
ಅವೈಜ್ಞಾನಿಕ ರಸ್ತೆಯಲ್ಲಿ ಮತ್ತೆ ಅವಘಡ; ಪೆರಂಪಳ್ಳಿ ತಿರುವಿನಲ್ಲಿ ಮಗುಚಿಬಿದ್ದ 2 ಕಾರು
Team Udayavani, Nov 28, 2022, 9:00 AM IST

ಉಡುಪಿ: ಪೆರಂಪಳ್ಳಿ ರಸ್ತೆಯ ಸುಂದರಿಗೇಟ್ನ ಅವೈಜ್ಞಾನಿಕ ತಿರುವಿನಲ್ಲಿ ವಾರದ ಅಂತರದಲ್ಲಿ ಮತ್ತೂಂದು ಅವಘಡ ಸಂಭವಿಸಿದೆ.
ಶನಿವಾರ ಮಣಿಪಾಲದಿಂದ ಅಂಬಾಗಿಲುವಿನತ್ತ ತೆರಳುತ್ತಿದ್ದ ಹುಂಡೈ ಐ20 ಕಾರು ತಿರುವಿನಲ್ಲಿ ಪಲ್ಟಿಯಾಗಿ ಬಿತ್ತು. ಅದರಲ್ಲಿದ್ದ 6 ಮಂದಿ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಲವೇ ಗಂಟೆಗಳ ಅಂತರದಲ್ಲಿ ಮಹೀಂದ್ರ ಎಕ್ಸ್ಯುವಿ ಕಾರು ನಿಯಂತ್ರಣ ಕಳೆದುಕೊಂಡು ತಿರುವಿನಲ್ಲಿ ಪಲ್ಟಿಯಾಗಿ ಆ ಕಾರಿನ ಮೇಲೆಯೇ ಬಿತ್ತು. ಅದರಲ್ಲಿದ್ದ ಯುವಕ ಹಾಗೂ ಯುವತಿ ಅಪಾಯದಿಂದ ಪಾರಾಗಿದ್ದಾರೆ.
14ನೇ ಅಪಘಾತ
ಇಲ್ಲಿ ಈಗಾಗಲೇ 12ರಿಂದ 14 ಅಪಘಾತಗಳು ನಡೆದಿವೆ. ಅ.17, 20, 26 ಹೀಗೆ ಸಾಲು ಸಾಲು ಅಪಘಾತ ನಡೆಯುತ್ತಿದ್ದರೂ ಸಂಬಂಧಪಟ್ಟವರು ಮೌನ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ ನಡೆದ ನಡೆದ ಅಪಘಾತದಲ್ಲಿ ಒಂದು ಕಾರು ಬೆಂಗಳೂರು ನೋಂದಣಿಯದ್ದಾದರೆ ಮತ್ತೂಂದು ತಮಿಳುನಾಡು ನೋಂದಣಿ ಹೊಂದಿದೆ.
ತಪ್ಪಿದ ಭಾರೀ ಅವಘಡ
ಅಪಘಾತಕ್ಕೀಡಾದ ಕಾರುಗಳೆರಡೂ ಸುಂದರಿಗೇಟ್ ಬಳಿಯ ಶಯೋಶ್ ಅವರ ಮನೆಯ ಕಾಂಪೌಂಡ್ನ ಒಳಗೆ ಹೋಗಿಬಿದ್ದಿದೆ. ಈ ಮನೆಯವರು ಯಾವಾಗಲು ಇದೇ ಸ್ಥಳದಲ್ಲಿ ಸಾಮಾನ್ಯವಾಗಿ ಕುಳಿತುಕೊಳ್ಳುತ್ತಾರೆ. ಆದರೆ ಘಟನೆ ನಡೆದ ಸಂದರ್ಭ ಯಾರೂ ಇಲ್ಲದ ಕಾರಣ ಭಾರೀ ಅವಘಡ ತಪ್ಪಿದಂತಾಗಿದೆ. ಇಲ್ಲಿ ಶಾಶ್ವತ ಪರಿಹಾರ ಕಲ್ಪಿಸಿದರಷ್ಟೇ ಸಮಸ್ಯೆ ನಿವಾರಣೆ ಸಾಧ್ಯ.
ಶೀಘ್ರ ಅಳವಡಿಕೆ: ಪೆರಂಪಳ್ಳಿಯ ಸುಂದರಿಗೇಟ್ ಬಳಿ ಸೂಚನ ಫಲಕ ಹಾಗೂ ಉಬ್ಬುತಗ್ಗು ಅಳವಡಿಕೆ ಮಾಡುವಂತೆ ಈಗಾಗಲೇ ಅಸಿಸ್ಟೆಂಟ್ ಎಂಜಿನಿಯರ್ ಅವರಿಗೆ ತಿಳಿಸಲಾಗಿದೆ. ಇದನ್ನು ಅಳವಡಿಕೆ ಮಾಡಿದಲ್ಲಿ ತಕ್ಕಮಟ್ಟಿಗೆ ಸಮಸ್ಯೆ ಪರಿಹಾರ ಕಾಣಲಿದೆ. –ಜಗದೀಶ್ ಭಟ್, ಎಇಇ ಲೋಕೋಪಯೋಗಿ ಇಲಾಖೆ
ವಾರದೊಳಗೆ ಕಾಮಗಾರಿ: ಇಲ್ಲಿನ ಅಪಾಯಕಾರಿ ತಿರುವಿನ ಬಗ್ಗೆ ಮಾಹಿತಿ ಬಂದಿದೆ. ರ್ಯಾಂಬಲ್ ಸ್ಟ್ರಿಪ್ ಮಾದರಿಯ ಹಂಪ್ಸ್ ಗಳನ್ನು ತಿರುವು ರಸ್ತೆಯ ಎರಡೂ ಬದಿಯಲ್ಲಿ ಅಳವಡಿಸಲಾಗುವುದು. ಹಾಗೆಯೇ ಸೂಚನ ಫಲಕಗಳನ್ನೂ ಅಳವಡಿಸಲಾಗುವುದು. ಈ ಎಲ್ಲ ಕಾಮಗಾರಿಗಳನ್ನು ವಾರದೊಳಗೆ ಪೂರ್ಣಗೊಳಿಸಲಾಗುವುದು. –ಗಿರೀಶ್, ಅಸಿಸ್ಟೆಂಟ್ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

