ಬಸವನ ಹುಳು, ಶಂಖದ ಹುಳುವಿನ ಬಾಧೆಗಿದೆ ಮದ್ದು
Team Udayavani, Jul 5, 2022, 1:05 PM IST
ಬ್ರಹ್ಮಾವರ: ಬಸವನ ಹುಳು ಮತ್ತು ಶಂಖದ ಹುಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ತೇವಾಂಶ ಅಧಿಕವಿರುವಲ್ಲಿ ಕಂಡು ಬರುವ ಜೀವಿಯಾಗಿದ್ದು, ಸಂಧ್ಯಾಕಾಲ ಹಾಗೂ ರಾತ್ರಿಯ ಸಮಯದಲ್ಲಿ ಸಂಚಾರ ಅಧಿಕವಾಗಿರುತ್ತದೆ.
ಇದು ಬೆಳೆಗಳಿಗೆ ವಿವಿಧ ರೀತಿಯಲ್ಲಿ ಹಾನಿಯುಂಟು ಮಾಡುತ್ತಿದ್ದು, ಎಲೆ, ಕಾಂಡ, ಹಣ್ಣು, ಬೇರು ಹಾಗೂ ಹೂವುಗಳನ್ನು ತಿನ್ನುವುದರಿಂದ ಇವುಗಳ ಸಮಗ್ರ ಹತೋಟಿ ಅನಿವಾರ್ಯ.
ಸಾಮಾನ್ಯವಾಗಿ ಈ ಹುಳುಗಳು ದ್ವಿಲಿಂಗಗಳಾಗಿದ್ದು ಸರಿಸುಮಾರು 50-200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಒಂದು ವಾರದೊಳಗೆ ಮರಿಹುಳುಗಳು ಹೊರ ಬರುತ್ತವೆ. ಪ್ರೌಢಾವಸ್ಥೆಗೆ ಬರಲು ಒಂದು ವರ್ಷ ಬೇಕಾಗಿದ್ದು, ಜೀವಿತಾವಧಿ 3-5 ವರ್ಷಗಳಾಗಿರುತ್ತದೆ. ಮಳೆಗಾಲ ಮುಗಿಯುವ ಹಂತದಲ್ಲಿ ಮರಿಗಳು ಹೊರ ಬಂದರೆ ತೇವಾಂಶದ ಕೊರತೆ ಯಿಂದಾಗಿ ಸುಪ್ತಾವಸ್ಥೆಗೆ ಹೋಗು ವುದರಿಂದ ಇವುಗಳ ಬೆಳವಣಿಗೆ ನಿಧಾನವಾಗುತ್ತದೆ.
ಹತೋಟಿ ಕ್ರಮಗಳು
ಹುಳುಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವನ್ನು ಒದಗಿಸದೇ ತೋಟಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಶುಚಿಯಾಗಿಡುವುದು. ತೋಟ ಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಗುಂಪು ಹಾಕದೇ ಹುಳುಗಳಿಗೆ ಅಡಗಿಕೊಳ್ಳಲು ಸ್ಥಳಗಳು ಸಿಗದಂತೆ ಮಾಡುವುದು ಮುಖ್ಯ.
ಅಡಿಕೆ ಹಾಳೆಗಳನ್ನು ಒಟ್ಟು ಮಾಡಿ ರಾಶಿ ಹಾಕಿ ನೆನೆಯಿಸುವುದರಿಂದ ಅದರ ಆಶ್ರಯವನ್ನು ಪಡೆಯಲು ಬರುವ ಹುಳುಗಳನ್ನು ಆಯ್ದು ನಾಶಪಡಿಸುವುದು ಅಥವಾ 25-30 ಗ್ರಾಂ ಬ್ಲೀಚಿಂಗ್ ಪುಡಿ/ಸುಣ್ಣದ ಪುಡಿಯನ್ನು ಧೂಳೀಕರಿಸಿ ಹುಳುಗಳನ್ನು ನಾಶಮಾಡಬಹುದಾಗಿದೆ.
ಅತೀ ಹೆಚ್ಚು ಬಾಧೆಯಿರುವ ತೋಟಗಳಲ್ಲಿ ಶೇ 2.5ರ ಮೇಟಾಲ್ಡಿಹೈಡ್ ತುಣುಕುಗಳನ್ನು 20 ಗ್ರಾಂನಂತೆ, ಸಂಜೆ 6 ಗಂಟೆಯ ಅನಂತರ ತೆಂಗಿನ ಚಿಪ್ಪಿನಲ್ಲಿ ಹಾಕಿ ಅಲ್ಲಲ್ಲಿ ಇಡಬೇಕು. ಹುಳುಗಳು ಪಾಷಾಣಕ್ಕೆ ಆಕರ್ಷಣೆಗೊಂಡು, ಅವುಗಳನ್ನು ತಿಂದು ಸಾವನ್ನಪ್ಪುತ್ತವೆ.
ವಿಷ ಪಾಷಾಣದ ತಯಾರಿ
ಗೋಧಿ ಅಥವಾ ಅಕ್ಕಿಯ ತೌಡು (10 ಕಿ.ಗ್ರಾಂ), ಬೆಲ್ಲ (1.5 ಕಿ.ಗ್ರಾಂ) ಮತ್ತು ತಕ್ಕ ಮಟ್ಟಿಗೆ ನೀರನ್ನು (3-4 ಲೀ.) ಬೆರೆಸಿ, 36 ಗಂಟೆಗಳ ಕಾಲ ಬಿಡಬೇಕು. ಅನಂತರ ಮಿಥೋಮಿಲ್ 40 ಎಸ್.ಪಿ. (150 ಗ್ರಾಂ) ಅಥವಾ ಕ್ಲೋರೋಪೈರಿಫಾಸ್ 20 ಇ.ಸಿ. (100 ಮಿ.ಲೀ.) ಕೀಟನಾಶಕ ವನ್ನು ಚೆನ್ನಾಗಿ ಮಿಶ್ರಣ ಮಾಡಿ ಸಂಜೆ 6 ಗಂಟೆಯ ಅನಂತರ ಹೊಲದ ಸುತ್ತ ಅಂಚಿನಲ್ಲಿ ಅಥವಾ ಸಾಲುಗಳಲ್ಲಿ ಚೆಲ್ಲಿ ಹುಳುಗಳನ್ನು ನಾಶಪಡಿಸಬಹುದಾಗಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
MUST WATCH
ಹೊಸ ಸೇರ್ಪಡೆ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