವೇರಿತು. ಮಂಗಳೂರು ಹವ್ಯಕ ಮಂಡಲ ವೈದಿಕ ಪ್ರಧಾನ ವೇ| ಮೂ| ಅಮೈ ಶಿವಪ್ರಸಾದ ಭಟ್ಟರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.
ಜೋತಿಷಿ ಕೆ.ವಿ. ಗಣೇಶ ಭಟ್ ಮುಳಿಯ, ಮುಳಿಯ ನಾರಾಯಣ ಭಟ್, ಗುರಿಕ್ಕಾರ ಮುಳಿಯ ರಾಮಚಂದ್ರ ಭಟ್, ಸಮಿತಿಯ ಕಾರ್ಯದರ್ಶಿ ನಾರಾಯಣ ಭಟ್ ದೇಲಂತಬೆಟ್ಟು, ಕೋಶಾಧಿಕಾರಿ ಕಟ್ಟೆ ಕೃಷ್ಣಮೂರ್ತಿ, ಉಸ್ತುವಾರಿ ಸುರೇಶ ಭಟ್ ಶಾಂತಿಮೂಲೆ, ವಿಭಾಗ ಪ್ರಮುಖರಾದ ಸಚ್ಚಿದಾನಂದ ಶಾಸ್ತ್ರಿ, ಅಂಗ್ರಿ ತಿರುಮಲೇಶ, ಕೃಷ್ಣಮೂರ್ತಿ ತಾಳಿಪಡ್ಪು, ಗಣರಾಜ ಚಾಳಿತ್ತಡ್ಕ, ಶಿವಶಂಕರ ಭಟ್ ತಾಳಿಪಡ್ಪು, ಕನ್ಯಾನ ಹವ್ಯಕ ವಲಯ ಅಧ್ಯಕ್ಷ ಸುಬ್ಬರಾಂ ಪಿಲಿಂಗುಳಿ, ಪ್ರಧಾನ ಕಾರ್ಯದರ್ಶಿ ರವಿಶಂಕರ ಪನೆಯಡ್ಕ, ಕೇಪು ಹವ್ಯಕ ವಲಯ ಅಧ್ಯಕ್ಷ ಜನಾರ್ದನ ಭಟ್ ಅಮೈ, ಪ್ರ.ಕಾರ್ಯದರ್ಶಿ ಮೋಹನ ಮೈರ, ಬಾಯಾರು ಹವ್ಯಕ ವಲಯ ದಿಗ್ದರ್ಶಕ ಉಳುವಾನ ರಾಮಚಂದ್ರ ಭಟ್, ವಿಟ್ಲ ಹವ್ಯಕ ವಲಯ ಉಪಾಧ್ಯಕ್ಷ ಕೆ.ಗೋವಿಂದ ಭಟ್ ಕಜೆಹಿತ್ತಿಲು, ಗಣೇಶ ಭಟ್ ನೆಗಳಗುಳಿ, ಪ್ರಸಾದ್ ಮುಳಿಯ, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.