“ಮಗುವನ್ನು ಉಳಿಸಲು ಆಗುವುದಿಲ್ಲ.. ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡ ದಂಪತಿ

ಬಂಡಾಯಕ್ಕೇ ಸದ್ಯ ಬಿಸಿ: ಭಿನ್ನ ಧ್ವನಿಗಳ ಮೆತ್ತಗಾಗಿಸಲು ಅಖಾಡಕ್ಕೆ ಇಳಿದ ಬಿಜೆಪಿ ವರಿಷ್ಠರು

ಎಲ್ಲ ಕಾಲೇಜುಗಳಲ್ಲೂ ರಾಯಣ್ಣ, ನೇತಾಜಿ ಪ್ರತಿಮೆ ಸ್ಥಾಪನೆಗೆ ಆದೇಶ: ಸಿಎಂ ಬೊಮ್ಮಾಯಿ

ನಾರೀಶಕ್ತಿಗೆ ಜೈಕಾರ: ಮಿಲಿಟರಿಯಲ್ಲಿ ನಾರೀಶಕ್ತಿ, ಸ್ತಬ್ಧಚಿತ್ರಗಳಲ್ಲೂ “ನಾರಿ’

ಅ-19 ಮಹಿಳಾ ಟಿ20 ವಿಶ್ವಕಪ್: ಇಂದು ಭಾರತ-ನ್ಯೂಜಿಲೆಂಡ್ ಉಪಾಂತ್ಯ